ರಾಜಸ್ಥಾನದಲ್ಲಿ ಅತ್ಯಾಚಾರ, ಮುಂದೇನಾಯ್ತೆಂದರೆ..
ರಾಜಸ್ಥಾನ ಅ, 14 : ಬಲಾತ್ಕಾರ ಮಾಡಲು ಹೋದವ ತನ್ನ 'ಬಲ'ವನ್ನೇ ಕಳೆದುಕೊಂಡಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿ ಅತ್ಯಾಚಾರ ಮಾಡಲು ಯತ್ನಿಸಿದವನ ಶಿಶ್ನವನ್ನೇ ಕತ್ತರಿಸಿ ಬಿಸಾಡಲಾಗಿದೆ.
ರಾಜಸ್ಥಾನದ ಗಂಗಾನಗರದಲ್ಲಿ ಇಂಥ ಪ್ರಕರಣವೊಂದು ನಡೆದಿದ್ದು ಅತ್ಯಾಚಾರಿಗಳಿಗೆ ಇದೊಂದು ಪಾಠ ಎಂದೇ ಹೇಳಲಾಗಿದೆ. ಬಲಾತ್ಕಾರ ಮಾಡಲು ಯತ್ನಿಸಿದವ ಜನರಿಂದ ಸರಿಯಾಗಿ ಧರ್ಮದೇಟು ತಿಂದಿದ್ದಾನೆ.[ಗೋವರ್ಧನಮೂರ್ತಿ ಮೇಲೆ ಅತ್ಯಾಚಾರ ಪ್ರಕರಣ]
ಸುರೇಶ್ ಕುಮಾರ್(46) ಎಂಬಾತ ಯುವತಿಯೊಬ್ಬಳ ಮೇಲೆ ಸಾರ್ವಜನಿಕವಾಗಿ ಅತ್ಯಾಚಾರಕ್ಕೆ ಯತ್ತಿಸುತ್ತಿದ್ದ. ಇದನ್ನು ನೋಡಿದ ಜನರು ಆತನನ್ನು ಹತ್ತಿರದ ಮಾಂಸದಂಗಡಿಯೊಂದಕ್ಕೆ ಕರೆದುಮೊಂಡು ಹೋಗಿ ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ. ಹತ್ತಿರದಲ್ಲಿದ್ದ ದೊಣ್ಣೆ ಮತ್ತಿತರ ವಸ್ತುಗಳನ್ನು ತೆಗೆದುಕೊಂಡ ಜನರು ಸುಮಾರು ಒಂದು ಗಂಟೆ ಕಾಲ ಥಳಿಸಿದ್ದಾರೆ. ನಂತರ ಹರಿತವಾದ ಆಯುಧವೊಂದನ್ನು ತೆಗೆದುಕೊಂಡು ಆತನ ಜನನಾಂಗಕ್ಕೆ ಕತ್ತರಿ ಹಾಕಿದ್ದಾರೆ.
ಡೈಲಿ ರೊಪೋರ್ಟ್ ವರದಿ ಹೇಳಿರುವಂತೆ ಕಾಮುಕ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಯಾರಿಬ್ಬರೂ ಆತನ ನೆರವಿಗೆ ಧಾವಿಸಲಿಲ್ಲ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಅತ್ಯಾಚಾರಿಯನ್ನು ವಶಕ್ಕೆ ಪಡೆದಿದ್ದಾರೆ.[ಸಾಮಾಜಿಕ ಕಾರ್ಯಕರ್ತೆಗೆ ಲೈಂಗಿಕ ಕಿರುಕುಳ]
ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆಯಾಗಬೇಕಿರುವುದು ನಿಜ. ಆದರೆ ನಾಗರಿಕರೆ ಕಾನೂನು ಉಲ್ಲಂಘನೆ ಮಾಡುವುದು ಸರಿಯಲ್ಲ. ಅಪರಾಧಿಗಳಿಗೆ ಶಿಕ್ಷೆ ನೀಡಲು ಸಂವಿಧಾನಾತ್ಮಕ ವ್ಯವಸ್ಥೆಯಿದ್ದು ಅದರಂತೆ ಎಲ್ಲರೂ ನಡೆದುಕೊಳ್ಳಬೇಕು ಎಂದು ಪೊಲೀಸರು ಹೇಳಿದ್ದಾರೆ.