ಕರ್ನಾಟಕದ ಐದು ಎಸಿ ಟ್ರೈನ್ ಗಳ ಪ್ರಯಾಣ ದರ ಇಳಿಕೆ
ನವದೆಹಲಿ, ಆಗಸ್ಟ್ 12: ಪ್ರಯಾಣಿಕರಿಗೆ ನೀಡುತ್ತಿದ್ದ ಉಚಿತ ಪ್ರಯಾಣ ವಿಮೆ ಸೌಲಭ್ಯವನ್ನು ಸ್ಥಗಿತಗೊಳಿಸಿದ ಸುದ್ದಿಯ ಬೆನ್ನಲ್ಲೇ, ಕರ್ನಾಟಕದ ಐದು ಎಸಿ ಟ್ರೈನ್ ಗಳ ಪ್ರಯಾಣ ದರ ಇಳಿಕೆಯಾಗಿರುವ ಸುದ್ದಿ ಬಂದಿದೆ.
ಪ್ರಯಾಣಿಕರು ಹೆಚ್ಚೆಚ್ಚು ಹವಾನಿಯಂತ್ರಿತ (ಎಸಿ) ಟ್ರೈನ್ ಗಳಲ್ಲಿ ಪ್ರಯಾಣಿಸುವುದನ್ನು ಉತ್ತೇಜಿಸಲು ಈ ಕ್ರಮ ಕೈಗೊಂಡಿರುವುದಾಗಿ ಈಶಾನ್ಯ ರೈಲ್ವೆ ವಲಯ ತಿಳಿಸಿದೆ.
ನೈಋತ್ಯ ರೈಲ್ವೆಯಲ್ಲಿ ಶೀಘ್ರವೇ 2,500 ಹುದ್ದೆ ಭರ್ತಿ
ಬೆಂಗಳೂರು, ಗದಗ ಹಾಗೂ ಮೈಸೂರಿನಿಂದ ಪ್ರಯಾಣಿಸುವ ರೈಲುಗಳ ಪ್ರಯಾಣ ದಾರ ಇಳಿಕೆಯಾಗಿದೆ. ಬಸ್ ಅಥವಾ ವಿಮಾನ ಸಂಚಾರಕ್ಕಿಂತ ಸೂಪರ್ ಫಾಸ್ಟ್ ಟೈನ್ ನಲ್ಲಿ ಹೆಚ್ಚು ಪ್ರಯಾಣ ಮಾಡುವಂತಾಗಬೇಕು. ಇದಕ್ಕಾಗಿ ಮೈಸೂರು -ಚೆನ್ನೈ ನಡುವಿನ ಶತಾಬ್ದಿ ಎಕ್ಸ್ ಪ್ರೆಸ್ ನ ಪ್ರಯಾಣ ದರ ಇಳಿಕೆ ಮಾಡಲಾಗಿದೆ. ಎಂದು ನೈಋತ್ಯ ರೈಲ್ವೆ ವಲಯದ ವಕ್ತಾರರು ಹೇಳಿದ್ದಾರೆ.
ಇದಲ್ಲದೆ, ಬೆಂಗಳೂರಿನ ಯಶವಂತಪುರ-ಹುಬ್ಬಳ್ಳಿ ನಡುವಿನ ಎಕ್ಸ್ ಪ್ರೆಸ್ ನ ಎಸಿ ಪ್ರಯಾಣ ದರವನ್ನು 735 ರು ಗಳಿಂದ 530 ರು ಗಳಿಗೆ ಇಳಿಸಲಾಗಿದೆ.
ಗದಗ-ಮುಂಬೈ ಎಕ್ಸ್ ಪ್ರೆಸ್ ನ ಬೆಲೆಯನ್ನು 495 ರಿಂದ 435 ರುಗಳಿಗೆ ತಗ್ಗಿಸಲಾಗಿದೆ. ನವೆಂಬರ್ 11ರಿಂದ ಕರ್ನಾಟಕದ ಕಲಬುರಗಿಯಿಂದ ಮಹಾರಾಷ್ಟ್ರದ ಸೋಲಾಪುರದ ತನಕ ಪ್ರಯಾಣ ಲಭ್ಯ.
ಪಂಡರಾಪುರ, ರೆಣಿಗುಂಟಕ್ಕೆ ನೂತನ ಎಕ್ಸ್ಪ್ರೆಸ್ ರೈಲು ಆರಂಭ
ಮೈಸೂರು- ಶಿರಡಿ ವೀಕ್ಲಿ ಎಕ್ಸ್ಪ್ ಪ್ರೆಸ್ ಬೆಂಗಳೂರು ಹಾಗೂ ಮೈಸೂರು ನಡುವೆ ಸಂಚರಿಸಲಿದ್ದು ಡಿಸೆಂಬರ್ 03ರಿಂದ 495ರು ನಿಂದ ಬೆಲೆ 260 ರು ಗಳಿಗೆ ಇಳಿಕೆಯಾಗಲಿದೆ.
ಯಶವಂತಪುರದ- ಸಿಕಂದರಾಬಾದ್ ಎಕ್ಸ್ ಪ್ರೆಸ್ ನ ಎಸಿ ಪ್ರಯಾಣ ದರವು ನವೆಂಬರ್ 22ರಿಂದ 345 ರು ಗಳ ಪ್ರಯಾಣ ದರವು 305ರುಗಳುಗೆ ತಗ್ಗಲಿದೆ.