ಸುಪ್ರೀಂಕೋರ್ಟಿನಲ್ಲಿ ಇಂದಿನಿಂದ ಆಯೋಧ್ಯ ರಾಮಜನ್ಮಭೂಮಿ ವಿಚಾರಣೆ
ನವಾದೆಹಲಿ, ಫೆಬ್ರವರಿ 26: ಅಯೋಧ್ಯಾ ರಾಮ ಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣದ ವಿಚಾರಣೆಯನ್ನು ಮಂಗಳವಾರ(ಫೆಬ್ರವರಿ 26)ದಿಂದ ಐದು ಸದಸ್ಯಾ ನ್ಯಾಯಪೀಠವು ನಡೆಸಲಿದೆ. ಚುನಾವಣೆ ಹತ್ತಿರುವಿರುದರಿಂದ ಈ ಪ್ರಕರಣದ ಅಂತಿಮ ವಿಚಾರಣೆಯ ಸ್ವರೂಪ ಹಾಗೂ ದಿನಾಂಕವನ್ನು ಇಂದೇ ನಿರ್ಧರಿಸುವ ಸಾಧ್ಯತೆ ಹೆಚ್ಚಿದೆ.
ಅಯೋಧ್ಯೆಯ
ರಾಮಜನ್ಮಭೂಮಿಯಲ್ಲಿ
ವಿವಾದಮುಕ್ತವಾದ
ಭೂಮಿಯನ್ನು
ರಾಮ
ಜನ್ಮಭೂಮಿ
ನ್ಯಾಸ್
ಟ್ರಸ್ಟ್
ಗೆ
ಹಿಂದಿರುಗಿಸುವಂತೆ
ಕೇಂದ್ರ
ಸರ್ಕಾರ
ಸುಪ್ರೀಂ
ಕೋರ್ಟ್
ಮೊರೆಹೋಗಿದೆ.
ಮುಖ್ಯ
ನ್ಯಾಯಮೂರ್ತಿ
ರಂಜನ್
ಗೊಗಾಯ್
ನೇತೃತ್ವದ
ಐವರು
ನ್ಯಾಯಮೂರ್ತಿಗಳಿರುವ
ಪಂಚ
ಸದಸ್ಯ
ಪೀಠದಿಂದ
ವಿಚಾರಣೆ
ನಡೆಯಲಿದೆ
ಜನವರಿ
29ರಂದು
ವಿಚಾರಣೆ
ನಡೆಸಬೇಕಿತ್ತು.
ಆದರೆ ಜಸ್ಟೀಸ್ ಬೊಬ್ಡೆ ಅವರ ಅನುಪಸ್ಥಿತಿಯಿಂದ ವಿಚಾರಣೆಯನ್ನು ಮುಂದೂಡಲಾಗಿತ್ತು. ಈಗ ಜಸ್ಟೀಸ್ ಬೊಬ್ಡೆ ಅವರು ರಜೆ ಅವಧಿ ಮುಗಿಸಿಕೊಂಡು ಹಿಂತಿರುಗಿದ್ದಾರೆ. ಜಸ್ಟೀಸ್ ಬೊಬ್ಡೆ ಅವರಲ್ಲದೆ, ಜಸ್ಟೀಸ್ ಚಂದ್ರಚೂಡ್, ಜಸ್ಟೀಸ್ ಭೂಷಣ್, ಜಸ್ಟೀಸ್ ಅಬ್ದುಲ್ ನಜೀರ್ ಅವರು ನ್ಯಾಯಪೀಠದಲ್ಲಿದ್ದಾರೆ. ಫೆಬ್ರವರಿ 26 ಮಂಗಳವಾರ ಬೆಳಗ್ಗೆ 10.30ಕ್ಕೆ ವಿಚಾರಣೆ ಆರಂಭವಾಗಲಿದೆ.
1992 ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಮಯದಲ್ಲಿ ಒಟ್ಟು 67 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಕೇವಲ 2.7 ಎಕರೆ ಭೂಮಿಯಷ್ಟೇ ವಿವಾದಾತ್ಮಕ ಸ್ಥಳವಾಗಿದ್ದು, ಉಳಿದವು ವಿವಾದಮುಕ್ತವಾಗಿವೆ. ಆದ್ದರಿಂದ ಈ ಭೂಮಿಯ ವಾರಸುದಾರರಾದ ರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಗೆ ಅದನ್ನು ಹಿಂದಿರುಗಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ.
2.77 ಎಕರೆ ವಿಸ್ತೀರ್ಣದ ಭೂಮಿಯನ್ನು ಸದ್ಯಕ್ಕೆ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಹಾಗು ರಾಮ್ ಲಲ್ಲಾ ಸಮಾನಾಗಿ ಹೊಂದಿವೆ.