ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್‌ಕೋಟ್‌: ಬೆಲ್ಟ್‌ನಿಂದ ಥಳಿಸಿ ದಲಿತ ವ್ಯಕ್ತಿಯ ಕೊಲೆ

|
Google Oneindia Kannada News

ಅಹಮದಾಬಾದ್, ಮೇ 21: ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಕಾರ್ಖಾನೆಯೊಂದರ ಕಾರ್ಮಿಕರು ದಲಿತ ವ್ಯಕ್ತಿಯೊಬ್ಬರನ್ನು ಹೊಡೆದು ಹತ್ಯೆ ಮಾಡಿದ್ದಾರೆ.

ಶಾಪರ್ ಕೈಗಾರಿಕಾ ವಲಯದಲ್ಲಿ ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದೆ.

ವಿಪರೀತ ಜ್ವರ: ನಿಪಾಹ್‌ ವೈರಸ್‌ಗೆ ಕೇರಳದಲ್ಲಿ 9 ಮಂದಿ ಬಲಿವಿಪರೀತ ಜ್ವರ: ನಿಪಾಹ್‌ ವೈರಸ್‌ಗೆ ಕೇರಳದಲ್ಲಿ 9 ಮಂದಿ ಬಲಿ

ಗುತ್ತಿಗೆ ಕಾರ್ಮಿಕ ಮುಕೇಶ್ ಸಾವ್ಜಿ ವಾನಿಯಾ (40) ಎಂಬುವವರನ್ನು ಮೂವರು ಥಳಿಸಿ ಹತ್ಯೆ ಮಾಡುವ ವಿಡಿಯೋ ಸೌರಾಷ್ಟ್ರದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ತನಿಖೆ ಆರಂಭಿಸಿ ಐವರನ್ನು ಬಂಧಿಸಿದ್ದಾರೆ.

ಮುಕೇಶ್, ಪತ್ನಿ ಜಯಾ ಮತ್ತು ಇನ್ನೊಬ್ಬ ಮಹಿಳೆ ಸವಿತಾ ಜತೆ ರಾದಾದಿಯಾ ಇಂಡಸ್ಟ್ರೀಸ್‌ನಲ್ಲಿ ಅನುಪಯುಕ್ತ ವಸ್ತುಗಳನ್ನು ಸಂಗ್ರಹಿಸುತ್ತಿದ್ದರು. ಆಗ ಕಾರ್ಖಾನೆಯ ಕೆಲಸಗಾರರು ಈ ಮೂವರ ಮೇಲೆ ಹಲ್ಲೆ ನಡೆಸಿದ್ದಾರೆ.

rajkot dalit beaten death by factory workers

ಇಬ್ಬರು ಮಹಿಳೆಯರಿಗೂ ಥಳಿಸಿದ ಕಾರ್ಮಿಕರು ಅವರನ್ನು ಎಳೆದು ಹೊರಹಾಕಿದರು, ಬಳಿಕ ಮುಕೇಶ್‌ನನ್ನು ಫ್ಯಾಕ್ಟರಿಯ ಗೇಟ್‌ಗೆ ಕಟ್ಟಿಹಾಕಿ ಬೆಲ್ಟ್‌ನಿಂದ ಹಲ್ಲೆ ನಡೆಸಿದರು ಎಂಬುದಾಗಿ ಜಯಾ ದೂರಿನಲ್ಲಿ ತಿಳಿಸಿದ್ದಾರೆ ಎಂದು ಶಾಪರ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ರಮೇಶ್ ಸಿಂಧು ತಿಳಿಸಿದರು.

ಛತ್ತೀಸ್ ಗಢದಲ್ಲಿ ನಕ್ಸಲರ ಅಟ್ಟಹಾಸಕ್ಕೆ 6 ಸೈನಿಕರು ಬಲಿಛತ್ತೀಸ್ ಗಢದಲ್ಲಿ ನಕ್ಸಲರ ಅಟ್ಟಹಾಸಕ್ಕೆ 6 ಸೈನಿಕರು ಬಲಿ

ಮಹಿಳೆಯರನ್ನು ಹೊರಗೆ ಅಟ್ಟಿದ ಬಳಿಕ ಅವರು ಮುಕೇಶ್‌ನನ್ನು ರಕ್ಷಿಸಲು ಸಂಬಂಧಿಕರನ್ನು ಕರೆತರುವವರೆಗೂ ಮುಕೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ರಾಜಕೋಟ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮುಕೇಶ್ ಮೃತಪಟ್ಟಿದ್ದಾರೆ. ಮುಕೇಶ್ ಪತ್ನಿ ಜಯಾ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮುಕೇಶ್‌ನನ್ನು ಕಳ್ಳ ಎಂದು ಭಾವಿಸಿ ಕಾರ್ಖಾನೆ ಕಾರ್ಮಿಕರು ಹಲ್ಲೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಅದನ್ನು ಪೊಲೀಸರು ದೃಢಪಡಿಸಿಲ್ಲ.

English summary
A Dalit man allegedly beaten to death by workers of a factory. Incident was happened in Rajkot district of Gujarat. Police deatained two people regarding this case
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X