ಟ್ರಿಪಲ್ ತಲಾಖ್ ರದ್ದು: ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯವೇನು?
ಸುಪ್ರೀಂ ಕೋರ್ಟ್ ನೀಡಿರುವ ತ್ರಿವಳಿ ತಲಾಖ್ ರದ್ದು ಆದೇಶಕ್ಕೆ ಎಲ್ಲೆಡೆ ಸ್ವಾಗತ. ಮಹಿಳೆಯರ ಹಿತದೃಷ್ಟಿಯಿಂದ ತೀರ್ಪು ಸ್ವಾಗತಾರ್ಹ ಎಂದ ಅನೇಕರು.
ಬೆಂಗಳೂರು, ಆಗಸ್ಟ್ 22: ತ್ರಿವಳಿ ತಲಾಖ್ ಪದ್ಧತಿಯನ್ನು ರದ್ದುಗೊಳಿಸುವ ಮೂಲಕ ಸುಪ್ರೀಂ ಕೋರ್ಟ್ ಐತಿಹಾಸಿಕ ನಿರ್ಣಯವೊಂದನ್ನು ಕೈಗೊಂಡಿದೆ. ಈ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಹಲವಾರು ಗಣ್ಯರು ಹಾಗೂ ಜನಪ್ರತಿನಿಧಿಗಳು ನ್ಯಾಯಾಲಯದ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ತ್ರಿವಳಿ ತಲಾಖ್ ಅಸಂವಿಧಾನಿಕ, ಸುಪ್ರಿಂ ಕೋರ್ಟ್ ಐತಿಹಾಸಿಕ ತೀರ್ಪು
ಏತನ್ಮಧ್ಯೆ, ಒನ್ ಇಂಡಿಯಾ ಕನ್ನಡ ಕೂಡ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಇದರ ಒಂದಿಷ್ಟು ಸ್ಯಾಂಪಲ್ ಗಳು ಇಲ್ಲಿವೆ.
''ಸುಪ್ರೀಂ
ಕೋರ್ಟ್
ನೀಡಿರುವ
ಈ
ತೀರ್ಪು
ಸ್ವಾಗತಾರ್ಹ.
ಆದರೆ,
ಈ
ತೀರ್ಪನ್ನು
ಹಲವಾರು
ಮಂದಿ
ಒಪ್ಪದಿರಬಹುದು.
ಆದರೆ,
ಎಲ್ಲರೂ
ಈ
ವಿಚಾರವನ್ನು
ಹೆಣ್ಣು
ಹೆತ್ತವರ
ನೋವನ್ನು
ಅರ್ಥ
ಮಾಡಿಕೊಳ್ಳುವ
ರೀತಿಯಲ್ಲಿ
ಆಲೋಚಿಸಿದರೆ
ಈ
ತೀರ್ಪು
ಸಮಂಜಸ
ಎಂದು
ಗೊತ್ತಾಗುತ್ತದೆ.
ಏಕೆಂದರೆ,
ಇಂಥ
ಹಲವಾರು
ಘಟನೆಗಳಿಂದ
ಹಲವಾರು
ಹೆಂಗಸರ
ಜೀವನ
ಹಾಳಾಗಿದೆ.
ಇಂಥ
ಅವಗಢಗಳು
ತಪ್ಪಬೇಕು.
ಮಹಿಳೆಯರ
ಬಾಳು
ಸುರಕ್ಷಿತವಾಗಿರಬೇಕು.
ಈ
ನಿಟ್ಟಿನಲ್ಲಿ
ಈ
ತೀರ್ಪು
ಸ್ವಾಗತಾರ್ಹ''
-
ಸಾಅವುದಿಯಾ,
ಪತ್ರಕರ್ತೆ
ತಲಾಖ್ ತಲಾಖ್ ತಲಾಖ್ ಗೆ ಭೇಷ್ ಭೇಷ್ ಭೇಷ್ ಎಂದ ಟ್ವಿಟ್ಟಿಗರು
''ಗಂಡು
ವಿಚ್ಛೇದನ
ನೀಡಿದರೆ
ಅದು
ತಲಾಖ್.
ಹೆಂಡತಿಯೇ
ಮುಂದಾಗಿ
ವಿಚ್ಛೇದನ
ನೀಡಿದರೆ
ಅದು
ಖುಲಾಸಾ.
ಈ
ಎರಡಕ್ಕೂ
ಶೆರಿಯಾ
ಕಾನೂನಿನ
ಮಾನ್ಯತೆಯಿದೆ.
ಅಪ್ಪಟ
ಧಾರ್ಮಿಕ
ಚೌಕಟ್ಟಿನಲ್ಲಿ
ಇಂಥ
ಪ್ರಕರಣಗಳನ್ನು
ನಿಭಾಯಿಸಲು
ಪ್ರತ್ಯೇಕವಾದ
ಮಾರ್ಗಗಳೂ
ಇವೆ.
ಆದರೆ,
ಶೆರಿಯಾ
ಕಾನೂನುಗಳನ್ನು
ಸರಿಯಾಗಿ
ಅರ್ಥ
ಮಾಡಿಕೊಳ್ಳದವರು
ಈ
ವಿಚಾರದಲ್ಲಿ
ತಪ್ಪಾಗಿ
ನಡೆದುಕೊಳ್ಳುತ್ತಾರೆ.
ಮೂರು
ಬಾರಿ
ಸತತವಾಗಿ
ತಲಾಖ್
ಹೇಳಿದರೆ
ಸಾಕು
ವಿಚ್ಛೇದನ
ಗ್ಯಾರಂಟಿ
ಎಂದು
ಮುಸ್ಲಿಮರಲ್ಲೇ
ಹಲವಾರು
ಮಂದಿ
ತಿಳಿದಿದ್ದಾರೆ.
ಇದು
ತಪ್ಪು.
ಇಂಥ
ಪ್ರಕರಣಗಳಿಗೆ
ಬ್ರೇಕ್
ಬೀಳುವುದಾದರೆ
ಈ
ತೀರ್ಪು
ಸ್ವಾಗತಾರ್ಹ''.
-
ರಫೀಕ್,
ಬೆಂಗಳೂರು
ನಿವಾಸಿ
''ಮಹಿಳೆಯರ
ರಕ್ಷಣೆ
ಹಾಗೂ
ಜೀವನ
ಭದ್ರತೆ
ದೃಷ್ಟಿಕೋನದಲ್ಲಿ
ಆಲೋಚಿಸುವುದಾದರೆ
ಸುಪ್ರೀಂ
ಕೋರ್ಟ್
ನೀಡಿರುವ
ತೀರ್ಪು
ಸ್ವಾಗತಾರ್ಹ.
ಮದುವೆ,
ಪತಿ-ಪತ್ನಿ
ಬಾಂಧವ್ಯವನ್ನು
ಹಗುರುವಾಗಿ
ಯಾರೂ
ತೆಗೆದುಕೊಳ್ಳಕೂಡದು
ಎಂಬ
ಕಾಳಜಿ
ಈ
ತೀರ್ಪಿನ
ಹಿಂದಿದೆ.
ವಿಚ್ಛೇದನ
ನೀಡುವಿಕೆ
ಯಾರದೋ
ಒಬ್ಬರ
ಕ್ಷಣಿಕ
ಅಸಮಾಧಾನದ
ಕೈಗೊಂಬೆಯಾಗಬಾರದು
ಎಂಬುದುನ್ನು
ಈ
ತೀರ್ಪು
ಪುಷ್ಟೀಕರಿಸಿದೆ''
-
ರಿಜ್ವಾನಾ,
ಶಿಕ್ಷಕಿ
(ಬೆಂಗಳೂರು)
''ಮುಸ್ಲಿಂ
ಧರ್ಮದ
ಬಗ್ಗೆ
ಹೆಚ್ಚು
ಗೊತ್ತಿಲ್ಲವಾದರೂ,
ತ್ರಿವಳಿ
ತಲಾಖ್
ಪದ್ಧತಿಯಿಂದ
ಹಲವಾರು
ಹೆಂಗಳೆಯರಿಗೆ
ತೊಂದರೆಯಾಗಿದ್ದನ್ನಂತೂ
ನಾನು
ನೋಡಿದ್ದೇನೆ.
ಈ
ಹಿನ್ನೆಲೆಯಲ್ಲಿ
ಹೇಳುವುದಾದರೆ,
ಸುಪ್ರೀಂ
ಕೋರ್ಟ್
ನೀಡಿರುವ
ತೀರ್ಪು
ಮುಸ್ಲಿಂ
ಮಹಿಳೆಯರ
ಪಾಲಿಗೆ
ತುಂಬಾ
ಮಹತ್ವದ್ದಾಗಿದೆ.
ಇನ್ನಾದರೂ,
ಅಲ್ಪ
ಅಸಮಾಧಾನಗಳಿಗೆ
ದಿಢೀರ್
ವಿಚ್ಛೇಧನದಂಥ
ಪದ್ಧತಿಗಳಿಗೆ
ಮುಕ್ತಿ
ಸಿಗಲಿ''
-
ರೋಸ್
ಮೇರಿ,
ಮಂಗಳೂರು