ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶರದ್ ಯಾದವ್ ರಾಜ್ಯಸಭಾ ಸದಸ್ಯತ್ವ ಅನರ್ಹಗೊಳಿಸಿದ ನಾಯ್ಡು
ರಾಜ್ ಕೋಟ್, ಡಿಸೆಬರ್ 05: ಜೆಡಿಯು ಪಕ್ಷದ ಬಂಡಾಯ ಸಂಸದರಾದ ಶರದ್ ಯಾದವ್ ಮತ್ತು ಅಲಿ ಅನ್ವರ್ ಅವರ ರಾಜ್ಯಸಭಾ ಸದಸ್ಯತ್ವವನ್ನು ಡಿ.4 ರಾತ್ರಿಯಿಂದಲೇ ಜಾರಿಗೆ ಬರುವಂತೆ, ಅನರ್ಹಗೊಳಿಸಲಾಗಿದೆ.
ರಾಜ್ಯಸಭೆ ಜೆಡಿಯು ನಾಯಕ ಸ್ಥಾನದಿಂದ ಶರದ್ ಯಾದವ್ ಔಟ್
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ರಅಜ್ಯ ಸಭೆಯ ಮುಖ್ಯಸ್ಥರೂ ಆಗಿರುವುದರಿಂದ ಅವರೇ ಈ ಆದೇಶವನ್ನು ಹೊರಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಅಲಿ ಅನ್ವರ್, 'ನಾನು ಸಭೆಯೊದರಲ್ಲಿ ಭಾಗವಹಿಸಿದ್ದ ಸಮಯದಲ್ಲಿ ಈ ವಿಷಯ ತಿಳಿಯಿತು. ಈ ಕುರಿತು ಶರದ್ ಯಾದವ್ ಅವರೊಂದಿಗೆ ಚರ್ಚಿಸಿ, ನಮ್ಮ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ' ಎಂದರು.
ಶರದ್ ಯಾದವ್ ಕೈಯಿಂದ ಜೆಡಿಯು 'ಬಾಣ' ಕಸಿದ ನಿತೀಶ್ ಕುಮಾರ್
ಪಕ್ಷ ವಿರೋಧಿ ಚಟುವಟಿಕೆ ಮತ್ತು ವಿಪಕ್ಷಗಳ ಕಾರ್ಯಕ್ರಮಗಳಲ್ಲಿ ನಿರಂತರ ಹಾಜರಾಗಿ, ತಮ್ಮ ಮಾತೃಪಕ್ಷಕ್ಕೆ ದ್ರೋಹ ಬಗೆಯುತ್ತಿದ್ದಾರೆಂಬ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
Comments
English summary
Rebel Janata Dal (United) MPs Sharad Yadav and Ali Anwar were disqualified from the Rajya Sabha on late Dec 4th night. Vice President M. Venkaiah Naidu, who is also the chairman of the upper house, issued the order stating that they cease to be Members of Parliament with immediate effect.