ವನ್ಯಜೀವಿ ಅಪರಾಧ: ಕುಖ್ಯಾತರ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಹೆಸರು!
ನವದೆಹಲಿ, ಏಪ್ರಿಲ್ 26: ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಸಿನಿಮಾಗಳ ಮೂಲಕ ಪ್ರಸಿದ್ಧರು. ಹಾಗೆಯೇ ಅಪರಾಧ ಪ್ರಕರಣಗಳಲ್ಲಿ ಹೆಸರು ತಳಕು ಹಾಕಿಕೊಂಡು ಅಷ್ಟೇ ಕುಖ್ಯಾತಿಯನ್ನೂ ಗಳಿಸಿದ್ದಾರೆ. ಜೋಧಪುರದಲ್ಲಿ ಕೃಷ್ಣಮೃಗ ಬೇಟೆಯಾಡಿದ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ಬಳಿಕ ಸಲ್ಮಾನ್, ಈಗ ಸರ್ಕಾರದ ವಿಭಾಗವಾದ ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೊದ (ಡಬ್ಲ್ಯೂಸಿಸಿಬಿ) ಕುಖ್ಯಾತ ಅಪರಾಧಿಗಳ ಪಟ್ಟಿಯಲ್ಲಿಯೂ ಸೇರಿಕೊಂಡಿದ್ದಾರೆ.
ರಾಜಸ್ಥಾನದ ಜೋಧಪುರದ ಕಂಕನಿ ಗ್ರಾಮದಲ್ಲಿ 1998ರ ಅಕ್ಟೋಬರ್ 1ರಂದು ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ ಪ್ರಕರಣದಲ್ಲಿ ಸಲ್ಮಾನ್ ಖಾನ್ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದ ಜೋಧಪುರ ನ್ಯಾಯಾಲಯ ಅವರಿಗೆ 5 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿತ್ತು. ಜೋಧಪುರ ಕೇಂದ್ರ ಕಾರಾಗೃಹದಲ್ಲಿ ಎರಡು ದಿನ ಕಳೆದಿದ್ದ ಸಲ್ಮಾನ್, ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ.
ಸಲ್ಮಾನ್ ಗೆ ಸುಲಭವಾಗಿ ಜಾಮೀನು ಸಿಕ್ಕಿದ್ದು ಏಕೆ? PETA ಪ್ರಶ್ನೆ
ಅತ್ಯಂತ ಗಂಭೀರ ವನ್ಯಜೀವಿ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾದವರ ಹೆಸರನ್ನು ಡಬ್ಲ್ಯೂಸಿಸಿಬಿ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸುತ್ತದೆ. ಹುಲಿ ಬೇಟೆ ಪ್ರಯತ್ನ, ಕಳ್ಳಸಾಗಣೆಯಂತಹ ಅಪರಾಧಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅನೇಕರ ಹೆಸರುಗಳನ್ನು ಚಿತ್ರ ಹಾಗೂ ಅವರ ವಿಳಾಸ ಸಹಿತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಅವರಲ್ಲಿ 39ನೆಯ ಹೆಸರಾಗಿ ಸಲ್ಮಾನ್ ಖಾನ್ ಅವರನ್ನು ಸೇರಿಸಲಾಗಿದೆ.
ವಿವಿಧ ಕೃತ್ಯಗಳಲ್ಲಿ ಭಾಗಿಯಾದ ಅಪರಾಧಿಗಳಿಗೆ ವಿಧಿಸಿರುವ ಶಿಕ್ಷೆ, ಅವರ ಹಿನ್ನೆಲೆಗಳ ಕುರಿತು ಎಲ್ಲ ರಾಜ್ಯಗಳಿಗೂ ಎಚ್ಚರಿಕೆ ನೀಡುವ ಸಲುವಾಗಿ ವೆಬ್ಸೈಟ್ನಲ್ಲಿ ಮಾಹಿತಿ ಪ್ರಕಟಿಸಲಾಗುತ್ತದೆ. ಇದು ಅವರ ಚಲನವಲನಗಳ ಮೇಲೆ ನಿಗಾ ಇರಿಸಲು ಸಹಾಯವಾಗುತ್ತದೆ ಎಂದು ಬ್ಯೂರೊದ ಹೆಚ್ಚುವರಿ ನಿರ್ದೇಶಕ ತಿಲೋತ್ತಮ ವರ್ಮಾ ತಿಳಿಸಿದ್ದಾರೆ.
ವಿದೇಶಕ್ಕೆ ತೆರಳಲು ಸಲ್ಮಾನ್ ಗೆ ಕೋರ್ಟ್ ಅನುಮತಿ
ಕರ್ನಾಟಕದಲ್ಲಿ
ಬೇಟೆಯಾಡಲು
ಬಂದವರು
ಡಬ್ಲ್ಯೂಸಿಸಿಬಿ
ಪ್ರಕಟಿಸಿರುವ
ಪಟ್ಟಿಯಲ್ಲಿ
ಮೊದಲ
ಆರು
ಅಪರಾಧಿಗಳ
ಹೆಸರು
ಹರಿಯಾಣ
ರಾಜ್ಯದವರದ್ದು.
ಇದರಲ್ಲಿ
ಒಬ್ಬ
ಮಹಿಳೆಯೂ
ಇದ್ದಾಳೆ.
ಇವರೆಲ್ಲರೂ
ಬಂಧಿತರಾಗಿರುವುದು
ಕರ್ನಾಟಕದಲ್ಲಿ
ಅಪರಾಧ
ಎಸಗಲು
ಪ್ರಯತ್ನಿಸಿರುವ
ಕಾರಣಕ್ಕೆ.
ತಮಿಳುನಾಡು ಗಡಿಭಾಗಕ್ಕೆ ಸಮೀಪವಿರುವ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಬಿಳಿಗಿರಿ ರಂಗನಾಥ ಹುಲಿ ರಕ್ಷಿತಾರಣ್ಯ ಪ್ರದೇಶದಲ್ಲಿ ಹುಲಿ ಬೇಟೆಯಾಡಲು ಪ್ರಯತ್ನಿಸುತ್ತಿದ್ದ ಈ ಆರು ಮಂದಿಯನ್ನು ಬಂಧಿಸಲಾಗಿತ್ತು. ಈ ಆರೋಪಿಗಳಿಗೆ ತಲಾ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.