ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಾಂತಿಗಾಗಿ ಉಪವಾಸ ಆರಂಭಿಸಿದ ಶಿವರಾಜ್ ಸಿಂಗ್ ಚೌಹಾಣ್
ಭೂಪಾಲ್, ಜೂನ್ 10: ರೈತರ ಹೋರಾಟದ ಕಿಚ್ಚು ಮುಗಿಲುಮುಟ್ಟಿರುವ ಮಧ್ಯಪ್ರದೇಶದ ಭೂಪಾಲ್ ನಲ್ಲಿ ಶಾಂತಿ ನೆಲೆಸಬೇಕೆಂಬ ಕಾರಣಕ್ಕೆ ಇಲ್ಲಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇಂದಿನಿಂದ(ಜೂನ್ 10) ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆಚರಿಸುತ್ತಿದಾರೆ.
ನಾನು ರೈತರ ಸಮಸ್ಯೆಗಳನ್ನು ನೋಡಿಯೂ ಸುಮ್ಮನಾಗುವಷ್ಟು ನಿರ್ದಯಿಯಲ್ಲ. ನನಗೆ ನಿಮ್ಮೆಲ್ಲರ ಮೇಲೆ ಅತೀವ ಕಾಳಜಿ ಇದೆ. ದಯವಿಟ್ಟು ನಿಮ್ಮ ಸಮಸ್ಯೆಗಳನ್ನು ನನ್ನ ಜೊತೆ ಮುಕ್ತವಾಗಿ ಹೇಳಿಕೊಳ್ಳಿ.
ಮಾತುಕತೆ ಮಾತ್ರವೇ ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡಬಹುದು ಎಂದು ಉಪವಾಸ ಸತ್ಯಾಗ್ರಹ ಆರಂಭಿಸುವ ಮೊದಲು ಮುಖ್ಯಮಂತ್ರಿ ಚೌಹಾಣ್ ಟ್ವೀಟ್ ಮಾಡಿದ್ದಾರೆ.
ಮುಖ್ಯಮಂತ್ರಿಗಳ ಉಪವಾಸವಾದರೂ ಮಧ್ಯಪ್ರದೇಶದ ರೈತರ ಆಕ್ರೋಶವನ್ನು ತಣ್ಣಗಾಗಿಸುತ್ತದೆಯೇ ಎಂದು ಕಾದುನೋಡಬೇಕಿದೆ.
Comments
india madhya pradesh shivraj singh chouhan farmer protest fasting ಭಾರತ ಮಧ್ಯಪ್ರದೇಶ ಪ್ರತಿಭಟನೆ ರೈತ ಉಪವಾಸ
English summary
In his attempt to bring peace to violence-hit Madhya Pradesh and hold talks with farmers, Chief Minister Shivraj Singh Chouhan began his fast on Saturday. While families of farmers killed in Mandsaur violence have demanded that the Chief Minister visit them, Chouhan has called farmers to discuss issues with him.
Story first published: Saturday, June 10, 2017, 12:23 [IST]