ರಕ್ಷಾಬಂಧನ: ಮುಸ್ಲಿಂ ಮಹಿಳೆಯರಿಂದ ಪ್ರಧಾನಿ ಮೋದಿಗಾಗಿ ರಾಖಿ ತಯಾರಿಕೆ
ವಾರಣಾಸಿ, ಆಗಸ್ಟ್ 25: ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ಉತ್ತ್ರ ಪ್ರದೇಶದ ವಾರಣಾಸಿಯಲ್ಲಿ ಮುಸ್ಲಿಂ ಮಹಿಳೆಯರು ರಾಖಿ ತಯಾರಿಸಿದ್ದಾರೆ.
ಭ್ರಾತೃತ್ವದ ಸಂಕೇತವಾಗಿ ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲ್ಪಡುವ ರಕ್ಷಾಬಂಧನ ಈ ವರ್ಷ ಆ.26 ರಂದು, ಭಾನುವಾರ ನಡೆಯಲಿದೆ.
ಭ್ರಾತೃತ್ವದ ದ್ಯೋತಕ ರಾಖಿ ಹಬ್ಬ: ಪುರಾಣ, ಐತಿಹಾಸಿಕ ಮಹತ್ವ
2013 ರಿಂದ ಮುಸ್ಲಿಂ ಮಹಿಳಾ ಸಂಘಟನೆ(MWF) ಪ್ರಧಾನಿ ನರೇಮದ್ರ ಮೋದಿಯವರಿಗೆ ರಾಖಿಯನ್ನು ಕಳಿಸಿಕೊಡುತ್ತಿದೆ. ಮುಸ್ಲಿಂ ಮಹಿಳೆಯರೇ ಈ ರಾಖಿ ತಯಾರಿಸಿ ಮೋದಿಯವರಿಗೆ ಕಳಿಸಿಕೊಂಡುವ ಮೂಲಕ ಭ್ರಾತೃತ್ವದ ಜೊತೆಗೆ ಸಹಬಾಳ್ವೆ, ಕೋಮುಸೌಹಾರ್ದದ ಸಂದೇಶ ಸಾರುತ್ತಾರೆ.
"ನಾವು ನರೇಂದ್ರ ಮೋದಿ ಅವರನ್ನು ನಮ್ಮ ಹಿರಿಯ ಸಹೋದರ ಮತ್ತು ತಂದೆಗೆ ಸಮಾನ ಎಂದು ತಿಳಿದಿದ್ದೇವೆ. ಆದ್ದರಿಂದ ಪ್ರತಿವರ್ಷವೂ ರಾಖಿ ತಯಾರಿಸಿ ಅವರಿಗೆ ಕಳಿಸುತ್ತೇವೆ. ಅವರು ನಮ್ಮನ್ನು ಕಾಪಾಡುತ್ತಿದ್ದಾರೆ ಎಂಬ ಭಾವನೆ ನಮ್ಮದು. ಅವರು ಮುಂದೆಯೂ ನಮ್ಮನ್ನು ಕಾಪಾಡುತ್ತಾರೆ ಎಂಬ ನಂಬಿಕೆ ನಮಗಿದೆ" ಎನ್ನುತ್ತಾರೆ ಈ ಸಂಘಟನೆಯ ಸದಸ್ಯರು.
"ತ್ರಿವಳಿ ತಲಾಖ್ ವಿಷಯದಲ್ಲೂ ನಮಗೆ ಪ್ರಧಾನಿಯವರಿಂದ ನ್ಯಾಯ ದೊರೆಯುತ್ತದೆ ಎಂಬ ನಂಬಿಕೆ ಇದೆ" ಎಂಬುದು ಅವರ ಭರವಸೆಯ ನುಡಿ!