ಶಿಮ್ಲಾದಲ್ಲಿ ಕಣಿವೆಗುರುಳಿದ ಬಸ್ಸು: 6 ಮಕ್ಕಳ ದುರಂತ ಸಾವು
ಶಿಮ್ಲಾ, ಜನವರಿ 05: ಶಾಲಾ ಮಕ್ಕಳನ್ನು ಹೊತ್ತ ಬಸ್ಸೊಂದು ಕಣಿಮೆಗೆ ಉರುಳಿದ ಪರಿಣಾಮ ಆರು ಮಕ್ಕಳು ಮತ್ತು ಬಸ್ಸಿನ ಚಾಲಕ ಮೃತರಾದ ದುರಂತ ಘಟನೆ ಶನಿವಾರ ಬೆಳಿಗ್ಗೆ ಹಿಮಾಚಲ ಪ್ರದೇಶದ ಶಿಮ್ಲಾ ಬಳಿ ನಡೆದಿದೆ.
ಗದಗದಲ್ಲಿ ಭಾರಿ ಅಪಘಾತ ಮದುವೆಗೆ ತೆರಳುತ್ತಿದ್ದ 6 ಮಂದಿ ದುರ್ಮರಣ
ಶಿಮ್ಲಾ ಬಳಿಯ ಸಿರ್ಮೌರ್ ಜಿಲ್ಲೆಯಲ್ಲಿ ಡಿಎವಿ ಪಬ್ಲಿಕ್ ಶಾಲೆಗೆ ಮಕ್ಕಳು ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡ 12 ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಜಮ್ಮು-ಕಾಶ್ಮೀರದಲ್ಲಿ ಒಂದೇ ಕುಟುಂಬದ ಐವರ ಸಾವು
ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಬಳಿಯ ಮನೆಯಲ್ಲಿ ಉಸಿರುಗಟ್ಟಿದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಐವರು ಮೃತರಾದ ಘಟನೆ ನಡೆದಿದೆ.
ಬಸ್ ಡಿಕ್ಕಿ ರಭಸಕ್ಕೆ ಬೈಕ್ಗೆ ಬೆಂಕಿ: ಸುಟ್ಟು ಕರಕಲಾದ ಬೈಕ್ ಸವಾರ
ಶ್ರೀನಗರ ಸಮೀಪದ ಬೆಮಿನಾ ಎಂಬಲ್ಲಿಯ ಮಾನ್ಸೂರ್ ಕಾಲೊನಿಯಲ್ಲಿ ಒಂದೇ ಕುಟುಂಬದ ಐವರು ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಉಸಿರುಗಟ್ಟಿದ ಪರಿಣಾಮ ಅವರು ಐವರೂ ಮೃತರಾಗಿದ್ದಾರೆಂದು ವರದಿಗಳು ತಿಳಿಸಿವೆ.