ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೃತ್ ಸರ್, ಜಮ್ಮು, ಶ್ರೀನಗರ್, ಲೇಹ್ ಏರ್ ಪೋರ್ಟ್ 3 ತಿಂಗಳು ಬಂದ್

|
Google Oneindia Kannada News

ನವದೆಹಲಿ, ಫೆಬ್ರವರಿ 27: ಪಾಕಿಸ್ತಾನದ ಗಡಿ ಪ್ರದೇಶಕ್ಕೆ ಹತ್ತಿರ ಇರುವ ಅಮೃತ್ ಸರ್, ಜಮ್ಮು, ಶ್ರೀನಗರ್ ಮತ್ತು ಲೇಹ್ ನ ವಿಮಾನ ನಿಲ್ದಾಣಗಳನ್ನು ಇನ್ನು ಮೂರು ತಿಂಗಳ ಕಾಲ ಬಂದ್ ಮಾಡಲಾಗುವುದು. ಬುಧವಾರ ಬೆಳಗ್ಗೆ ಜಮ್ಮು-ಕಾಶ್ಮೀರದ ಬುಡ್ಗಾಂನಲ್ಲಿ ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್ ದುರಂತ ಆದ ನಂತರ ಈ ತೀರ್ಮಾನಕ್ಕೆ ಬರಲಾಗಿದೆ.

ಈ ದುರ್ಘಟನೆಯಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ. ಗಡಿ ನಿಯಂತ್ರಣ ರೇಖೆ ದಾಟಿ ಹೋದ ಭಾರತೀಯ ವಾಯುಸೇನೆ ಯುದ್ಧ ವಿಮಾನಗಳು, ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ ಒಂದು ದಿನದ ನಂತರ ಪಾಕಿಸ್ತಾನದಿಂದ ಭಾರೀ ಶೆಲ್ಲಿಂಗ್ ಹಾಗೂ ಗುಂಡಿನ ಚಕಮಕಿ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ದುರಂತ ಸಂಭವಿಸಿತ್ತು.

ವೈಮಾನಿಕ ದಾಳಿ ಭೀತಿ, ಪಾಕಿಸ್ತಾನದ ವಿ. ನಿಲ್ದಾಣಗಳು ಬಂದ್ವೈಮಾನಿಕ ದಾಳಿ ಭೀತಿ, ಪಾಕಿಸ್ತಾನದ ವಿ. ನಿಲ್ದಾಣಗಳು ಬಂದ್

ಮಂಗಳವಾರ ಪಾಕಿಸ್ತಾನದ ನೆಲದಲ್ಲಿ ಭಾರತ ನಡೆಸಿದ ಕಾರ್ಯಾಚರಣೆಗೆ ಪ್ರತಿಯಾಗಿ ಪಾಕಿಸ್ತಾನ ಕ್ರಮಕ್ಕೆ ಮುಂದಾಗಬಹುದು ಎಂಬ ಮುನ್ನೆಚ್ಚರಿಕೆ ಕ್ರಮವಾಗಿ ಈ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ವಾಯುಪ್ರದೇಶದ ನಿರ್ಬಂಧದ ಕಾರಣಕ್ಕೆ ಅಮೃತ್ ಸರ್, ಶ್ರೀನಗರ್, ಚಂಡೀಗಢ ಹಾಗೂ ಜಮ್ಮುವಿಗೆ ತೆರಳಬೇಕಿದ್ದ ವಿಮಾನವನ್ನು ತಡೆಯಲಾಗಿದೆ ಎಂದು ಏರ್ ವಿಸ್ತಾರಾ ಟ್ಬೀಟ್ ಮಾಡಿದೆ.

Srinagar, Jammu, Amritsar airports shut till May

ಯಲಹಂಕ ವಾಯುನೆಲೆಯಿಂದ ಗ್ವಾಲಿಯರ್‌ಗೆ 53 ಏರ್‌ಜೆಟ್‌ಗಳ ರವಾನೆ ಯಲಹಂಕ ವಾಯುನೆಲೆಯಿಂದ ಗ್ವಾಲಿಯರ್‌ಗೆ 53 ಏರ್‌ಜೆಟ್‌ಗಳ ರವಾನೆ

ಜಮ್ಮು ಮತ್ತು ಕಾಶ್ಮೀರದ ಪೂಂಛ್ ಮತ್ತು ರಜೌರಿ ವಲಯದಲ್ಲಿ ಪಾಕಿಸ್ತಾನಕ್ಕೆ ಸೇರಿದ ಯುದ್ಧ ವಿಮಾನಗಳು ಭಾರತೀಯ ವಾಯುಪ್ರದೇಶದ ಸೀಮೆ ಉಲ್ಲಂಘನೆ ಮಾಡಿದೆ.

English summary
Airports in Amritsar, Jammu, Srinagar and Leh - close to the border with Pakistan - have been shut for three months. The move comes after an Indian Air Force (IAF) chopper crashed in Jammu and Kashmir's Budgam this morning. Two bodies have been found, said the police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X