ಭಗತ್ಸಿಂಗ್ ಭಯೋತ್ಪಾದಕ ಎಂದ ದೆಹಲಿ ವಿವಿ!
ನವದೆಹಲಿ, ಏಪ್ರಿಲ್, 28: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ದೇಶದ್ರೋಹಿ ಘೋಷಣೆ ಗಲಾಟೆ ಒಂದು ಹಂತಕ್ಕೆ ಬಂದು ನಿಂತಿರುವಾಗಲೇ ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಎಡವಟ್ಟಾಗಿದೆ.
ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರನ್ನು ದೆಹಲಿ ವಿಶ್ವವಿದ್ಯಾಲಯದ ಪಠ್ಯವೊಂದರಲ್ಲಿ 'ಕ್ರಾಂತಿಕಾರಿ ಭಯೋತ್ಪಾದಕ' ಎಂದು ಕರೆದಿರುವುದು ಹೊಸ ವಿವಾದ ಹುಟ್ಟುಹಾಕಿದೆ.[ಬೆಂಗಳೂರಿನಲ್ಲಿ ಭಗತ್ ಕನಸಿನ ಭಾರತ ಬಿಚ್ಚಿಟ್ಟ ಮೊಮ್ಮಗ]
ಇತಿಹಾಸಕಾರರಾದ ಬಿಪಿನ್ ಚಂದ್ರ ಮತ್ತು ಮೃದುಲಾ ಮುಖರ್ಜಿ ಅವರು ಬರೆದಿರುವ 'ಭಾರತದ ಸ್ವಾತಂತ್ರ್ಯ ಹೋರಾಟ' ಎಂಬ ಪುಸ್ತಕದ 20ನೇ ಅಧ್ಯಾಯದಲ್ಲಿ ಭಗತ್ ಸಿಂಗ್ ಅಲ್ಲದೆ, ಚಂದ್ರಶೇಖರ್ ಆಜಾದ್, ಸೂರ್ಯ ಸೇನ್ ಮತ್ತು ಇತರರನ್ನು 'ಕ್ರಾಂತಿಕಾರಿ ಭಯೋತ್ಪಾದಕರು' ಎಂದು ಹೇಳಲಾಗಿದೆ.
ಈ
ತಪ್ಪನ್ನು
ಸರಿಪಡಿಸುವಂತೆ
ಕೋರಿ
ಭಗತ್
ಸಿಂಗ್
ಕುಟುಂಬದ
ಸದಸ್ಯರು
ದೆಹಲಿ
ವಿ.ವಿ
ಅಧಿಕಾರಿಗಳು
ಮತ್ತು
ಮಾನವ
ಸಂಪನ್ಮೂಲ
ಅಭಿವೃದ್ಧಿ
ಸಚಿವಾಲಯವನ್ನು
ಆಗ್ರಹಿಸಿದ್ದಾರೆ.[ಭಗತ್
ಸಿಂಗ್
ಜನ್ಮಸ್ಥಳ
ಕಾಪಾಡುತ್ತೇವೆ
ಎಂದ
ಪಾಕ್]
'ಚಿತ್ತಗಾಂಗ್ ಚಳವಳಿ' ಮತ್ತು ಸ್ಯಾಂಡರ್ಸ್ ಹತ್ಯೆಯನ್ನು ಈ ಪಠ್ಯಪುಸ್ತಕದಲ್ಲಿ 'ಭಯೋತ್ಪಾದಕ ಕೃತ್ಯ' ಎಂದು ಕರೆಯಲಾಗಿದೆ. ಭಗತ್ ಸಿಂಗ್ ಕುಟುಂಬದ ಸದಸ್ಯರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರಿಗೆ ಪತ್ರ ಬರೆದು ಕೂಡಲೇ ತಿದ್ದುಪಡಿ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.[ಜೈಲಿನಿಂದ ಬಿಡುಗಡೆಯಾದ ಕನ್ಹಯ್ಯಾ ಮೋದಿ ಬಗ್ಗೆ ಹೇಳಿದ್ದೇನು?]
ನವದೆಹಲಿಯ ಜವಾಹರಲಾಲ್ ನೆಹರು ವಿವಿಯಲ್ಲಿ ಭಯೋತ್ಪಾದಕ ಅಫ್ಜಲ್ ಗುರು ಪರ, ಭಾರತದ ವಿರುದ್ಧ ಘೋಷಣೆ ಕೂಗಿದ್ದು ದೊಡ್ಡ ಸುದ್ದಿಯಾಗಿತ್ತು. ವಿದ್ಯಾರ್ಥಿ ಸಂಘದ ಮುಖಂಡ ಕನ್ಹಯ್ಯಾ ಕುಮಾರ್ ನನ್ನು ಬಂಧನ ಮಾಡಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.