ಬಿಜೆಪಿ ಜಯಭೇರಿ: ಸುಬ್ರಮಣ್ಯನ್ ಗೆ ಶುರುವಾಯ್ತು ರಾಮಮಂದಿರದ ಕನಸು
ಉತ್ತರ ಪ್ರದೇಶದಲ್ಲಿ ಬಿಜೆಪಿಯು 15 ವರ್ಷಗಳ ನಂತರ ಅಧಿಕಾರ ಗದ್ದುಗೆಯೇರುತ್ತಿರುವ ಹಿನ್ನೆಲೆಯಲ್ಲಿ ರಾಮಮಂದಿರ ಜಪ ಆರಂಭಿಸಿದ ಸುಬ್ರಮಣ್ಯನ್ ಸ್ವಾಮಿ.
ನವದೆಹಲಿ, ಮಾರ್ಚ್ 11: ರಾಮಮಂದಿರ ಪ್ರಕರಣದ ವಿಚಾರಣೆಯು ತ್ವರಿತಗತಿಯಲ್ಲಿ ಸಾಗಬೇಕೆಂದು ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಇದೇ ತಿಂಗಳ 21ರಂದು (ಮಾ. 21ರಂದು) ತಾವು ಮನವಿಯನ್ನು ಸಲ್ಲಿಸುವುದಾಗಿ ಸುಬ್ರಮಣ್ಯನ್ ಸ್ಮಾಮಿ ಹೇಳಿದ್ದಾರೆ.
ಅಲ್ಲದೆ, ಇನ್ನು ಮುಂದೆ ರಾಮ ಮಂದಿರದ ವಿಚಾರದಲ್ಲಿ ಉತ್ತರ ಪ್ರದೇಶ ಸರ್ಕಾರದಿಂದ ಯಾವುದೇ ಅಪಸ್ವರ ಬರುವುದಿಲ್ಲವೆಂದು ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.
On March 21st I will go before SC and ask for early day to day hearing of the Ram Mandir case. I expect now UP govt will not oppose me.
— Subramanian Swamy (@Swamy39) March 11, 2017
| ಪಂಜಾಬ್ | ಉತ್ತರಪ್ರದೇಶ | ಉತ್ತರಾಖಂಡ್" title="ಗೋವಾ | ಮಣಿಪುರ | ಪಂಜಾಬ್ | ಉತ್ತರಪ್ರದೇಶ | ಉತ್ತರಾಖಂಡ್" />ಗೋವಾ | ಮಣಿಪುರ | ಪಂಜಾಬ್ | ಉತ್ತರಪ್ರದೇಶ | ಉತ್ತರಾಖಂಡ್
ಶನಿವಾರ ಹೊರಬಿದ್ದ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯು 312 ಕ್ಷೇತ್ರಗಳಲ್ಲಿ ಜಯ ಸಾಧಿಸುವ ಮೂಲಕ ಅಧಿಕಾರ ಗದ್ದುಗೆಯೇರುವ ಸ್ಪಷ್ಟತೆ ಸಿಕ್ಕಕೂಡಲೇ ಸುಬ್ರಮಣ್ಯಂ ಸ್ವಾಮಿಯವರಿಂದ ಈ ಟ್ವೀಟ್ ಬಂದಿದೆ.