ಅರ್ನಬ್ ಗೋಸ್ವಾಮಿ ಹಸಿ ಸುಳ್ಳುಗಾರ ಎಂದ ರಾಜ್ದೀಪ್ ಸರ್ದೇಸಾಯಿ
ನವದೆಹಲಿ, ಸೆಪ್ಟೆಂಬರ್ 20: ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಭಾಷಣವೊಂದರಲ್ಲಿ ಹೇಳಿದ್ದ ಹಸಿ ಸುಳ್ಳನ್ನು ಅವರ ಮಾಜಿ ಬಾಸ್ ಸದ್ಯ ಇಂಡಿಯಾ ಟುಡೇ ಟಿವಿಯ ಕನ್ಸಲ್ಟಿಂಗ್ ಎಡಿಟರ್ ರಾಜ್ದೀಪ್ ಸರ್ದೇಸಾಯಿ ಬಿಚ್ಚಿಟ್ಟಿದ್ದಾರೆ.
ಗುಜರಾತ್ ಗಲಭೆ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಅರ್ನಬ್ ಗೋಸ್ವಾಮಿ ಮಾತನಾಡಿದ್ದರು. ಈ ವಿಡಿಯೋ ಶೇರ್ ಮಾಡಿ ಟ್ವೀಟ್ ಮಾಡಿದ ರಾಜ್ದೀಪ್, "ವಾವ್! ಗುಜರಾತ್ ಗಲಭೆಯಲ್ಲಿ ಸಿಎಂ ನಿವಾಸದ ಪಕ್ಕ ನನ್ನ ಗೆಳೆಯ ಅರ್ನಬ್ ಗೋಸ್ವಾಮಿಯ ಕಾರಿನ ಮೇಲೆ ದಾಳಿ ನಡೆಸಲಾಯಿತು. ಸತ್ಯ: ಅವರು ಅಹಮದಾಬಾದ್ ಗಲಭೆಯನ್ನು ಕವರ್ ಮಾಡಿರಲಿಲ್ಲ," ಎಂದು ಟ್ವೀಟ್ ನಲ್ಲಿ ಹೇಳಿದ್ದಾರೆ.
Wow! My friend Arnab claims his car attacked next to CM Res in Guj riots! Truth:he wasn't covering Ahmedabad riots!! https://t.co/xOe7zY8rCp
— Rajdeep Sardesai (@sardesairajdeep) September 19, 2017
ಮತ್ತೊಮ್ಮೆ ಇದೇ ವಿಡಿಯೋವನ್ನು ಶೇರ್ ಮಾಡಿ ಟ್ವೀಟ್ ಮಾಡಿದ ರಾಜ್ದೀಪ್ ಸರ್ದೇಸಾಯಿ, "ನಕಲಿಗಿರಿಗೂ ಒಂದು ಲಿಮಿಟ್ ಇದೆ," ಎಂದು ಟ್ವೀಟ್ ಮಾಡಿ ಗೋಸ್ವಾಮಿಯನ್ನು ಕೆಣಕಿದ್ದಾರೆ. ಸದ್ಯ ರಾಜ್ದೀಪ್ ಸರ್ದೇಸಾತಿ ಶೇರ್ ಮಾಡಿದ ವಿಡಿಯೋ ಯೂಟ್ಯೂಬ್ ನಿಂದಲೇ ಡಿಲೀಟ್ ಆಗಿದೆ.
Fekugiri has its limits, but seeing this, I feel sorry for my profession. https://t.co/xOe7zY8rCp
— Rajdeep Sardesai (@sardesairajdeep) September 19, 2017