ತ್ವರಿತ ಅಲರ್ಟ್ ಗಳಿಗಾಗಿ
For Daily Alerts
"ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವುದು ಬಿಜೆಪಿಯಲ್ಲ, ಆರ್ ಜೆಡಿ!"
ನಳಂದಾ, ಮಾರ್ಚ್ 10: "ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದು ಬಿಜೆಪಿಯಲ್ಲ, ಆರ್ ಜೆಡಿ" ಎಂದು ಆರ್ ಜೆಡಿ ನಾಯಕ, ಉತ್ತರ ಪ್ರದೇಶದ ಮಾಜಿ ಸಚಿವ ತೇಜ್ ಪ್ರತಾಪ್ ಯಾದವ್ ಹೇಳಿದ್ದಾರೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
"ಅಯೋಧ್ಯೆಯಲ್ಲಿ ರಾಮಮಂದಿರವನ್ನು ಹಿಂದು, ಮುಸ್ಲಿಂ, ಕ್ರೈಸ್ತ, ಸಿಕ್ಖ್, ಹಿಂದುಳಿದ ವರ್ಗ, ಬಡವರು, ದಲಿತರು ಎಲ್ಲರೂ ಸೇರಿ ಅಯೋಧ್ಯೆಗೆ ತೆರಳಿ, ಒಂದೊಂದು ಇಟ್ಟಿಗೆಯನ್ನು ಇಟ್ಟು ಕಟ್ಟುತ್ತಾರೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಯಾ ಮುಸ್ಲಿಮರ ಬೆಂಬಲ
'ನಾವು ರಾಮಮಂದಿರ ನಿರ್ಮಾಣ ಮಾಡುತ್ತಿದ್ದಂತೆಯೇ ಬಿಜೆಪಿ-ಆರ್ ಎಸ್ ಎಸ್ ಬಾಂಧವ್ಯ ನಾಶವಾಗುತ್ತದೆ. ಆ ದಿನ ಅವರಿಗೆ ಅಧಿಕಾರಕ್ಕೆ ಬರಲು ಯಾವ ವಿಷಯವೂ ಸಿಗದೆ, ಖಾಲಿ ಕೈ ಆಗುತ್ತಾರೆ' ಎಂದು ಅವರು ಹೇಳಿದ್ದಾರೆ.
ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಪುತ್ರರಾಗಿರುವ ತೇಜ್ ಪ್ರತಾಪ್ ಯಾದವ್, ಜೆಡಿಯು-ಆರ್ ಜೆಡಿ ಮೈತ್ರಿ ಸರ್ಕಾರದ ಸಮಯದಲ್ಲಿ ಸಚಿವರಾಗಿದ್ದರು.
Comments
English summary
Rashtriya Janta Dal (RJD) leader and former Minister in the Nitish Kumar government, Tej Pratap Yadav, in a speech at Nalanda on Friday, said it is the RJD and not the Bharatiya Janta Party(BJP) that will build the Ram temple at Ayodhya.
Story first published: Saturday, March 10, 2018, 15:26 [IST]