ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪನಗದೀಕರಣ ಸ್ವಾಗತಿಸಿದ ಗ್ರಾಮೀಣ ಭಾರತ:ನಾರಾಯಣಮೂರ್ತಿ

By ವಿಕಾಸ್ ನಂಜಪ್ಪ
|
Google Oneindia Kannada News

ಕೋಲ್ಕತ್ತಾ, ಮಾರ್ಚ್ 22: ಕೇಂದ್ರ ಸರ್ಕಾರ ನವೆಂಬರ್ 2016 ರಲ್ಲಿ ತೆಗೆದುಕೊಂಡ ಅಪನಗದೀಕರಣದ ನಿರ್ಧಾರವನ್ನು ನಗರ ಪ್ರದೇಶದ ಜನರು ಸ್ವಾಗತಿಸದಿದ್ದರೂ, ಗ್ರಾಮೀಣ ಪ್ರದೇಶದ ಜನರು ಮುಕ್ತ ಮನದಿಂದ ಸ್ವಾಗತಿಸಿದ್ದಾರೆ ಎಂದು ಇನ್ಫೋಸಿಸ್ ಕೋ ಫೌಂಡರ್ ಎನ್.ಆರ್.ನಾರಾಯಣಮೂರ್ತಿ ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಕೋಲ್ಕತ್ತದ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಅಪನಗದೀಕರಣದ ಬಗ್ಗೆ ಮಾತನಾಡುತ್ತಿದ್ದ ಅವರು ಹೀಗೆ ಹೇಳಿದರು.

ಆರ್ ಬಿಐನ ಈ ಮಾಹಿತಿ ನೋಡಿ, ನೋಟು ನಿಷೇಧ ಯಾವ ಪುರುಷಾರ್ಥಕ್ಕೆ? ಆರ್ ಬಿಐನ ಈ ಮಾಹಿತಿ ನೋಡಿ, ನೋಟು ನಿಷೇಧ ಯಾವ ಪುರುಷಾರ್ಥಕ್ಕೆ?

"ನಾನು ಅರ್ಥಶಾಸ್ತ್ರಜ್ಞನಲ್ಲ. ಆದರೆ ಒಂದಂತೂ ಹೇಳಬಲ್ಲೆ. ಅಪನಗದೀಕರಣದ ಕುರಿತು ನಗರ ಪ್ರದೇಶದಲ್ಲಿ ಎಷ್ಟು ವಿರೋಧ ವ್ಯಕ್ತವಾಯಿತೋ, ಗ್ರಾಮೀಣ ಪ್ರದೇಶದಲ್ಲಿ ಅಷ್ಟೇ ಜನ ಅದನ್ನು ಸ್ವಾಗತಿಸಿದ್ದಾರೆ" ಎಂದು ಅವರು ಹೇಳಿದರು.

Rural India welcomed Demonetisation says Narayan Murthy

"ನನಗೆ ಈ ಬಗ್ಗೆ ಹೆಚ್ಚು ತಿಳಿದಿಲ್ಲ. ಆದರೆ ಸರ್ಕಾರ ಹಳೆಯ 500 ರೂ ನೋಟುಗಳನ್ನು ನಿಷೇಧಿಸಿ, ತಕ್ಷಣವೇ 2000 ರೂ.ಮುಖಬೆಲೆಯ ನೋಟುಗಳನ್ನು ಪರಿಚಯಿಸಿದ್ದು ಏಕೆ ಎಂಬುದು ನನಗೆ ಅರ್ಥವಾಗಿಲ್ಲ. ಇದನ್ನು ಯಾರಾದರೂ ತಜ್ಞರೇ ಹೇಳಬೇಕು" ಎಂದು ಅವರು ತಿಳಿಸಿದರು.

English summary
While the urban intellectuals did not buy the idea of demonetisation, it however went down very well with a majority of rural India, Infosys co-founder N R Narayan Murthy said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X