ಭಾರತದಲ್ಲಿ ಶಾಲಾ-ಕಾಲೇಜು ಆರಂಭಿಸಲು ಅನುಮತಿ: ಯುಜಿಸಿ ಮಾರ್ಗಸೂಚಿ
ನವದೆಹಲಿ, ನವೆಂಬರ್.05: ಕೊರೊನಾವೈರಸ್ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಶಾಲಾ-ಕಾಲೇಜುಗಳನ್ನು ಪುನಾರಂಭಿಸುವುದಕ್ಕೆ ಅನುಮತಿ ನೀಡಲಾಗಿದೆ. ಇದರ ಜೊತೆಗೆ ಯುಜಿಸಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ರಾಜಸ್ಥಾನದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲು ಹೊಸ ಕಾಯ್ದೆ
ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸುರಕ್ಷತೆ ಮತ್ತು ಕೊವಿಡ್-19 ನಿಂದ ರಕ್ಷಿಸುವುದಕ್ಕೆ ಅಗತ್ಯವಿರುವ ಎಲ್ಲ ರೀತಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು. ಕೊರೊನಾವೈರಸ್ ಶಿಷ್ಟಾಚಾರ ಪಾಲನೆ ಸೇರಿದಂತೆ ಹಲವು ಅಂಶಗಳನ್ನು ಯುಜಿಸಿ ಮಾರ್ಗಸೂಚಿಯಲ್ಲಿ ಸೇರಿಸಲಾಗಿದೆ.
ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್ ಬಿಡುಗಡೆಗೊಳಿಸಿರುವ ಕೊರೊನಾವೈರಸ್ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಸಂಬಂಧಿಸಿದ ಮಾರ್ಗಸೂಚಿಯನ್ನು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
गृह मंत्रालय द्वारा COVID-19 महामारी के कारण लगे लॉकडाउन को धीरे-धीरे खोलने की प्रक्रिया के अनुरूप विश्वविद्यालयों और कॉलेजों को फिर से खोलने के लिए यूजीसी विस्तृत दिशानिर्देश जारी कर रहा है। @ugc_india @PIB_India @EduMinOfIndia @DDNewsHindi @HMOIndia @MoHFW_INDIA pic.twitter.com/CBtqPw5GK0
— Dr. Ramesh Pokhriyal Nishank (@DrRPNishank) November 5, 2020
ಈ ಕುರಿತು ಮಾರ್ಗಸೂಚಿಯಲ್ಲಿ ಏನಿದೆ ಎನ್ನುವುದರ ಕುರಿತು ಪಟ್ಟಿ ಇಲ್ಲಿದೆ ನೋಡಿ.
ಯುಜಿಸಿ ಮಾರ್ಗಸೂಚಿಯಲ್ಲಿ ಇರುವುದೇನು?
-
ವಾರದಲ್ಲಿ
ಆರು
ದಿನಗಳ
ಕಾಲ
ತರಗತಿಗಳನ್ನು
ನಡೆಸುವುದಕ್ಕೆ
ಅನುಮತಿ
ನೀಡಿದ್ದು,
ಸಾಮಾಜಿಕ
ಅಂತರ
ಕಾಯ್ದುಕೊಳ್ಳುವಂತೆ
ವ್ಯವಸ್ಥೆ
ಮಾಡಿಕೊಳ್ಳುವುದು.
-
ಶಾಲಾ
ಕೊಠಡಿ
ಲಭ್ಯತೆಯನ್ನು
ನೋಡಿಕೊಂಡು
ಶೇ.50ರಷ್ಟು
ವಿದ್ಯಾರ್ಥಿಗಳಿಗೆ
ಬೇರೆ
ಬೇರೆ
ಅವಧಿಯಲ್ಲಿ
ತರಗತಿ
ನಡೆಸುವುದು.
-
ರಾಜ್ಯದ
ವಿಶ್ವವಿದ್ಯಾಲಯಗಳು
ಮತ್ತು
ಕಾಲೇಜುಗಳು
ಯಾವಾಗ
ಪುನಾರಂಭಗೊಳ್ಳಬೇಕು
ಎನ್ನುವುದಕ್ಕೆ
ಆಯಾ
ರಾಜ್ಯ
ಸರ್ಕಾರಗಳೇ
ತೀರ್ಮಾನಿಸುವುದಕ್ಕಿ
ಬಿಡಲಾಗಿದೆ.
ಕೆಲವು
ತಾಂತ್ರಿಕ
ಕೋರ್ಸ್
ಗಳಲ್ಲಿ
ವಿದ್ಯಾಭ್ಯಾಸ
ಮಾಡುತ್ತಿರುವ
ವಿದೇಶಿ
ವಿದ್ಯಾರ್ಥಿಗಳು
ಸಾಂಕ್ರಾಮಿಕ
ಪಿಡುಗಿನಿಂದ
ಸ್ವದೇಶಗಳಿಗೆ
ವಾಪಸ್
ಹೋಗಿದ್ದಾರೆ.
ಅವರು
ವಾಪಸ್ಸಾಗುವುದು
ಎಂದು
ವೀಸಾ
ಸಮಸ್ಯೆ
ಎದುರಾಗುತ್ತದೆ
ಎನ್ನುವುದನ್ನೆಲ್ಲ
ಗಮನದಲ್ಲಿಟ್ಟುಕೊಂಡು
ಮುಂದಿನ
ಕ್ರಮ
ತೆಗೆದುಕೊಳ್ಳಬೇಕಾಗುತ್ತದೆ.
ಸಾಮಾನ್ಯ ಮಾರ್ಗಸೂಚಿಯಲ್ಲಿನ ಅಂಶಗಳು
-
ಮುಖಕ್ಕೆ
ಮಾಸ್ಕ್
ಧರಿಸುವುದು
ಮತ್ತು
ಪ್ರತಿಯೊಬ್ಬರ
ನಡುವೆ
6
ಅಡಿ
ಸಾಮಾಜಿಕ
ಅಂತರ
ಕಾಯ್ದುಕೊಳ್ಳುವುದು
ಕಡ್ಡಾಯವಾಗಿದೆ.
-
ಆಲ್ಕೋಹಾಲ್
ಮಿಶ್ರಿತ
ಸ್ಯಾನಿಟೈಸರ್
ಬಳಸುವುದು
ಅಥವಾ
40
ರಿಂದ
60
ಸೆಕೆಂಡ್
ವರೆಗೂ
ಸೋಪ್
ನಿಂದ
ಕೈಗಳನ್ನು
ಶುದ್ಧವಾಗಿ
ತೊಳೆದುಕೊಳ್ಳುವುದು.
-
ಕೆಮ್ಮುವಾಗ,
ಸೀನುವಾಗ
ಬಾಯಿ
ಮತ್ತು
ಮೂಗು
ಮುಚ್ಚಿಕೊಳ್ಳುವಂತೆ
ಕಡ್ಡಾಯವಾಗಿ
ಮುಚ್ಚಿಕೊಳ್ಳುವುದು.
-
ತಮ್ಮ
ಆರೋಗ್ಯದ
ಬಗ್ಗೆ
ಸ್ವಯಂ
ಕಾಳಜಿ
ಹೊಂದಿರಬೇಕು,
ಆರೋಗ್ಯದಲ್ಲಿ
ವ್ಯತ್ಯಾಸವಾದಲ್ಲಿ
ತಕ್ಷಣ
ವೈದ್ಯರ
ಬಳಿಗೆ
ತೆರಳಬೇಕು.
-
ಶಾಲಾ-ಕಾಲೇಜುಗಳ
ಆವರಣದಲ್ಲಿ
ಉಗುಳುವುದನ್ನು
ಕಡ್ಡಾಯವಾಗಿ
ನಿಷೇಧಿಸಲಾಗಿದೆ.
-
ಆರೋಗ್ಯ
ಸೇತು
ಅಪ್ಲಿಕೇಷನ್
ಬಳಕೆ
ಮಾಡುವುದು
ಕಡ್ಡಾಯ.
ಕೊರೊನಾವೈರಸ್ ನಿಯಂತ್ರಣ ಕ್ರಮಗಳು
-
ಶಾಲೆ
ಮತ್ತು
ಕಾಲೇಜು
ಪುನಾರಂಭಕ್ಕೂ
ಮೊದಲು
ಆ
ಪ್ರದೇಶವು
ಕೊವಿಡ್-19
ಮುಕ್ತವಾಗಿರಬೇಕು.
ಶಾಲೆಯಿರುವ
ಪ್ರದೇಶ
ಸುರಕ್ಷಿತವಾಗಿದೆ
ಎನ್ನುವ
ಬಗ್ಗೆ
ರಾಜ್ಯ
ಅಥವಾ
ಕೇಂದ್ರ
ಸರ್ಕಾರಗಳಿಂದ
ದೃಢಪಟ್ಟಿರಬೇಕು.
ಕೊವಿಡ್-19
ಶಿಷ್ಟಾಚಾರ
ಮತ್ತು
ಮಾರ್ಗಸೂಚಿಗಳನ್ನು
ಕಡ್ಡಾಯವಾಗಿ
ಪಾಲಿಸತಕ್ಕದ್ದು.
-
ಅಗತ್ಯಬಿದ್ದಲ್ಲಿ
ಶಾಲಾ
ವಿದ್ಯಾರ್ಥಿಗಳು,
ಶಿಕ್ಷಕರು
ಮತ್ತು
ಸಿಬ್ಬಂದಿಯನ್ನು
ಕೊವಿಡ್-19
ಸೋಂಕಿನಿಂದ
ರಕ್ಷಿಸುವುದಕ್ಕಾಗಿ
ಕಟ್ಟುನಿಟ್ಟಿನ
ಕಾನೂನು,
ನಿಯಮ
ಹಾಗೂ
ಮಾರ್ಗಸೂಚಿಗಳನ್ನು
ರಾಜ್ಯ
ಸರ್ಕಾರವೇ
ಜಾರಿಗೊಳಿಸಬೇಕು.
-
ಕಂಟೇನ್ಮೆಂಟ್
ವಲಯ
ಅಲ್ಲದ
ಪ್ರದೇಶಗಳಲ್ಲಿ
ಮಾತ್ರ
ಶಾಲಾ-ಕಾಲೇಜು
ಆರಂಭಿಸುವುದಕ್ಕೆ
ಅವಕಾಶ
ನೀಡಲಾಗಿದೆ.
ಇದರ
ಜೊತೆಗೆ
ಕಂಟೇನ್ಮೆಂಟ್
ವಲಯದಲ್ಲಿ
ವಾಸವಿರುವ
ವಿದ್ಯಾರ್ಥಿಗಳು
ಮತ್ತು
ಶಿಕ್ಷಕರಿಗೆ
ಶಾಲಾ-ಕಾಲೇಜಿನಲ್ಲಿ
ಪ್ರವೇಶಕ್ಕೆ
ಯಾವುದೇ
ಅನುಮತಿ
ನೀಡುವುದಿಲ್ಲ.
Recommended Video
ದೇಶದಲ್ಲಿ ಕೊವಿಡ್-19 ಅಂಕಿ-ಸಂಖ್ಯೆ
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 50,209 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದೊಂದು ದಿನಗಳಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳಿಗಿಂತ ಗುಣಮುಖ ಪ್ರಕರಣ ಸಂಖ್ಯೆ ಹೆಚ್ಚಾಗಿದೆ. ಒಂದು ದಿನದಲ್ಲಿ 55,331 ಮಂದಿ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದು, 704 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 83,64,086ಕ್ಕೆ ಏರಿಕೆಯಾಗಿದೆ. ಮಹಾಮಾರಿಗೆ ದೇಶದಲ್ಲಿ ಈವರೆಗೂ 1,24,315 ಮಂದಿ ಪ್ರಾಣ ಬಿಟ್ಟಿದ್ದಾರೆ. 77,11,809 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಉಳಿದಂತೆ 5,27,962 ಸಕ್ರಿಯ ಪ್ರಕರಣಗಳಿವೆ.