ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬ್ರಹ್ಮಪುತ್ರಾ ಉಪನದಿಗೆ ಉರುಳಿದ ಸೇನಾ ಜೀಪ್: 3 ಮಂದಿ ಸಾವು
ಗುವಾಹಟಿ, ಏಪ್ರಿಲ್ 23: 18 ಸೇನಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಸೇನಾ ಜೀಪ್ ವೊಂದು ಅರುಣಾಚಲಪ್ರದೇಶ ಹಾಗೂ ಅಸ್ಸಾಮ್ ರಾಜ್ಯಗಳ ಗಡಿಭಾಗದ ಬ್ರಹ್ಮಪುತ್ರ ಉಪನದಿಯಲ್ಲಿ ಉರುಳಿಬಿದ್ದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ದುರ್ಘಟನೆಯಲ್ಲಿ ಓರ್ವ ಯೋಧ ಕರ್ನಾಟಕದವರಾಗಿದ್ದು, ವಿಜಯಪುರದ ಬಸವನಬಾಗೇವಾಡಿ ತಾಲೂಕಿನ ರೋಣಿಹಾಳ ಗ್ರಾಮದ ಯೋಧ ಪರಶುರಾಮ ಖ್ಯಾತನ್ನವರ್(32) ಸಾವನ್ನಪ್ಪಿದ ದುರ್ದೈವಿ. ಕಳೆದ 14 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಪತ್ನಿ, ಪುತ್ರಿ, ಪುತ್ರ, ತಂದೆ-ತಾಯಿ ಮತ್ತು ಸೋದರ ಸೋದರಿಯರನ್ನು ಅಗಲಿದ್ದಾರೆ.
ಘಟನೆಯಲ್ಲಿ ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಬಹುದೆಂದು ಅಂದಾಜಿಸಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಇನ್ನಿಬ್ಬರು ಮೃತ ಸೈನಿಕರ ಗುರುತು ಪತ್ತೆಯಾಗಿಲ್ಲ.
Comments
soldier accident arunachal pradesh assam indian army brahmaputra ಸೈನಿಕ ಅಪಘಾತ ಅರುಣಾಚಲ ಪ್ರದೇಶ ಅಸ್ಸಾಂ ಭಾರತೀಯ ಸೇನೆ
English summary
3 people died after a jeep fell into a tributary of the rever Brahmaputra in the border of Arunachal Pradesh and Assam. More than 18 soldiers were travelling in the jeep. More details awaited.
Story first published: Monday, April 23, 2018, 10:31 [IST]