ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ಸ್ಕೀಂ: ಕರ್ನಾಟಕದ ಮನವಿ ತಿರಸ್ಕರಿಸಿದ ಸುಪ್ರೀಂಕೋರ್ಟ್

|
Google Oneindia Kannada News

ನವದೆಹಲಿ, ಮೇ 16: ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯ ಪ್ರಕ್ರಿಯೆಗಳು ನಡೆಯುತ್ತಿರುವುದರಿಂದ ಕಾವೇರಿ ನಿರ್ವಹಣಾ ಸ್ಕೀಂ ಕರಡನ್ನು ಅಂತಿಮಗೊಳಿಸುವ ಕಾರ್ಯವನ್ನು ತಡೆಹಿಡಿಯಬೇಕು ಎಂಬ ಕರ್ನಾಟಕದ ಮನವಿಯನ್ನು ಸುಪ್ರೀಂಕೋರ್ಟ್ ಬುಧವಾರ ತಿರಸ್ಕರಿಸಿದೆ.

ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೆರಿಗಳ ನಡುವೆ ಕಾಲಕಾಲಕ್ಕೆ ನೀರು ಹಂಚಿಕೆ ಸಂಬಂಧ ಸೂಚನೆಗಳನ್ನು ನೀಡಲು ಕೇಂದ್ರ ಸರ್ಕಾರವೇ ಅಧಿಕಾರ ಹೊಂದುವಂತೆ ಕಾವೇರಿ ನಿರ್ವಹಣಾ ಸ್ಕೀಂನ ಕರಡಿನ ನಿಯಮದಲ್ಲಿ ಬದಲಾವಣೆ ಮಾಡಬೇಕು ಎಂದು ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಕಾವೇರಿ ನೀರು ಹಂಚಿಕೆ: ಸ್ಕೀಂ ಕರಡು ಸಲ್ಲಿಸಿದ ಕೇಂದ್ರ ಸರ್ಕಾರಕಾವೇರಿ ನೀರು ಹಂಚಿಕೆ: ಸ್ಕೀಂ ಕರಡು ಸಲ್ಲಿಸಿದ ಕೇಂದ್ರ ಸರ್ಕಾರ

ಸ್ಕೀಂನಲ್ಲಿ ಬದಲಾವಣೆ ಮಾಡಿ ಅದನ್ನು ಗುರುವಾರ ಸಲ್ಲಿಕೆ ಮಾಡುವಂತೆ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರಿಗೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ನ್ಯಾಯಪೀಠ ನಿರ್ದೇಶಿಸಿದೆ.

SC rejects karnatakas plea to hold finalisation of draft cauvery scheme

ಮುಂದೂಡಲು ನಕಾರ
ಕರ್ನಾಟಕದಲ್ಲಿ ಹೊಸ ಸರ್ಕಾರ ರಚನೆಯ ಪ್ರಕ್ರಿಯೆಗಳು ನಡೆಯುತ್ತಿರುವುದರಿಂದ ಕಾವೇರಿ ಸ್ಕೀಂನ ಕರಡನ್ನು ಅಂತಿಮಗೊಳಿಸುವುದನ್ನು ಜುಲೈ ಮೊದಲ ವಾರದವರೆಗೂ ತಡೆಹಿಡಿಯಬೇಕು ಎಂಬ ಕರ್ನಾಟಕದ ಪರ ಹಿರಿಯ ವಕೀಲ ಶ್ಯಾಮ್ ದಿವಾನ್ ಅವರ ಮನವಿಯನ್ನು ಪೀಠ ಒಪ್ಪಿಕೊಳ್ಳಲಿಲ್ಲ.

ಕರಡು ಸ್ಕೀಂ ಸಲ್ಲಿಕೆ ಕುರಿತು ಎಲ್ಲ ರಾಜ್ಯಗಳೂ ಕಾಳಜಿ ಹೊಂದಿವೆ. ಆದರೆ, ಕರ್ನಾಟಕ ಸರ್ಕಾರದ ಸಚಿವರ ನೆರವು ಮತ್ತು ನಿರ್ದೇಶನಗಳಿಲ್ಲದ ಕಾರಣ ಜುಲೈ ಮೊದಲ ವಾರದವರೆಗೂ ವಿಚಾರಣೆಯನ್ನು ಮುಂದೂಡಬೇಕು ಎಂದು ದಿವಾನ್ ಮನವಿ ಮಾಡಿದರು.

SC rejects karnatakas plea to hold finalisation of draft cauvery scheme

ಆದರೆ, ಕರಡು ಸ್ಕೀಂ ಸಿದ್ಧಪಡಿಸಬೇಕಿರುವುದು ಕೇಂದ್ರ ಸರ್ಕಾರ ಎಂದು ಖಾರವಾಗಿ ನುಡಿದ ಪೀಠ ಮನವಿಯನ್ನು ತಳ್ಳಿಹಾಕಿತು.

ಕರಡು ಸ್ಕೀಂನಲ್ಲಿ ಮಾಡಲಾದ ಬದಲಾವಣೆಗಳನ್ನು ಪರಿಗಣಿಸುವ ಸಂಬಂಧದ ವಿಚಾರಣೆಯನ್ನು ನ್ಯಾಯಪೀಠ ಗುರುವಾರಕ್ಕೆ ನಿಗದಿಪಡಿಸಿದೆ.

English summary
The Supreme Court rejected a plea of karnataka to stall the finalisation of the draft Cauvery management scheme as the process of formation of a new government in the state is underway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X