ಬೆಂಗಳೂರು, ಸೆಪ್ಟೆಂಬರ್ 06: ಎಸ್ಐಎಫ್ಎಫ್ ಯಂಗ್ ಆರ್ಟಿಸ್ಟ್ ಗ್ರ್ಯಾಂಡ್ ಫಿನಾಲೆ ಸೆಪ್ಟೆಂಬರ್ 4 ರಂದು ನಡೆದಿದೆ.
ಹಾಗೆಯೇ ವರ್ಷದ ಯುವ ಕಲಾವಿದ ಯಾರೆಂಬುದನ್ನು ಘೋಷಿಸಿದ್ದಾರೆ. ತಮಿಶ್ ಪುಲಪ್ಪಾಡಿ-ಗಿಟಾರ್, ಗಾಯನಕ್ಕಾಗಿ ಅಕ್ಷತಾ ಸಿಂಗ್ ಚೌಹಾಣ್, ಜಂಕಿ ಡಿವಿ- ಭರತನಾಟ್ಯಕ್ಕೆ ಪ್ರಶಸ್ತಿಯನ್ನು ನೀಡಲಾಯಿತು. ವಿಜೇತರಿಗೆ ತಲಾ ಒಂದು ಲಕ್ಷ ರೂ. ನಗದು ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಡಾ. ಎಲ್ ಸುಬ್ರಹ್ಮಣ್ಯಂ, ನಿಖಿತಾ ಗಾಂಧಿ, ಎಹ್ಸಾನ್ ನೂರಾನಿ, ಶಾಲ್ಮಾಲಿ ಖೋಲ್ಗಾಡೆ, ಟೆರೆನ್ಸ್ ಲೂಯಿಸ್, ಶೋವನ್ ನಾರಾಯಣ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆದಿತ್ಯ ನಾರಾಯಣ್ ನಡೆಸಿಕೊಟ್ಟರು.
ಪೀಪಲ್ಸ್ ಚಾಯ್ಡ್ ವೋಟಿಂಗ್ ಪ್ಲಾಟ್ಫಾರ್ಮ್ 22,000 ಮತಗಳನ್ನು ಗಳಿಸಿತು ಹಾಗೂ ಡ್ರಮ್ಸ್ ವಿಭಾಗದಲ್ಲಿ ಜೈಪುರದ ಆತ್ಮಿಕ್ ಗುಪ್ತಾ ಅವರಿಗೆ 50 ಸಾವಿರ ರೂ. ನಗದು ಬಹುಮಾನ ನೀಡಲಾಯಿತು.
ಎಸ್ಐಎಫ್ಎಫ್ ಯಂಗ್ ಆರ್ಟಿಸ್ಟ್ 2020 ಸಹ ಸಂಸ್ಥಾಪಕಿ ಕವಿತಾ ಅಯ್ಯರ್ ಮಾತನಾಡಿ, ಕಳೆದ ಕೆಲವು ತಿಂಗಳಲ್ಲಿ ಎಸ್ಐಎಫ್ಎಫ್ ಯಂಗ್ ಆರ್ಟಿಸ್ಟ್ ಕಾರ್ಯಕ್ರಮ ಭಾರತದಲ್ಲಿ ಯಶಸ್ವಿಯಾಗಿ ನಡೆದಿದೆ. ಭಾರತದಲ್ಲಿ ಕಲಾ ಉತ್ಸಾಹಿಗಳಿಗೆ ತಮ್ಮ ಆಸಕ್ತಿಯ ಕ್ಷೇತ್ರಗಳನ್ನು ಅನ್ವೇಷಿಸಲು ಒಂದು ಪರಿಸರ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ ಎಂದರು.
ಗ್ರ್ಯಾಂಡ್
ಫಿನಾಲೆಯಲ್ಲಿ
ಸಂಗೀತ,
ನೃತ್ಯ
ಹಾಗೂ
ವಿವಿಧ
ವಿಭಾಗಗಳಲ್ಲಿ
ವಿಜೇತರಾದವರಿಗೆ
ಪ್ರಶಸ್ತಿ
ನೀಡಲಾಯಿತು
ಅದರ
ಜತೆಗೆ
25
ಸಾವಿರ
ರೂ.
ನಗದನ್ನೂ
ನೀಡಲಾಯಿತು.
ರಾಷ್ಟ್ರೀಯ
ಪ್ರಶಸ್ತಿ
ವಿಜೇತರ
ಹೆಸರುಗಳು
-ಭರತನ್ಯಾಟ್ಯ-ಜಾನಕಿ
ಡಿವಿ
-ಉಡುಪಿ
-ಬಾಲಿವುಡ್-ಮಾನಸಿ
ಧ್ರುವ-ರಾಜ್ಕೋಟ್
-ಕರ್ನಾಟಿಕ್
ವಯೋಲಿನ್-ಪಿಎಸ್
ನರೇಂದ್ರನ್
-ರಾಜ್ಕೋಟ್
-ಕಾರ್ನಾಟಿಕ್
ವೋಕಲ್-ಶ್ಯಾಮಕೃಷ್ಣ
ಸತೀಶ್
-ಬೆಂಗಳೂರು
-ಕಂಟೆಂಪರರಿ-ವಿಶಾಲ್
ಕುಮಾರ್
ಯಾದವ್-ದಾರ್ಜಿಲಿಂಗ್
-ಡ್ರಮ್ಸ್-ಟಿಆರ್
ನಿಖಿಲ್
-ಚೆನ್ನೈ
-ಕೊಳಲು-ಮೋಹನ್
ಕೃಷ್ಣನ್-ಫರೀದಾಬಾದ್
-ಗಿಟಾರ್-ತಮಿಶ್
ಪುಲಪ್ಪಾಡಿ-ಬೆಂಗಳೂರು
-ಹಿಂದೂಸ್ತಾನಿ
ಸಂಗೀತ-ಶ್ರೇಯ
ವಿ
ಮೂರ್ತಿ-ಬೆಂಗಳೂರು
-ಹಿಪ್
ಹಾಪ್:
ಅಮನ್
ಜೈಸ್ವಾಲ್-ಪಟ್ನಾ
-ಭಾರತೀಯ
ಸಂಗೀತ-ಅಕ್ಷತಾ
ಸಿಂಗ್
-ಕಥಕ್-ಅನನ್ಯ-ಉಜ್ಜೈನ್
-ಒಡಿಸ್ಸಿ-ಮೇಘನಾ
-ತಬಲ-ಉಜಿತ್
-ವೆಸ್ಟರ್ನ್
ವಯೋಲಿನ್-ಅಂಥಿಯಾ
-ವೆಸ್ಟರ್ನ್
ವೋಕಲ್-ಕಮೇಯಿ
ಅವರಿಗೆ
ಪ್ರಶಸ್ತಿಗಳು
ಲಭಿಸಿವೆ
ಒಟ್ಟು
12
ಸಾವಿರ
ಅರ್ಜಿಗಳು
ಬಂದಿದ್ದವು,
ಒಟ್ಟು
100
ಮಂದಿಯನ್ನು
ಆಯ್ಕೆಮಾಡಲಾಗಿತ್ತು.
ಇಲ್ಲಿ
ಯುವ
ಕಲಾವಿದರು,
ಮಕ್ಕಳು
ಮತ್ತು
ವಯಸ್ಕರಿಗೆ
ಸಂಗೀತ
ಮತ್ತು
ನೃತ್ಯದ
ಆನ್ಲೈನ್
ಕೋರ್ಸ್ಗಳನ್ನು
ನೀಡುತ್ತಾರೆ.
ಕೋರ್ಸ್ಗಳನ್ನು
ಆರಂಭದ,
ಮಧ್ಯಂತರ
ಮತ್ತು
ಮುಂದುವರಿದ
ಹಂತಗಳಲ್ಲಿ
ವಿನ್ಯಾಸಗೊಳಿಸಲಾಗಿದೆ.
ಬಹು-ವರ್ಷದ
ಪಠ್ಯಕ್ರಮವನ್ನು
ಲೈವ್
ತರಗತಿಗಳು,
ಮಾರ್ಗದರ್ಶಿ
ಅಭ್ಯಾಸದ
ಅವಧಿಗಳು,
ಸೃಜನಶೀಲ
ಕಾರ್ಯಗಳು,
ಗುಂಪುಗಳಲ್ಲಿ
ಕಲಿಕೆ,
ಕಾರ್ಯಕ್ಷಮತೆ
ಮತ್ತು
ಸಹಯೋಗದ
ಅವಕಾಶಗಳು,
ಮಾಸ್ಟರ್ಕ್ಲಾಸ್
ಮತ್ತು
ಪ್ರಮಾಣೀಕರಣದಿಂದ
ಬೆಂಬಲಿಸಲಾಗುತ್ತದೆ.
ಈ ಸ್ಪರ್ಧೆಯ ಮೊದಲ ಹಂತದಲ್ಲಿ 11-18 ವರ್ಷ ವಯಸ್ಸಿನ ಯುವ ಕಲಾವಿದರು 12,000 ನೋಂದಣಿಗಳನ್ನು ಪಡೆದರು ಮತ್ತು ಭಾರತದಾದ್ಯಂತ ನಗರಗಳು ಮತ್ತು ಪಟ್ಟಣಗಳಿಂದ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಯಂಗ್ ಆರ್ಟಿಸ್ಟ್ ಅಡ್ವಾನ್ಸ್ಡ್ ಮೆಂಟರ್ಶಿಪ್ ಪ್ರೋಗ್ರಾಂ (YAMP), ಎರಡನೇ ಹಂತದಲ್ಲಿ ಸಂಗೀತ ಮತ್ತು ನೃತ್ಯ ಕಲಾಕೃತಿಯ ಟಾಪ್ 100 ಫೈನಲಿಸ್ಟ್ಗಳಿಗೆ ಡಾ. ಎಲ್ ಸುಬ್ರಮಣ್ಯಂ, ಕವಿತಾ ಕೃಷ್ಣಮೂರ್ತಿ, ಮಾಧವಿ ಮುದಗಲ್ ಮತ್ತು ಇನ್ನೂ ಅನೇಕರ ರಚನಾತ್ಮಕ ಮಾರ್ಗದರ್ಶನ ನೀಡುವ ಗುರಿಯನ್ನು ಹೊಂದಿದೆ. ರುಕ್ಮಿಣಿ ವಿಜಯಕುಮಾರ್ (ಭರತನಾಟ್ಯ), ಅನುಪಮಾ ಭಾಗವತ್ (ಸಿತಾರ್/ ಸರೋದ್), ನಿಖಿತಾ ಗಾಂಧಿ (ಭಾರತೀಯ ಮತ್ತು ಪಾಶ್ಚಾತ್ಯ ಗಾಯನ), ಸಾಗರ್ ಬೋರಾ (ಹಿಪ್-ಹಾಪ್) ಮುಂತಾದ ಪರಿಣಿತರು ನಿರ್ದಿಷ್ಟ ವಿಭಾಗದ ಅವಧಿಗಳನ್ನು ಆಯೋಜಿಸಿದ್ದರು.
ಹೆಚ್ಚಿನ ಮಾಹಿತಿಗಾಗಿ www.youngartiste.com ಭೇಟಿ ನೀಡಿ
ಫೇಸ್ಬುಕ್:
Young
Artiste
ಇನ್
ಸ್ಟಾಗ್ರಾಂ:
Young
Artiste
ಟ್ವಿಟ್ಟರ್:
Young
Artiste
RECOMMENDED STORIES