ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಕ್ಕೆ ತಿರುಗೇಟು ನೀಡಲು ಬರುವುದಿಲ್ಲ: ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ನವೆಂಬರ್ 23: ಭೂತಾನ್ ಪ್ರದೇಶದ ಗಡಿಭಾಗದೊಳಗೆ ಹಳ್ಳಿಯನ್ನು ನಿರ್ಮಿಸುವ ಮೂಲಕ ದೋಕ್ಲಾಂನಲ್ಲಿ ಚೀನಾದಿಂದ ಭಾರತಕ್ಕೆ ಮತ್ತೆ ಅಪಾಯದ ಬೆದರಿಕೆ ಎದುರಾಗಿದೆ ಎಂಬ ವರದಿಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 'ಚೀನಾದ ಭೂರಾಜಕೀಯ ತಂತ್ರಗಳಿಗೆ ಭಾರತದ ಸಾರ್ವಜನಿಕ ಸಂಪರ್ಕ ಚಾಲಿತ ಮಾಧ್ಯಮ ತಂತ್ರಗಳಿಂದ ಎದುರೇಟು ನೀಡಲು ಸಾಧ್ಯವಿಲ್ಲ. ಈ ಸರಳ ಸಂಗತಿಯು ಭಾರತ ಸರ್ಕಾರವನ್ನು ನಡೆಸುತ್ತಿರುವವರ ಮನಸಿನೊಳಗೆ ಇದೆಲ್ಲ ಮೂಡುವುದಿಲ್ಲ' ಎಂದು ಟೀಕಿಸಿದ್ದಾರೆ.

ಭೂತಾನ್ ಒಳಗೆ ಹಳ್ಳಿ ನಿರ್ಮಿಸಿದ ಚೀನಾ?: ಅಧಿಕಾರಿಗಳ ನಿರಾಕರಣೆಭೂತಾನ್ ಒಳಗೆ ಹಳ್ಳಿ ನಿರ್ಮಿಸಿದ ಚೀನಾ?: ಅಧಿಕಾರಿಗಳ ನಿರಾಕರಣೆ

ಭೂತಾನ್‌ನ ಎರಡು ಕಿಮೀ ಗಡಿಯೊಳಗೆ ಚೀನಾವು ಹಳ್ಳಿಯನ್ನು ನಿರ್ಮಿಸಿದ್ದು, ಅಲ್ಲಿ ಕಾರ್ಯಚಟುವಟಿಕೆ ನಡೆಸುತ್ತಿದೆ ಎಂದು ವರದಿಯಾಗಿತ್ತು. ಈ ಪ್ರದೇಶವು ಈ ಹಿಂದೆ ದೋಕ್ಲಂನಲ್ಲಿ ಬಿಕ್ಕಟ್ಟು ತಲೆದೋರಿದ್ದ ಸ್ಥಳದಿಂದ ಕೇವಲ 9 ಕಿಮೀ ದೂರವಿದ್ದು, ಭಾರತಕ್ಕೆ ಅಪಾಯ ತಂದೊಡ್ಡಲಿದೆ ಎಂದು ಹೇಳಲಾಗಿತ್ತು. ಆದರೆ ಇದನ್ನು ಭೂತಾನ್ ನಿರಾಕರಿಸಿತ್ತು. ಭೂತಾನ್ ಒಳಗೆ ಚೀನಾದ ಯಾವುದೇ ಹಳ್ಳಿ ಇಲ್ಲ ಎಂದು ರಾಯಭಾರ ಕಚೇರಿ ಸ್ಪಷ್ಟಪಡಿಸಿತ್ತು. ಈ ವರದಿ ಬಂದ ಕೆಲವು ದಿನಗಳ ಬಳಿಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

 Rahul Gandhi Attacks Centre, Chinas Geopolitical Strategy Cannot Be Countered By PR.

2017ರಲ್ಲಿ ಭಾರತ ಮತ್ತು ಚೀನಾ ನಡುವೆ 73 ದಿನಗಳ ಕಾಲ ದೋಕ್ಲಾಂ ಬಿಕ್ಕಟ್ಟು ತಲೆದೋರಿತ್ತು. ಪ್ರಸ್ತುತ ಭಾರತ-ಚೀನಾ ಪಡೆಗಳ ಪೂರ್ವ ಲಡಾಖ್‌ನ ಗಡಿ ವಾಸ್ತವ ನಿಯಂತ್ರಣ ರೇಖೆಯಲ್ಲಿ ಮೇ ತಿಂಗಳಿನಿಂದ ಪರಸ್ಪರ ಕಾದಾಟ ನಡೆಸುತ್ತಿವೆ. ತಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಿದ್ದರೆ, ಕೆಲವೇ ಗಂಟೆಗಳಲ್ಲಿ ಚೀನಾ ಪಡೆಗಳನ್ನು ನೂರು ಕಿಮೀ ಗಡಿಯೊಳಗೆ ಓಡಿಸುತ್ತಿತ್ತು ಎಂದು ಈ ಹಿಂದೆ ರಾಹುಲ್ ಗಾಂಧಿ ಹೇಳಿದ್ದರು.

English summary
Congress leader Rahul Gandhi said, China’s geopolitical strategy cannot be countered by a PR driven media strategy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X