ಜಾರ್ಖಂಡ್ : ದೇವಾಲಯದ ಬಳಿ ಕಾಲ್ತುಳಿತ, 11 ಸಾವು
ನವದೆಹಲಿ, ಆಗಸ್ಟ್ 10 : ಜಾರ್ಖಂಡ್ನ ದೇವಗಢದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿದ್ದು, 50ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ದುರ್ಗಾಮಾತೆ ದೇವಾಲಯದ ಬಳಿ ಸೋಮವಾರ ಮುಂಜಾನೆ ಈ ಘಟನೆ ಸಂಭವಿಸಿದೆ.
ದೇವಗಡದ
ಬೇಲಾಬಾಗನ್
ದುರ್ಗಾಮಾತೆ
ದೇವಾಲಯದ
ಬಳಿ
ಸೋಮವಾರ
ಮುಂಜಾನೆ
5.45ರ
ಸುಮಾರಿಗೆ
ಈ
ಘಟನೆ
ನಡೆದಿದೆ.
ದುರ್ಗಾಮಾತೆ
ಪೂಜೆಗಾಗಿ
ಸಾವಿರಾರು
ಭಕ್ತರು
ಆಗಮಿಸಿದ್ದರು.
ಈ
ಸಂದರ್ಭದಲ್ಲಿ
ಕಾಲ್ತುಳಿತ
ಉಂಟಾಗಿದ್ದು,
11
ಜನರು
ಮೃತಪಟ್ಟಿದ್ದಾರೆ.
[ಪಾಟ್ನಾ
ಗಾಂಧಿ
ಮೈದಾನದ
ಕಾಲ್ತುಳಿತದ
ಚಿತ್ರಗಳು]
ಕಾಲ್ತುಳಿತದಲ್ಲಿ 50ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿವರ್ಷ ಆಗಸ್ಟ್ ತಿಂಗಳಿನಲ್ಲಿ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಆಗಮಿಸುತ್ತಾರೆ. ಸೋಮವಾರ ಭಕ್ತರ ಸಂಖ್ಯೆ ಹೆಚ್ಚಾಗಿರುತ್ತದೆ. ಕಳೆದ ಸೋಮವಾರ ಒಂದು ಲಕ್ಷಕ್ಕೂ ಅಧಿಕ ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು ಎಂದು ಜಿಲ್ಲಾಡಳಿತ ಹೇಳಿದೆ. [ಮಧ್ಯಪ್ರದೇಶ ಕಾಲ್ತುಳಿತದ ದುರಂತದ ಚಿತ್ರಗಳು]
ಭಕ್ತರ ಅನುಕೂಲಕ್ಕಾಗಿ ಜಿಲ್ಲಾಡಳಿತ ಸಕಲ ವ್ಯವಸ್ಥೆಗಳನ್ನು ಮಾಡಿತ್ತು. ಭಾನುವಾರ ದೇವಾಲಯದ ಆಡಳಿತ ಮಂಡಳಿ ಜೊತೆ ಸಭೆ ನಡೆಸಿ ವ್ಯವಸ್ಥೆಯ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಆದರೆ, ಇಂದು ಮುಂಜಾನೆ ಸರದಿ ಸಾಲಿನಲ್ಲಿ ನಿಲ್ಲುವ ವಿಚಾರಕ್ಕೆ ಗೊಂದಲ ಉಂಟಾಗಿ ಕಾಲ್ತುಳಿತ ಸಂಭವಿಸಿದೆ ಎಂದು ತಿಳಿದುಬಂದಿದೆ.