ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸೀತೆ ವಿಷ್ಯದಲ್ಲಿ ರಾಮನಿಗಿಂತ ರಾವಣನೇ ಸಂಭಾವಿತ'

ರಾಮಾಯಣದಲ್ಲಿ ರಾಮ-ರಾವಣರ ನಡುವೆ ರಾವಣನೇ ಹೆಚ್ಚು ಸಂಭಾವಿತ, ಸೀತೆಯ ಮಾತನ್ನು ಅನುಸರಿಸಿ ಜಿಂಕೆಯನ್ನು ಹಿಡಿಯಲು ಲಕ್ಷ್ಮಣನು ಹೋದದ್ದು ಕೂಡಾ ಸರಿಯಲ್ಲ ಎಂದು ಕೇರಳದ ಸಚಿವ ಜಿ ಸುಧಾಕರನ್ ಹೇಳಿದ್ದಾರೆ.

By Mahesh
|
Google Oneindia Kannada News

ಆಲಪ್ಪುಝ,ಜೂ. 6: ಮಹಿಳೆಯರ ಜತೆ ಉತ್ತಮವಾಗಿ ನಡೆದುಕೊಳ್ಳುವ ವಿಷ್ಯದಲ್ಲಿ ರಾಮನಿಗಿಂತ ರಾವಣ ಸಂಭಾವಿತ ವ್ಯಕ್ತಿಯಾಗಿದ್ದಾನೆ ಎಂದು ಕೇರಳ ಸಚಿವ ಜಿ.ಸುಧಾಕರನ್ ಅವರು ವಿವಾದಿತ ಹೇಳಿಕೆ ನೀಡಿದ್ದಾರೆ.

ಘೋರಕಾಡಿನಲ್ಲಿ ಸಹೋದರನ ಬಳಿ ಸೀತೆಯನ್ನು ನಿಲ್ಲಿಸಿ ಹೋದದ್ದು ಸರಿಯೇ? ಸೀತೆಯ ಮಾತನ್ನು ಅನುಸರಿಸಿ ಜಿಂಕೆಯನ್ನು ಹಿಡಿಯಲು ಲಕ್ಷ್ಮಣನು ಹೋದದ್ದು ಸರಿಯಲ್ಲ ಎಂದು ಸಚಿವ ಸುಧಾಕರನ್ ಹೇಳಿದ್ದಾರೆ.

ಆದರೆ, ಸೀತೆಯೊಂದಿಗೆ ರಾವಣ ಗೌರವದಿಂದ ನಡೆದು ಕೊಂಡಿದ್ದಾನೆ. ಪುಷ್ಪಕ ವಿಮಾನದಲ್ಲಿ ಸೀತೆಯನ್ನು ಆತ ಅಪಹರಿಸಿ, ಲಂಕೆಯ ಅಶೋಕ ವನದಲ್ಲಿ ಇರಿಸಿದರೂ ಆಕೆಯನ್ನು ಮುಟ್ಟಲಿಲ್ಲ. ಈಗಿರುವ ಶ್ರೀರಾಮಂದಿರು ಇದನ್ನೆಲ್ಲ ತಿಳಿಯಬೇಕು ಎಂದಿದ್ದಾರೆ.

Ravana was more decent than Rama: Kerala Minister G Sudhakaran

ಸ್ವಾಮಿಯ ಲಿಂಗ ಕತ್ತರಿಸಿದ ಬಾಲಕಿಗೆ ಪ್ರಶಸ್ತಿ ನೀಡಬೇಕೆಂದು ಸಚಿವರು ಹೇಳಿದ್ದಾರೆ. ಹೆಣ್ಣುಮಕ್ಕಳಿಗೆ ಧೈರ್ಯವಿದೆ ಎಂದು ಹೇಳಿ ತಿರುಗಾಡುವ ಮಹಿಳಾ ಸಂಘಟನೆಗಳು ಈ ವಿಷಯದತ್ತ ಗಮನ ಹರಿಸಬೇಕು. ಮಗಳ ವಿರುದ್ಧವೇ ಸಾಕ್ಷಿ ಹೇಳುವ ತಾಯಂದಿರು ಇರಬಾರದು. ತಿರುವನಂತಪುರದ ತಾಯಿ ವರ್ತನೆ ಸರಿಯಾದುದೇ? ಪ್ರಾಪ್ತವಯಸ್ಸಿನ ಮಗಳಿರುವಾಗ ಸನ್ಯಾಸಿಯನ್ನು ಮನೆಗೆ ಕರೆದು ಹಾಲು ಹಣ್ನು ಕೊಟ್ಟು ಮಲಗಿಸಿದರು. ಇದು ಸರಿಯೇ?

ಹೆಣ್ಣುಮಕ್ಕಳು ಮತ್ತು ಗಂಡು ಮಕ್ಕಳು ಮನೆಯ ಕೆಲಸ ಮಾಡಬೇಕು. ಮೊಣಕಾಲು ಬಗ್ಗಿಸಬೇಕು. ಕೃಷಿ ಕೆಲಸ ಮಾಡಬೇಕು. ಒಂದು ಕಾಲದಲ್ಲಿ ಹಸುವಿನ ಹಾಲು ಕರೆದು ಕಾಲೇಜಿಗೆ ಕಲಿಸಲು ಬರುತ್ತಿದ್ದ ಪ್ರೊಫೆಸರ್‌ಗಳಿದ್ದರು. ಕಠಿಣ ಪರಿಶ್ರಮದಿಂದ ಮನಸ್ಸು ಗಟ್ಟಿಯಾಗಿರುತ್ತದೆ. ಅವರು ಎಂದಿಗೂ ಕ್ರಿಮಿನಲ್‌ ಗಳ ಮೋಸದ ಬಲೆಯಲ್ಲಿ ಸಿಲುಕುವುದಿಲ್ಲ ಎಂದು ಸಚಿವ ಸುಧಾಕರನ್ ಹೇಳಿದರು.

English summary
Kerala Minister G Sudhakaran said Ravana, the villain of the epic Ramayana, was more decent in his behaviour towards Sita than Rama
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X