ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 'ಮಾನಸಿಕ ಅಸ್ವಸ್ಥರು' : ಉಮಾಭಾರತಿ
ಭೋಪಾಲ್, ಆಗಸ್ಟ್ 27: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 'ಮಾನಸಿಕ ಅಸ್ವಸ್ಥರು' ಎಂದು ಕೇಂದ್ರ ಸಚಿವೆ ಉಮಾಭಾರತಿ ಭಾನುವಾರ ವಾಗ್ದಾಳಿ ನಡೆಸಿದರು. ಆರೆಸ್ಸೆಸ್ ಅನ್ನು ಮುಸ್ಲಿಮ್ ಬ್ರದರ್ ಹುಡ್ ಗೆ ಹೋಲಿಕೆ ಮಾಡಿ ಈಚೆಗೆ ರಾಹುಲ್ ಗಾಂಧಿ ಮಾತನಾಡಿದ್ದರು. ಆ ವಿಚಾರವಾಗಿ ಉಮಾಭಾರತಿ ಆಕ್ರೋಶ ವ್ಯಕ್ತಪಡಿಸಿದರು.
1984ರ ಸಿಖ್ ವಿರೋಧಿ ದಂಗೆಯಲ್ಲಿ ಕಾಂಗ್ರೆಸ್ ನ ಪಾತ್ರವಿಲ್ಲ ಎಂದು ಸಹ ರಾಹುಲ್ ಗಾಂಧಿ ಹೇಳಿದ್ದರು. ಆ ಹೇಳಿಕೆಗೆ ಸ್ವತಃ ಕಾಂಗ್ರೆಸ್ಸಿಗರೇ ಆಘಾತಕ್ಕೆ ಒಳಗಾಗಿದ್ದಾರೆ ಎಂದು ಉಮಾಭಾರತಿ ಹೇಳಿದ್ದಾರೆ.
ಮಲ್ಯ, ನೀರವ್ ಪರಾರಿಗೆ ಬಿಜೆಪಿ ನಾಯಕರಿಂದ ನೆರವು: ರಾಹುಲ್ ಗಾಂಧಿ
"ರಾಹುಲ್ ಮಾತನಾಡುವುದೇನು ಹಾಗೂ ಮಾಡುವುದೇನು ಅನ್ನೋದನ್ನು ಸಂಸತ್ ನಲ್ಲಿ ಎಲ್ಲರೂ ನೋಡಿದ್ದಾರೆ. ಆದರೆ ಲಂಡನ್ ನಲ್ಲಿ ನೀಡಿದ ಹೇಳಿಕೆ ಕಾಂಗ್ರೆಸ್ ನವರಿಗೆ ಅಚ್ಚರಿ ತಂದಿದೆ. ಸಿಖ್ ವಿರೋಧಿ ದಂಗೆ ಬಗೆಗಿನ ರಾಹುಲ್ ಗಾಂಧಿ ಹೇಳಿಕೆ ಹಸಿ ಸುಳ್ಳು. ಆ ಗಲಭೆಗೆ ಸಂಬಂಧಿಸಿರುವಂತೆ ದಾಖಲಾಗಿರುವ ದೂರುಗಳೆಲ್ಲ ಕಾಂಗ್ರೆಸ್ ನಾಯಕರ ವಿರುದ್ಧವೇ ಇವೆ" ಎಂದರು.
"ರಾಹುಲ್ ಗಾಂಧಿ ಮಾನಸಿಕ ಅಸ್ವಸ್ಥರು. ಅವರಿಗೆ ಜ್ಞಾನವನ್ನು ದಯ ಪಾಲಿಸಲಿ ಎಂದು ಆ ದೇವರನ್ನು ಕೇಳಿಕೊಳ್ತೀನಿ" ಎಂದು ಮಾಧ್ಯಮದವರೊಂದಿಗೆ ಮಾತನಾಡುತ್ತಾ ಹೇಳಿದರು.
ಸುಷ್ಮಾ ಸ್ವರಾಜ್ ಗೆ ಕೆಲಸವಿಲ್ಲ: ಲಂಡನ್ ನಲ್ಲಿ ರಾಹುಲ್ ವಿವಾದಾತ್ಮಕ ಹೇಳಿಕೆ
ಆರೆಸ್ಸೆಸ್ ನಿಂದ ಭಾರತದ ಮೂಲ ಗುಣ ಬದಲಿಸುವ ಪ್ರಯತ್ನ ನಡೆಯುತ್ತಿದೆ ಎಂದು ಲಂಡನ್ ನಲ್ಲಿ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು. ಆ ಹಿನ್ನೆಲೆಯಲ್ಲಿ ಮಾತನಾಡಿದ ಉಮಾಭಾರತಿ, ಕಾಂಗ್ರೆಸ್ ನ ಚುಕ್ಕಾಣಿಯನ್ನು ಮೋತಿಲಾಲ್ ನೆಹರೂ, ಜವಾಹರ್ ಲಾಲ್ ನೆಹರೂ, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅಂಥವರು ಹಿಡಿದಿದ್ದಾರೆ. ಆದರೆ ಈಗ ಮಾನಸಿಕ ಸ್ಥಿಮಿತ ಇಲ್ಲದ ವ್ಯಕ್ತಿಯೊಬ್ಬರು ಪಕ್ಷವನ್ನು ನಡೆಸುತ್ತಿದ್ದಾರೆ ಎಂದರು.
ಗಾಂಧಿ ಕುಟುಂಬದಲ್ಲಿ ಹುಟ್ಟಿದ್ದೇನೆ ಎಂಬ ವಿನಾಯ್ತಿ ಬೇಡ: ರಾಹುಲ್
1984ರಲ್ಲಿ ಏನಾಗಿದೆ ಎಬ ಬಗ್ಗೆ ರಾಹುಲ್ ಗಾಂಧಿಗೆ ಗೊತ್ತಿಲ್ಲ. ಏನು ಹಾಗೂ ಎಲ್ಲಿ ಮಾತನಾಡಬೇಕು ಅನ್ನೋದು ಗೊತ್ತಿಲ್ಲದ ಮಾನಸಿಕ ಅನಾರೋಗ್ಯ ಇರುವ ವ್ಯಕ್ತಿ ಅವರು ಎಂದು ಕಟುವಾಗಿ ಟೀಕೆ ಮಾಡಿದರು ಉಮಾಭಾರತಿ.