ಅಪನಗದೀಕರಣದಿಂದ ನಕಲಿ ನೋಟುಗಳ ಹಾವಳಿಗೆ ಭರ್ತಿ ಪೆಟ್ಟು: ಇಲ್ಲಿದೆ ಲೆಕ್ಕಾಚಾರ
ಅಪನಗದೀಕರಣದ ನಂತರ ಭಾರತದ ನಕಲಿ ನೋಟುಗಳ ಕಳ್ಳಸಾಗಣೆ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ. ನಕಲಿ ನೋಟುಗಳ ಗುಣಮಟ್ಟ ಕೂಡ ಅಂಥ ಚೆನ್ನಾಗಿಲ್ಲವಾದ್ದರಿಂದ ಅವುಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಈ ರೀತಿ ನಕಲಿ ನೋಟುಗಳನ್ನು ದೇಶದೊಳಕ್ಕೆ ತರಲು ಹೆಚ್ಚಿನ ಭಾಗ ಬಾಂಗ್ಲಾದೇಶದ ಪ್ರದೇಶವನ್ನೇ ಬಳಸಲಾಗುತ್ತಿದೆ. ಈ ವರ್ಷ ಇಲ್ಲಿಯ ತನಕ ಹನ್ನೊಂದು ಲಕ್ಷ ರುಪಾಯಿ ಮಾತ್ರ ವಶಪಡಿಸಿಕೊಳ್ಳಲಾಗಿದೆ.
-ದೇಶದಲ್ಲಿ ಅಪನಗದೀಕರಣದ ನಂತರ ಆಗಿರುವ ಬದಲಾವಣೆಯನ್ನು ಬಿಎಸ್ ಎಫ್ ನ ಡಿಜಿ ಕೆ.ಕೆ.ಶರ್ಮಾ ವಿವರಿಸುವುದು ಹೀಗೆ. ದೇಶದಲ್ಲಿ ಈಗಾಗಲೇ ಇರುವ ರೋಹಿಂಗ್ಯಾ ಮುಸ್ಲಿಮರು ಕೆಲ ಪ್ರದೇಶಗಳಲ್ಲಿ ಭಾರೀ ಒತ್ತಡದಲ್ಲಿದ್ದಾರೆ. ಅವರ ಪಾಲಿಗೆ ಸ್ವಲ್ಪ ಮಟ್ಟಿಗೆ ಅನುಕೂಲಕರ ವಾತಾವರಣ ಇರುವ ಹಾಗೂ ದೇಶದೊಳಗೆ ಇರುವ ರೋಹಿಂಗ್ಯಾ ಮುಸ್ಲಿಮರಿಗೆ ಶಿಬಿರ ಮಾಡಿರುವ ಪಶ್ಚಿಮ ಬಂಗಾಲಕ್ಕೆ ಹೋಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಮಾನ್ಯಗೊಂಡಿದ್ದ ಶೇಕಡಾ 99.3ರಷ್ಟು ನೋಟುಗಳು ಬ್ಯಾಂಕ್ ಗಳಿಗೆ ವಾಪಸ್
ಬಾಂಗ್ಲಾದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ರೋಹಿಂಗ್ಯಾ ಮುಸ್ಲಿಮರು ಜಮೆಯಾಗಿದ್ದಾರೆ ಎಂಬ ಬಗ್ಗೆ ನಮಗೆ ಗೊತ್ತಿದೆ. ಸಣ್ಣ ಸಣ್ಣ ತಂಡಗಳಾಗಿ ಅವರು ಭಾರತದೊಳಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ಪ್ರಯತ್ನ ಯಶಸ್ವಿಯಾಗಲು ನಾವು ಬಿಡುತ್ತಿಲ್ಲ. ರೋಹಿಂಗ್ಯಾ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿ ದೇಶದೊಳಗೆ ಪ್ರವೇಶಿಸಿದ ಉದಾಹರಣೆ ಇಲ್ಲ ಎಂದು ಶರ್ಮಾ ಹೇಳಿದ್ದಾರೆ.
ಅಪನಗದೀಕರಣವನ್ನು ಅನಾಹುತ ಎಂದು ಕರೆದು ಅಂಕಿ-ಅಂಶ ತೆರೆದಿಟ್ಟ ಚಿದಂಬರಂ
ಈಗಾಗಲೇ ಜಮ್ಮುವಿನ ಗಡಿಯಲ್ಲಿ 'ಸ್ಮಾರ್ಟ್' ಬೇಲಿಯನ್ನು ಪ್ರಾಯೋಗಿಕವಾಗಿ ಹಾಕಲಾಗಿದೆ. ಸದ್ಯಕ್ಕೆ ಸೆಪ್ಟೆಂಬರ್ ಹದಿನೇಳನೇ ತಾರೀಕು ಗೃಹ ಸಚಿವರಿಂದ ಉದ್ಘಾಟನೆ ಮಾಡಿಸಬೇಕು ಎಂದುಕೊಂಡಿದ್ದೇವೆ. ಆ ದಿನಾಂಕದಲ್ಲಿ ಬದಲಾವಣೆ ಆದರೂ ಆಗಬಹುದು ಎಂದಿದ್ದಾರೆ.