ರಾಷ್ಟ್ರಪತಿ ಭವನದ ಮೊಘಲ್ ಉದ್ಯಾನದ ಹೆಸರು ಬದಲಾವಣೆ, ಇಲ್ಲಿದೆ ಮಾಹಿತಿ
ರಾಷ್ಟ್ರಪತಿಗಳ ಅಧಿಕೃತ ನಿವಾಸ, ರಾಷ್ಟ್ರಪತಿ ಭವನದಲ್ಲಿರುವ ಉದ್ಯಾನಗಳಿಗೆ "ಆಜಾದಿ ಕಾ ಅಮೃತ್ ಮಹೋತ್ಸವ" ಆಚರಣೆಯ ಭಾಗವಾಗಿ ಹೊಸ ಹೆಸರನ್ನು ನೀಡಲಾಗಿದೆ.
ನವದೆಹಲಿ, ಜನವರಿ 28: ರಾಷ್ಟ್ರಪತಿಗಳ ಅಧಿಕೃತ ನಿವಾಸ, ರಾಷ್ಟ್ರಪತಿ ಭವನದಲ್ಲಿರುವ ಉದ್ಯಾನಗಳಿಗೆ "ಆಜಾದಿ ಕಾ ಅಮೃತ್ ಮಹೋತ್ಸವ" ಆಚರಣೆಯ ಭಾಗವಾಗಿ ಸಾಮಾನ್ಯ ಹೆಸರನ್ನು ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.
"ಸ್ವಾತಂತ್ರ್ಯದ 75ನೇ ವರ್ಷವನ್ನು ಆಜಾದಿ ಕಾ ಅಮೃತ್ ಮಹೋತ್ಸವ ಎಂದು ಆಚರಿಸುವ ಸಂದರ್ಭದಲ್ಲಿ, ಭಾರತದ ರಾಷ್ಟ್ರಪತಿಗಳು ರಾಷ್ಟ್ರಪತಿ ಭವನದ ಉದ್ಯಾನಗಳಿಗೆ ಅಮೃತ್ ಉದ್ಯಾನ್ ಎಂದು ಸಾಮಾನ್ಯ ಹೆಸರನ್ನು ನೀಡಿದ್ದಾರೆ ಎಂದು ಅಧ್ಯಕ್ಷರ ಉಪ ಪತ್ರಿಕಾ ಕಾರ್ಯದರ್ಶಿ ನವಿಕಾ ಗುಪ್ತಾ ತಿಳಿಸಿದ್ದಾರೆ.
ಆದ್ಯಾಗೂ ರಾಷ್ಟ್ರಪತಿ ಭವನದ ವೆಬ್ಸೈಟ್ನಲ್ಲಿ ಮೊಘಲ್ ಗಾರ್ಡನ್ಸ್ ಮತ್ತು ಅಮೃತ್ ಉದ್ಯಾನ್ ಎಂಬ ಎರಡು ಹೆಸರುಗಳನ್ನು ತೋರಿಸುತ್ತಿದೆ. 15 ಎಕರೆಯಲ್ಲಿ ಹರಡಿರುವ ಈ ಅಮೃತ್ ಉದ್ಯಾನವನ್ನು ರಾಷ್ಟ್ರಪತಿ ಭವನದ ಆತ್ಮ ಎಂದು ಚಿತ್ರಿಸಲಾಗಿದೆ ಎಂದು ವೆಬ್ಸೈಟ್ ಹೇಳುತ್ತದೆ.
ಸಾರ್ವಜನಿಕರಿಗೆ ತೆರೆಯಲಿದೆ ರಾಷ್ಟ್ರಪತಿ ಭವನ: ನೀವೂ ಭೇಟಿ ಕೊಡಿ
ಅಮೃತ್ ಉದ್ಯಾನ್ ಜಮ್ಮು ಮತ್ತು ಕಾಶ್ಮೀರದ ಮೊಘಲ್ ಗಾರ್ಡನ್ಸ್, ತಾಜ್ ಮಹಲ್ ಸುತ್ತಲಿನ ಉದ್ಯಾನಗಳು ಮತ್ತು ಭಾರತ ಮತ್ತು ಪರ್ಷಿಯಾದ ಚಿಕಣಿ ವರ್ಣಚಿತ್ರಗಳಿಂದ ಸ್ಫೂರ್ತಿ ಪಡೆದಿದೆ. "ಅಮೃತ್ ಉದ್ಯಾನವನ್ನು ಇಲ್ಲಿಯವರೆಗೆ ವಾರ್ಷಿಕ ಉತ್ಸವ, ಉದ್ಯಾನ ಉತ್ಸವದಲ್ಲಿ ಫೆಬ್ರವರಿ-ಮಾರ್ಚ್ ತಿಂಗಳುಗಳಲ್ಲಿ ಸಾರ್ವಜನಿಕರಿಗೆ ತೆರೆಯಲಾಗಿತ್ತು. ಆದರೆ ರಾಷ್ಟ್ರಪತಿ ಭವನ ಪ್ರವಾಸದ ಮೂರನೇ ಸರ್ಕ್ಯೂಟ್ ಅನ್ನು ರೂಪಿಸುವ ಮೊಘಲ್ ಗಾರ್ಡನ್ಸ್ ಈಗ ಆಗಸ್ಟ್ನಿಂದ ಮಾರ್ಚ್ವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ" ಎಂದು ರಾಷ್ಟ್ರಪತಿ ಭವನದ ವೆಬ್ಸೈಟ್ ತಿಳಿಸಿದೆ.
ಅಮೃತ್ ಉದ್ಯಾನ್ ಅನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜನವರಿ 29 ರ ಭಾನುವಾರದಂದು ಉದ್ಘಾಟಿಸಲಿದ್ದಾರೆ. ಜನವರಿ 31 ರಿಂದ ಮಾರ್ಚ್ 26 ರವರೆಗೆ ಎರಡು ತಿಂಗಳ ಕಾಲ ಸಾರ್ವಜನಿಕರಿಗೆ ತೆರೆದಿರುತ್ತದೆ. ಸಾಮಾನ್ಯವಾಗಿ ಉದ್ಯಾನವು ಫೆಬ್ರವರಿಯಿಂದ ಮಾರ್ಚ್ ಹೂವುಗಳು ಪೂರ್ಣವಾಗಿ ಅರಳಿದಾಗ ಸಾರ್ವಜನಿಕ ವೀಕ್ಷಣೆಗೆ ಒಂದು ತಿಂಗಳು ತೆರೆದಿರುತ್ತದೆ.
ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗುವಂತೆ ಎರಡು ತಿಂಗಳ ಅವಧಿಯನ್ನು ಹೊರತುಪಡಿಸಿ, ರೈತರು ಮತ್ತು ವಿಕಲಚೇತನರಂತಹ ವಿಶೇಷ ಗುಂಪುಗಳ ವೀಕ್ಷಣೆಗೆ ಉದ್ಯಾನವನ್ನು ಮುಕ್ತವಾಗಿಡಲು ಸರ್ಕಾರ ಯೋಜಿಸಿದೆ ಎಂದು ನಾವಿಕಾ ಗುಪ್ತಾ ಹೇಳಿದ್ದಾರೆ. ಮೊಘಲ್ ಉದ್ಯಾನವನ್ನು ಸಾಮಾನ್ಯವಾಗಿ ಪ್ರತಿ ವರ್ಷ ಒಂದು ತಿಂಗಳ ಕಾಲ ಸಾರ್ವಜನಿಕ ವೀಕ್ಷಣೆಗೆ ತೆರೆಯಲಾಗುತ್ತದೆ. ಪ್ರವಾಸಿಗರು ಆಯತಾಕಾರದ, ಉದ್ದ ಮತ್ತು ವೃತ್ತಾಕಾರದ ಉದ್ಯಾನಗಳು, ಹರ್ಬಲ್ ಗಾರ್ಡನ್, ಮ್ಯೂಸಿಕಲ್ ಗಾರ್ಡನ್ ಮತ್ತು ಸ್ಪಿರಿಚ್ಯುಯಲ್ ಗಾರ್ಡನ್ ಇವುಗಳೆಲ್ಲವೂ ಮೊಘಲ್ ಉದ್ಯಾನದ ಆಕರ್ಷಣೆಯಾಗಿವೆ.