ಸಾಲ ವಸೂಲಿಗೆ ಹೊರಗುತ್ತಿಗೆ ಏಜೆಂಟ್ಗಳನ್ನು ಬಳಸದಂತೆ ಮಹೀಂದ್ರಾ ಕಂಪನಿಗೆ ಆರ್ಬಿಐ ನಿರ್ದೇಶನ
ನವದೆಹಲಿ,
ಸೆಪ್ಟೆಂಬರ್
23:
ಮಹೀಂದ್ರಾ
ಫೈನಾನ್ಷಿಯಲ್
ಸರ್ವಿಸಸ್
ಲಿಮಿಟೆಡ್
ಹೊರಗುತ್ತಿಗೆ
ಏಜೆಂಟ್ಗಳ
ಮೂಲಕ
ಸಾಲ
ವಸೂಲಾತಿ
ಪ್ರಕ್ರಿಯೆಯನ್ನು
ತಕ್ಷಣದಿಂದಲೇ
ನಿಲ್ಲಿಸುವಂತೆ
ಭಾರತೀಯ
ರಿಸರ್ವ್
ಬ್ಯಾಂಕ್
ನಿರ್ದೇಶನ
ನೀಡಿದೆ.
ಈ
ಹಣಕಾಸು
ಕಂಪನಿಯು
ಇನ್ನು
ಮುಂದೆ
ಹೊರಗಿನ
ವಸೂಲಾತಿ
ಏಜೆಂಟ್ಗಳನ್ನು
ಬಳಸುಕೊಂಡು
ಸಾಲ
ವಸೂಲಿ
ಪ್ರಕ್ರಿಯೆಯನ್ನು
ನಡೆಸುವಂತಿಲ್ಲ
ಎಂದು
ಭಾರತೀಯ
ರಿಸರ್ವ್
ಬ್ಯಾಂಕ್
ಗುರುವಾರ
ಸೂಚನೆ
ನೀಡಿದೆ.
ಇಂಥ
ಕಟ್ಟುನಿಟ್ಟಿನ
ಸೂಚನೆ
ನೀಡುವುದಕ್ಕೆ
ಜಾರ್ಖಂಡ್ನಲ್ಲಿ
ನಡೆದ
ಘಟನೆಯೊಂದು
ಕಾರಣವಾಗಿದೆ.
ಸಂತೆಯ ಚಿಂತೆ: ಭಾರತದಲ್ಲಿ ಡಬಲ್-ತ್ರಿಬಲ್ ಆಗಿದ್ದು ಹೇಗೆ ದಿನಸಿ ಬೆಲೆ?
ಜಾರ್ಖಂಡ್ನ ಹಜಾರಿಬಾಗ್ ಜಿಲ್ಲೆಯಲ್ಲಿ ಫೈನಾನ್ಸ್ ಕಂಪನಿಯ ವಸೂಲಾತಿ ಏಜೆಂಟ್ನಿಂದ ಟ್ರಾಕ್ಟರ್ನ ಚಕ್ರಗಳ ಅಡಿಯಲ್ಲಿ ಸಿಲುಕಿನ ಗರ್ಭಿಣಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಘಟನೆಯ ಬೆನ್ನಲ್ಲೇ ಸಾಲ ವಸೂಲಾತಿ ಪ್ರಕ್ರಿಯೆ ಸಂದರ್ಭದಲ್ಲಿ ಹೊರಗುತ್ತಿಗೆ ಏಜೆಂಟ್ ಅನ್ನು ಬಳಸಿಕೊಳ್ಳುವುದಕ್ಕೆ ನಿರ್ಬಂಧ ವಿಧಿಸಲಾಗುತ್ತಿದೆ.
ಪೊಲೀಸರಿಗೆ
ಮಾಹಿತಿ
ನೀಡದೇ
ಕ್ರಮಕ್ಕೆ
ಮುಂದು:
ಹಜಾರಿಬಾಗ್ನಲ್ಲಿ
ಸಾಲವನ್ನು
ಪಾವತಿ
ಮಾಡದ
ಸಾಲಗಾರರಿಂದ
ಟ್ರಾಕ್ಟರ್
ಅನ್ನು
ವಾಪಸ್
ಪಡೆದುಕೊಳ್ಳುವುದಕ್ಕಾಗಿ
ಸಂತ್ರಸ್ತರ
ನಿವಾಸಕ್ಕೆ
ಹೋಗುವುದಕ್ಕೂ
ಮೊದಲು
ಹಣಕಾಸು
ಕಂಪನಿಯ
ಅಧಿಕಾರಿಗಳು
ಸ್ಥಳೀಯ
ಪೊಲೀಸ್
ಠಾಣೆಗೆ
ಮಾಹಿತಿ
ನೀಡಿರಲಿಲ್ಲ
ಎಂದು
ಸ್ಥಳೀಯ
ಪೊಲೀಸರು
ತಿಳಿಸಿದ್ದಾರೆ.
ಮಹೀಂದ್ರಾ
ಗ್ರೂಪ್
ವ್ಯವಸ್ಥಾಪಕರು
ಹೇಳುವುದೇನು?:
"ನಾವು
ಈ
ಘಟನೆಯನ್ನು
ಎಲ್ಲಾ
ಅಂಶಗಳಿಂದ
ತನಿಖೆ
ಮಾಡುತ್ತೇವೆ.
ಮೂರನೇ
ವ್ಯಕ್ತಿಯ
ಸಂಗ್ರಹ
ಏಜೆನ್ಸಿಗಳನ್ನು
ಬಳಸುವ
ಅಭ್ಯಾಸವನ್ನು
ಸಹ
ಪರಿಶೀಲಿಸುತ್ತೇವೆ.
ಈ
ದುಃಖದ
ಕ್ಷಣದಲ್ಲಿ
ನಾವು
ಕುಟುಂಬದೊಂದಿಗೆ
ನಿಲ್ಲುತ್ತೇವೆ
ಎಂದು
ಮಹೀಂದ್ರಾ
ಗ್ರೂಪ್ನ
ವ್ಯವಸ್ಥಾಪಕ
ನಿರ್ದೇಶಕ
ಮತ್ತು
ಮುಖ್ಯ
ಕಾರ್ಯನಿರ್ವಾಹಕ
ಅಧಿಕಾರಿ
ಡಾ
ಅನೀಶ್
ಶಾ
ಪತ್ರಿಕಾ
ಪ್ರಕಟಣೆಯಲ್ಲಿ
ಘಟನೆಯ
ಕುರಿತು
ತಿಳಿಸಿದ್ದಾರೆ.