ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಮ್ಮ ಆದ್ಯತೆ ರಾಷ್ಟ್ರ ಮತ್ತು ಮಹಾರಾಷ್ಟ್ರ: ಶಿವಸೇನೆ
ನವದೆಹಲಿ, ಜನವರಿ 24: "ನನ್ನ ಮೊದಲು ಗುರಿ ದೇಶದ ಕಲ್ಯಾಣ ಮತ್ತು ಮಹಾರಾಷ್ಟ್ರದ ಉದ್ಧಾರ" ಎಂದು ಶಿವಸೇನೆ ಹೇಳಿದೆ.
ನಿನ್ನೆ(ಜ.23) ತಾನೇ ಎನ್ ಡಿಎ ಮೈತ್ರಿಕೂಟದೊಂದಿಗೆ ಹೊರಬಂದ ಶಿವಸೇನೆ ತನ್ನ ಉದ್ದೇಶಗಳನ್ನು, ಶಿವಸೇನಾ ಮುಖವಾಣಿ ಸಾಮ್ನಾಕ್ಕೆ ತಿಳಿಸಿದೆ. 'ನಮ್ಮ ಮೊದಲ ಆದ್ಯತೆ ರಾಷ್ಟ್ರ ಮತ್ತು ಮಹಾರಾಷ್ಟ್ರ. ಶಿವಸೇನೆ ಎಂದಿಗೂ ಹಿಂದುತ್ವದ ಉದ್ಧಾರಕ್ಕಾಗಿ ಶ್ರಮಿಸುತ್ತದೆ. ಇದಕ್ಕಾಗಿಯೇ ಶಿವಸೇನೆ ಎಲ್ಲಾ ಆಮಿಷಗಳನ್ನೂ ಬಿಟ್ಟು ಜನರಿಗೋಸ್ಕರ ಕೆಲಸ ಮಾಡಲು ಸಿದ್ಧವಾಗಿದೆ' ಎಂದು ಸಾಮ್ನಾದಲ್ಲಿ ಹೇಳಲಾಗಿದೆ.
ಎನ್ ಡಿಎಗೆ ಆಘಾತ: ಮೈತ್ರಿಕೂಟದಿಂದ ಹೊರ ನಡೆದ ಶಿವಸೇನಾ
ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿದ್ದ ಶಿವಸೇನೆ, ಜ.23 ರಂದು ಈ ಒಕ್ಕೂಟದಿಂದ ಹೊರಬಂದು 2019 ರ ಲೋಕಸಭಾ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಯನ್ನೂ ತಾನು ಏಕಾಂಗಿಯಾಗಿ ಎದುರಿಸುವುದಾಗಿ ಹೇಳಿದೆ. ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಜನ್ಮದಿನದಂದೇ ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಡಿದುಕೊಂಡಿದ್ದು ವಿಶೇಷ.
Comments
English summary
The Shiv Sena on Wednesday said it aims to work for the welfare of the nation and Maharashtra. In in its mouthpiece 'Saamna', the Sena said, "The only aim of the Shiv Sena is welfare of nation and Maharashtra. The Shiv Sena has always given importance to the welfare of Maharashtra and Hindutva. This is why the Shiv Sena has decided to ignore all the temptations and to start working for the people".
Story first published: Wednesday, January 24, 2018, 13:08 [IST]