ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮನನೊಂದು ರಾಜೀನಾಮೆಗೆ ಮುಂದಾಗಿದ್ದ ರೈಲ್ವೆ ಸಚಿವ ಪ್ರಭು
ನವದೆಹಲಿ, ಆಗಸ್ಟ್ 23: ಸಾಲು ಸಾಲು ರೈಲು ದುರಂತಗಳನ್ನು ಕಂಡು ಮನನೊಂದು ರಾಜೀನಾಮೆ ನೀಡಲು ಸಚಿವ ಸುರೇಶ್ ಪ್ರಭು ಮುಂದಾಗಿದ್ದರು.ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದ ಪ್ರಭು ಅವರನ್ನು ಪ್ರಧಾನಿ ಮೋದಿ ಅವರು ಕರೆಸಿಕೊಂಡು ಮಾತನಾಡಿಸಿದ್ದಾರೆ.
ನಂತರ, ಸುರೇಶ್ ಪ್ರಭು ಅವರು ತಮ್ಮ ನಿರ್ಧಾರದಿಂದ ಪ್ರಭು ಅವರು ಹಿಂದೆ ಸರಿದಿದ್ದಾರೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ನಾನು ಮುಂದಾಗಿದ್ದೆ, ಆದರೆ, ಮೋದಿ ಅವರು ನನ್ನನ್ನು ತಡೆದರು ಎಂದು ಪ್ರಭು ಹೇಳಿದ್ದಾರೆ.
ಇದಕ್ಕೂ ಮುನ್ನ ರೈಲ್ವೆ ಬೋರ್ಡಿನ ಚೇರ್ಮನ್ ಅಶೋಕ್ ಮಿತ್ತಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಅಂಗೀಕಾರವೂ ಆಗಿದೆ. ಕಳೆದ ಮೂರು ವರ್ಷಗಳಲ್ಲಿ 27ಕ್ಕೂ ಅಧಿಕ ಅಪಘಾತಗಳಾಗಿವೆ, ಕಳೆದ ವಾರದಲ್ಲೇ ಮೂರು ಬಾರಿ ರೈಲ್ವೆ ಹಳಿ ತಪ್ಪಿದ ಘಟನೆಗಳು ಸಂಭವಿಸಿದೆ.
New India envisioned by PM deserves a Rlys which is efficient and modern. I promise that is the path, on which Rlys is progressing now (3/5)
— Suresh Prabhu (@sureshpprabhu) August 23, 2017
2014ರಿಂದ ರೈಲ್ವೇ ಬೋರ್ಡ್ ಚೇರ್ಮನ್ ಆಗಿದ್ದ ಅಶೋಕ್ ಅವರು, ಮುಜಾಫರ್ ನಗರದ ದುರಂತದ ಬಳಿಕ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ಸಮ್ಮತಿ ಇಲ್ಲದೆ ರಾಜೀನಾಮೆ ನೀಡಿದ್ದಾರೆ.
Comments
suresh prabhu resignation narendra modi indian railways ಸುರೇಶ್ ಪ್ರಭು ರಾಜೀನಾಮೆ ನರೇಂದ್ರ ಮೋದಿ ಭಾರತೀಯ ರೈಲ್ವೆ
English summary
Railway Minister Suresh Prabhu on Wednesday offered to resign after two derailment incidents. He said Prime Minister Narendra Modi told me to be patient and work for the betterment of the railway network