ಮಣಿಪುರ ಸಿಎಂ ಬೈರೇನ್ ಸಿಂಗ್ ಪುತ್ರನಿಗೆ ಐದು ವರ್ಷ ಜೈಲು
ಮಣಿಪುರ, ಮೇ 29: ಮಣಿಪುರದ ವಿಚಾರಣಾ ನ್ಯಾಯಾಲಯ ಅಲ್ಲಿನ ಮುಖ್ಯಮಂತ್ರಿ ಎನ್ ಬೈರೇನ್ ಸಿಂಗ್ ಪುತ್ರನಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 2011ರಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಸಿಂಗ್ ಪುತ್ರ ಅಜಯ್ ಮೀತಾಯ್ ಗೆ ಈ ಶಿಕ್ಷೆ ನೀಡಿದೆ.
ಇನ್ನು ದೂರುದಾರ ಪೋಷಕರು ತಮಗೆ ಅಪಾಯವಿದೆ ಎಂದು ಹೇಳಿರುವುದರಿಂದ ಸುಪ್ರೀಂ ಕೋರ್ಟ್ ನ ರಜಾಕಾಲದ ಪೀಠ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಹಾಗೂ ಮಣಿಪುರ ಮುಖ್ಯ ಕಾರ್ಯದರ್ಶಿಗೆ ಮೇ 29ರ ಮೊದಲು ಪ್ರತಿಕ್ರಿಯೆ ನೀಡುವಂತೆ ಈ ಹಿಂದೆ ಹೇಳಿತ್ತು.
ಇದಾಗಿ ಒಂದು ವಾರದ ನಂತರ ಮಣಿಪುರ ನ್ಯಾಯಾಲಯ ಈ ಪ್ರಕಟಿಸಿದೆ. ಸೆಕ್ಷನ್ 304ರ ಅಡಿಯಲ್ಲಿ ಅಜಯ್ ಮಿತಾಯ್ ಗೆ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
2011ರಲ್ಲಿ ತನ್ನ ಕಾರಿಗೆ ಜಾಗ ಬಿಡಲಿಲ್ಲ ಎಂಬ ಕಾರಣಕ್ಕೆ ಅಜಯ್ ಮಿತಾಯಿ ಇರೋಮ್ ರೋಜರ್ ಎಂಬಾತನೊಂದಿಗೆ ಜಗಳವಾಡಿದ್ದರು. ಈ ಸಂದರ್ಭ ತನ್ನಲ್ಲಿದ್ದ ಬಂದೂಕಿನಿಂದ ಗುಂಡಿಕ್ಕಿ ಆತನ್ನು ಮಿತಾಯಿ ಹತ್ಯೆ ಮಾಡಿದ್ದರು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆದಿ ಚಾರ್ಜ್ ಶೀಟ್ ಸಲ್ಲಿಸಿತ್ತು. ಸದ್ಯ ಇಂದು ಮಹತ್ವದ ತೀರ್ಪು ಹೊರ ಬಿದ್ದಿದ್ದು ಸಿಎಂ ಪುತ್ರನಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.