ಲೋಕಸಭಾ ಚುನಾವಣೆಗೆ ನಾವು ಸಿದ್ಧ: ಕಮಲ್ ಹಾಸನ್
Recommended Video
ಮಧುರೈ, ಆಗಸ್ಟ್ 30: "ಲೋಕಸಭಾ ಚುನಾವಣೆಯನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ" ಎಂದು ಖ್ಯಾತ ನಟ ಮತ್ತು ಮಕ್ಕಳ್ ನೀದಿ ಮೈಯಂ(ಎಂಎನ್ ಎಂ) ಪಕ್ಷದ ಮುಖಂಡ ಕಮಲ್ ಹಾಸನ್ ಹೇಳಿದ್ದಾರೆ.
ತಮಿಳುನಾಡಿನ ಮಧುರೈನಲ್ಲಿ ಪತ್ರಕರ್ರೊಂದಿಗೆ ಮಾತನಾಡಿದ ಅವರು, 'ನಾವು ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿದ್ದೇವೆ. ಮತ್ತು ಚುನಾವಣೆ ಎದುರಿಸುವುದಕ್ಕೆ ನಾವು ಈಗಾಗಲೇ ಸಿದ್ಧವಾಗಿದ್ದೇವೆ' ಎಂದಿದ್ದಾರೆ.
ತಮಿಳುನಾಡು ರಾಜಕೀಯದ ಮುಂದಿನ ಕಿಂಗ್ ಯಾರು?
ಆದರೆ ತಮಿಳುನಾಡಿನಲ್ಲಿನಡೆಯಲಿರುವ ಉಪಚುನಾವಣೆಯಲ್ಲಿ ಉಪಚುನಾವಣೆಗಳಲ್ಲಿ ಸ್ಪರ್ಧಿಸುವ ಇರಾದೆ ತಮ್ಮ ಪಕ್ಷಕ್ಕಿಲ್ಲ ಎಂದು ಸಹ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಡಿಎಂಕೆ ಮುಖಂಡ ಎಂ ಕರುಣಾನಿಧಿ ಮತ್ತು ಎಐಎಡಿಎಂಕೆ ಮುಖಂಡ ಎ ಕೆ ಬೋಸ್ ಅವರ ನಿಧನಾನಂತರ ತೆರವಾದ ಕ್ರಮವಾಗಿ ತಿರುವಾರೂರ್ ಮತ್ತು ತಿರುಪನಕುಂಡ್ರಮ್ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ದಿನಾಂಕ ಇನ್ನೂ ಘೋಷಣೆಯಾಗಬೇಕಿದೆ.
ಪಕ್ಷದ ಬಾವುಟ ಹಾರಿಸಿ, ಪ್ರಮುಖರನ್ನು ಹೆಸರಿಸಿದ ಕಮಲ್
ಕಮಲ್ ಹಾಸನ್ ಅವರು ಮಕ್ಕಳ ನೀದಿ ಮೈಯಂ ಪಕ್ಷವನ್ನು ಇದೇ ವರ್ಷ ಫೆಬ್ರವರಿಯಲ್ಲಿ ಕಟ್ಟಿದ್ದರು.