ವಿನೋದ್ ಖನ್ನಾ ಸಾವು: ಹೊಸ ಪೀಳಿಗೆಯ ನಟರ ಮೇಲೆ ರಿಷಿ ಕಪೂರ್ ಕಿಡಿ
ಇತ್ತೀಚೆಗಿನ ಯುವ ನಟರಲ್ಲಿ ಯಾರೂ ಆ ಅಂತ್ಯಕ್ರಿಯೆಗೆ ಬಾರದಿದ್ದಕ್ಕೆ ರಿಷಿ ಕಪೂರ್ ಟ್ವಿಟರ್ ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಮುಂಬೈ, ಏಪ್ರಿಲ್ 28: ಗುರುವಾರ ನಿಧನರಾದ ಬಾಲಿವುಡ್ ನ ಹಿರಿಯ ನಟ ವಿನೋದ್ ಖನ್ನಾ ಅವರ ಅಂತ್ಯಕ್ರಿಯೆಗೆ ಬಾರದಿದ್ದ ಇಂದಿನ ತಲೆಮಾರಿನ ನಟರ ಬಗ್ಗೆ ಹಿರಿಯ ನಟ ರಿಷಿ ಕಪೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಬೈನಲ್ಲಿ ಗುರುವಾರ ಸಂಜೆ ನಡೆದ ಅಂತ್ಯಕ್ರಿಯೆಯಲ್ಲಿ ರಿಷಿ ಕಪೂರ್, ಅಮಿತಾಭ್ ಬಚ್ಚನ್ ಭಾಗವಹಿಸಿದ್ದರು. ಇನ್ನು ಆನಂತರದ ಪೀಳಿಗೆಯ ನಟರಲ್ಲಿ ಜಾಕಿ ಶ್ರಾಫ್, ಚುಂಕಿ ಪಾಂಡೆ ಬಂದಿದ್ದರು. ಅವರ ನಂತರದ ಪೀಳಿಕೆಯ ನಟರಲ್ಲಿ ಅಭಿಷೇಕ್ ಬಚ್ಚನ್, ದಿಯಾ ಮಿರ್ಜಾ ಬಂದಿದ್ದರು.'['ಅಮರ್' ಅಂತ್ಯಕ್ರಿಯೆಯಲ್ಲಿ ಕಣ್ಣೀರು ಹಾಕಿದ 'ಅಕ್ಬರ್', 'ಅಂತೋನಿ'!]
ಆದರೆ, ಇತ್ತೀಚೆಗಿನ ಯುವ ನಟರಲ್ಲಿ ಯಾರೂ ಆ ಅಂತ್ಯಕ್ರಿಯೆಗೆ ಬಾರದಿದ್ದಕ್ಕೆ ರಿಷಿ ಕಪೂರ್ ಟ್ವಿಟರ್ ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.[ವಿನೋದ್ ಖನ್ನಾ ಅಗಲಿಕೆಗೆ ಕಂಬಿನಿ ಮಿಡಿದ ಬಾಲಿವುಡ್ ಮತ್ತು ಕ್ರಿಕೆಟಿಗರು]
Shameful. Not ONE actor of this generation attended Vinod Khanna's funeral. And that too he has worked with them. Must learn to respect.
— Rishi Kapoor (@chintskap) April 27, 2017
ಇದೊಂದು ನಾಚಿಕೆಗೇಡಿನ ವಿಚಾರ. ಇಂದು ಸ್ಟಾರ್ ಎನಿಸಿಕೊಂಡವರು ಚಿತ್ರರಂಗದ ಹಿರಿಯರೊಬ್ಬರ ಅಂತ್ಯಕ್ರಿಯೆಗೆ ಬಾರದಿರುವುದು ಬೇಸರ ತರಿಸಿದೆ ಎಂದು ಹೇಳಿದ್ದಾರೆ.