ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಯೋಧ್ಯೆ: ಮಧ್ಯಸ್ಥಿಕೆಗೆ ಬಂದ ರವಿಶಂಕರ್ ರನ್ನು ಗೇಲಿ ಮಾಡಿದ ಓವೈಸಿ
ನವದೆಹಲಿ, ನವೆಂಬರ್ 13: ಅಯೋಧ್ಯೆ ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವುದಾಗಿ ಹೇಳಿದ್ದ ಶ್ರೀ ಶ್ರೀ ರವಿಶಂಕರ್ ಆಹ್ವಾನವನ್ನು ಆಲ್ ಇಂಡಿಯಾ ಮಜ್ಲಿಸ್ ಇ ಇತ್ತೆಹುದಾಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಓವೈಸಿ ತಿರಸ್ಕರಿಸಿದ್ದಾರೆ.
ರಾಮ ಮಂದಿರ ಬಿಕ್ಕಟ್ಟು: ರವಿಶಂಕರ್-ಶಿಯಾ ವಕ್ಫ್ ಮಂಡಳಿ ಮುಖ್ಯಸ್ಥ ಭೇಟಿ
"ಈ ರೀತಿಯ ಆಫರ್ ಗಳನ್ನು ಸ್ವೀಕರಿಸುವುದಿಲ್ಲ ಎಂದು ಈ ಹಿಂದೆಯೇ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸ್ಪಷ್ಟಪಡಿಸಿದೆ," ಎಂಬುದಾಗಿ ಓವೈಸಿ ಹೇಳಿದ್ದಾರೆ.
ಮೊದಲು ಶ್ರೀ ಶ್ರೀ ರವಿಶಂಕರ್ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಹೇರಿರುವ ದಂಡವನ್ನು ಕಟ್ಟಲಿ ಎಂದು ಕಿಡಿಕಾರಿರುವ ಓವೈಸಿ, "ಅವರು (ರವಿಶಂಕರ್) ಮಧ್ಯವರ್ತಿಯಾಗುವ ಮೂಲಕ ನೊಬೆಲ್ ಪ್ರಶಸ್ತಿ ಪಡೆಯಲು ಸಾಧ್ಯವಿಲ್ಲ," ಎಂದು ಛೇಡಿಸಿದ್ದಾರೆ.
ರವಿಶಂಕರ್ 'ರಾಮ ಮಂದಿರ ಸಂಧಾನ'ಕ್ಕೆ ಬಿಜೆಪಿ ನಾಯಕರಿಂದಲೇ ವಿರೋಧ
Comments
English summary
The president of All India Majlis-e-Ittehadul Muslimeen (AIMIM) Asaduddin Owaisi on Monday dismissed Sri Sri Ravi Shankar's offer of mediation in the Ayodhya Ram temple issue.
Story first published: Monday, November 13, 2017, 20:10 [IST]