ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರ! ಟಿಡಿಪಿ ಸಂಸದನ ಅಸಂಬದ್ಧ ಹೇಳಿಕೆ!
ರಾಜಮುಂಡ್ರಿ, ಮಾರ್ಚ್ 17: ನಮ್ಮನ್ನು ನಿರ್ಲಕ್ಷ್ಯಿಸಿದರೆ ದಕ್ಷಿಣ ಭಾರತ ಪ್ರ್ಯೇಕ ರಾಷ್ಟ್ರವಾಗುವಂತೆ ಮಾಡುತ್ತೇವೆ ಎಂಬ ಟಿಡಿಪಿ(ತೆಲುಗು ದೇಶಂ ಪಕ್ಷ) ಸಂಸದ ಮುರಳೀ ಮೋಹನ್ ಅವರ ವಿವಾದಾತ್ಮಕ ಹೇಳಿಕೆ ಈಗ ಭಾರೀ ಸದ್ದು ಮಾಡುತ್ತಿದೆ.
ಫೆಬ್ರವರಿ 12 ರಂದು ರಾಜಮುಂಡ್ರಿ ಎಂಬಲ್ಲಿ ಪತ್ರಿಕಾ ಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ಮುರಳೀ ಮೋಹನ್ ಈ ರೀತಿ ಹೇಳಿದ್ದರು.
'We 5 southern states of India will take firm decision to form seperate Country' says TDP MP Murali mohan from Andhra...@ncbn ru listening do u endorse this, if not then expel him... shame pic.twitter.com/4IlqYkTmVm
— Karunasagar Adv ⚖ (@karunasagarllb) February 14, 2018
"ಕೇಂದ್ರಕ್ಕೆ ಹೆಚ್ಚು ಕೊಡುಗೆ ನೀಡುತ್ತಿರುವ ರಾಜ್ಯಗಳು ದಕ್ಷಿಣ ಭಾರತದ ರಾಜ್ಯಗಳಾಗಿದ್ದರೂ, ಕೇಂದ್ರ ಸರ್ಕಾರ ನಮ್ಮನ್ನು ಮಲತಾಯಿ ಮಕ್ಕಳಂತೆಯೇ ನೋಡುತ್ತಿದೆ. ಎಲ್ಲ ವಿಚಾರದಲ್ಲೂ ನಮ್ಮನ್ನು ಅಮಾನವೀಯವಾಗಿ ನೋಡಲಾಗುತ್ತದೆ. ಕೇಂದ್ರ ಸರ್ಕಾರದ ಈ ಧೋರಣೆ ಬದಲಾಗದಿದ್ದಲ್ಲಿ ನಾವು ಹೊಸ ರಾಷ್ಟ್ರವನ್ನು ಕಟ್ಟಲು ಸಿದ್ಧವಾಗಬೇಕಾಗುತ್ತದೆ" ಎಂದು ಅವರು ಹೇಳಿದ್ದರು.