ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವೃದ್ಧಾಪ್ಯ ವೇತನ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಸುಪ್ರೀಂ ಆದೇಶ
ನವದೆಹಲಿ, ಡಿಸೆಂಬರ್ 14: ವೃದ್ಧಾಪ್ಯ ವೇತನ ಕೂಡಲೇ ಹೆಚ್ಚಿಸಿ ಹಾಗೂ ಪ್ರತಿ ಜಿಲ್ಲೆಯಲ್ಲಿ ವೃದ್ಧಾಶ್ರಮ ಆರಂಭಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ನ್ಯಾ.ಮದನ್ ಬಿ. ಲೋಕುರ್ ಹಾಗೂ ನ್ಯಾ. ದೀಪಕ್ ಗುಪ್ತ ಅವರಿದ್ದ ನ್ಯಾಯಪೀಠ ಈ ಬಗ್ಗೆ ಸೂಚನೆ ನೀಡಿದೆ. ಬಡತನ ರೇಖೆಗಿಂತ ಕೆಳಗಿರುವ ವೃದ್ಧರಿಗೆ ನೆರವಾಗುವಂತೆ ನಿರ್ದೇಶಿಸಿದೆ.
ಜೀವನ ಸಂಧ್ಯಾ ಹೊತ್ತಿನಲ್ಲಿ, ಹಿರಿಯ ನಾಗರೀಕರೊಬ್ಬರ ಮನಕಲಕುವ ಘಟನೆ
ಕೇಂದ್ರದ ಮಾಜಿ ಕಾನೂನು ಸಚಿವ ಅಶ್ವಿನಿ ಕುಮಾರ್ ಹಾಗೂ ವಕೀಲ ಸಂಜೀವ್ ಪಣಿಗ್ರಾಹಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ವೃದ್ಧಾಪ್ಯ ವೇತನ ಹೆಚ್ಚಿಸಲು ಕೇಂದ್ರಕ್ಕೆ ಸೂಚನೆ ನೀಡುವಂತೆ ಮನವಿ ಮಾಡಿದ್ದರು.
ಇಂದಿರಾಗಾಂಧಿ ವೃದ್ಧಾಪ್ಯ ವೇತನ ಯೋಜನೆಯ ಪ್ರಕಾರ 60 ರಿಂದ 79 ವರ್ಷದವರಿಗೆ ಮಾಸಿಕ 200 ರೂ., 80ರ ನಂತರದವರಿಗೆ 500 ರೂ.ನೀಡಲಾಗುತ್ತಿದೆ. ಈ ಯೋಜನೆ ಆರಂಭವಾದಾಗಿನಿಂದ ಮೊತ್ತ ಪರಿಷ್ಕರಣೆಯಾಗಿಲ್ಲ. ಇದರ ಜತೆಗೆ ರಾಜ್ಯ ಸರ್ಕಾರದಿಂದಲೂ ಯೋಜನೆಗಳಿವೆ.
Comments
English summary
The supreme Court urged the Centre to take stock of the condition of old age homes across country. SC was hearing the plea seeking enforcement of the right of elderly persons under article 21 of the Constitution
Story first published: Friday, December 14, 2018, 15:37 [IST]