ಪ್ರಣಯ ಗೀತೆ ಹಾಡದ ಕಾರಣಕ್ಕೆ ಛತ್ತೀಸ್ ಗಢ ರೈಲ್ವೆಯಿಂದ ಅಮಾನತು ಶಿಕ್ಷೆ
ಛತ್ತೀಸ್ ಗಢದ ರಾಯ್ ಪುರ್ ರೈಲ್ವೆ ವಿಭಾಗದ ಜನರಲ್ ಮ್ಯಾನೇಜರ್ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಅಂಜಲಿ ತಿವಾರಿ ಎಂಬುವರು ಪ್ರಣಯಗೀತೆವೊಂದನ್ನು ಹಾಡಲಿಲ್ಲ ಎಂಬ ಕಾರಣಕ್ಕೆ ಅಮಾನತು ಮಾಡಲಾಗಿದೆ.
ರಾಯ್ ಪುರ್, ಜನವರಿ 23: ಕಾರ್ಯಕ್ರಮವೊಂದರಲ್ಲಿ ಪ್ರಣಯ ಗೀತೆ ಹಾಡಲು ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬರನ್ನು ಅಮಾನತು ಮಾಡಲಾಗಿದೆ. ಅಂಜಲಿ ತಿವಾರಿ-ಹಿರಿಯ ಗುಮಾಸ್ತೆ, ಅಮಾನತಾದವರು. ಆಕೆ ಛತ್ತೀಸ್ ಗಢ ರೈಲ್ವೆಗೆ ಸಾಂಸ್ಕೃತಿಕ ಮೀಸಲಾತಿ ಅಡಿ ಆಯ್ಕೆಯಾದವರು. ಜನರಲ್ ಮ್ಯಾನೇಜರ್ ಸೂಚಿಸಿದ ನಿರ್ದಿಷ್ಟ ಪ್ರಣಯ ಗೀತೆ ಹಾಡಲು ನಿರಾಕರಿದರು ಎಂದು ಅಕೆಯನ್ನು ಅಮಾನತು ಮಾಡಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಗಿರಗಿರ ತಿರುಗಾಡುತ್ತಿದೆ. ಇನ್ನು ಸುತ್ತೋಲೆಯ ಪ್ರಕಾರ, ಜನವರಿ 16ರಂದು ಸಾಂಸ್ಕೃತಿಕ ಕಾರ್ಯಕ್ರಮ ಇತ್ತು. ಅಂತಿಮ ಹಂತದಲ್ಲಿ, ತಿವಾರಿ ಅವರಿಗೆ ಕೆಲವು ಪ್ರಣಯ ಗೀತೆಗಳಿಗೆ ಸಿದ್ಧವಾಗುವಂತೆ ತಿಳಿಸಲಾಗಿದೆ. ಮತ್ತು ಅದನ್ನು ಜನರಲ್ ಮ್ಯಾನೇಜರ್ ಅವರ ಜೊತೆಗೂಡಿ ಹಾಡಬೇಕು ಎಂದು ಸೂಚಿಸಲಾಗಿದೆ.[ಮಾರ್ಚ್ 1ರಿಂದ ಮಂಗ್ಳೂರು-ಬೆಂಗ್ಳೂರು ರೈಲು ಸಂಚಾರ ಆರಂಭ]
ಕಾರ್ಯಕ್ರಮದ ವೇಳೆ, ಒಂದು ನಿರ್ದಿಷ್ಟ ಹಾಡನ್ನು ಹಾಡುವಂತೆ ಜನರಲ್ ಮ್ಯಾನೇಜರ್ ಕೇಳಿದ್ದಾರೆ. ಆ ಹಾಡಿಗೆ ಸಿದ್ಧತೆ ನಡೆಸಿಲ್ಲ. ಹಾಡಲು ಸಾಧ್ಯವಿಲ್ಲ ಎಂದು ಆಕೆ ಹೇಳಿದ್ದಾಗಿ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಸಾಂಸ್ಕೃತಿಕ ಕೋಟಾದಡಿ ಆಯ್ಕೆಯಾದ ಉದ್ಯೋಗಿಗೆ ಮುಂಚಿತವಾಗಿಯೇ ಅಧಿಕಾರಿ (ವಲಯ ರೈಲ್ವೆ ನಿರ್ವಾಹಕ) ಸೂಚನೆ ನೀಡಿದ್ದರು. ಆದರೂ ಆಕೆಯ ಈ ರೀತಿ ವರ್ತನೆ ಸರಿಯಲ್ಲ. ಇದು ಆಕೆಗೆ ಕೆಲಸದೆಡೆಗಿನ ನಿರ್ಲಕ್ಷ್ಯ ತೋರುತ್ತದೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.[ಅನಂತ ಕುಮಾರ್ ಹೆಸರನ್ನು ರೈಲ್ವೆ ಸಚಿವರು ಎರಡು ಸಲ ಹೇಳಿದ್ದೇಕೆ?]
ಜತೆಗೆ ರಾಯ್ ಪುರ್ ವಿಭಾಗದಲ್ಲಿ ನಡೆಯುವ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಆರು ತಿಂಗಳ ಕಾಲ ತಿವಾರಿ ಮೇಲೆ ನಿಷೇಧ ಹೇರಲಾಗಿದೆ.