ಫಿರೋಜಾಬಾದ್ : ದುಷ್ಕರ್ಮಿಗಳ ಗುಂಡಿಗೆ ಆರೆಸ್ಸೆಸ್ ಕಾರ್ಯಕರ್ತ ಸಾವು
ಫಿರೋಜಾಬಾದ್(ಉತ್ತರಪ್ರದೇಶ), ಜುಲೈ 4: ಮನೆ ಮುಂದೆ ವಿಹಾರಾರ್ಥವಾಗಿ ಓಡಾಡಿಕೊಂಡಿದ್ದ ಆರೆಸ್ಸೆಸ್ ಕಾರ್ಯಕರ್ತರೊಬ್ಬರನ್ನು ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ನಡೆದಿದೆ.
ಪುದುಚೇರಿಯಲ್ಲಿ ಆರ್ ಎಸ್ ಎಸ್ ಕಾರ್ಯಕರ್ತನ ಬರ್ಬರ ಹತ್ಯೆ
ಮೃತ ಕಾರ್ಯಕರ್ತರನ್ನು ಸಂದೀಪ್ ಶರ್ಮ ಎಂದು ಗುರುತಿಸಲಾಗಿದೆ. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಮಂಗಳವಾರ ರಾತ್ರಿ ವೇಳೆ, ಸಂದೀಪ್ ಶರ್ಮ ಅವರು, ರಾತ್ರಿ ಊಟ ಮುಗಿಸಿಕೊಂಡು, ಮನೆ ಮುಂದೆ ಓಡಾಡುತ್ತಿದ್ದರು. ಈ ವೇಳೆಗೆ ಬೈಕಿನಿಂದ ಬಂದ ಅಪರಿಚಿತ ದುಷ್ಕರ್ಮಿಗಳು ಏಕೇಕಿ ಗುಂಡು ಹಾರಿಸಿದ್ದಾರೆ.
RSS worker Sandeep Sharma shot dead by bike-borne miscreants in Uttar Pradesh's Firozabad. The body has been sent to district govt hospital for post-mortem. More details awaited.
— ANI UP (@ANINewsUP) July 3, 2018
ಗುಂಡಿನ ಸದ್ದು ಕೇಳಿ ಹೊರಕ್ಕೆ ಬಂದ ಮನೆಯವರಿಗೆ, ರಕ್ತದ ಮಡುವಿನಲ್ಲಿ ಮಲಗಿದ್ದ ಸಂದೀಪ್ ಶರ್ಮ ಕಾಣಿಸಿಕೊಂಡಿದ್ದಾರೆ. ತಕ್ಷಣವೇ ಜಿಲ್ಲಾಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲು ಯತ್ನಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ, ತೀರ ರಕ್ತಸ್ರಾವದಿಂದ ಬಳಲಿದ ಶರ್ಮ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ.
ಈ ಘಟನೆ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರುವ ಫಿರೋಜಾಬಾದ್ ಪೊಲೀಸರು, ತನಿಖೆ ಕೈಗೊಂಡಿದ್ದಾರೆ. ದುಷ್ಕರ್ಮಿಗಳ ಸುಳಿವು ಇನ್ನೂ ಸಿಕ್ಕಿಲ್ಲ. ಮರಣೋತ್ತರ ಪರೀಕ್ಷೆ ನಂತರ ಬರುವ ವರದಿ ಆಧಾರಿಸಿ ಮುಂದಿನ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.