ಕಿಂಗ್ ಖಾನ್ ಶಾರುಖ್ ಮೇಲೆ ಎಫ್ ಐ ಆರ್
ರಾಜಸ್ಥಾನದ ಕೋಟಾ ರೈಲು ನಿಲ್ದಾಣದಲ್ಲಿ ರಯೀಸ್ ಚಿತ್ರದ ಪ್ರಚಾರದ ವೇಳೆ ಗಲಭೆ ಉಂಟು ಮಾಡಿಕೊಂಡಿದ ಆರೋಪದ ಮೇಲೆ ಬಾಲಿವುಡ್ ನಟ ಶಾರುಖ್ ಖಾನ್ ಮೇಲೆ ಪ್ರಕರಣ ದಾಖಲಿಸಿಕೊಂಡು, ಎಫ್ ಐಆರ್ ದಾಖಲಿಸಲಾಗಿದೆ.
ನವದೆಹಲಿ, ಫೆಬ್ರವರಿ 15: ರಾಜಸ್ಥಾನದ ಕೋಟಾ ರೈಲು ನಿಲ್ದಾಣದಲ್ಲಿ ರಯೀಸ್ ಚಿತ್ರದ ಪ್ರಚಾರದ ವೇಳೆ ಗಲಭೆ ಉಂಟು ಮಾಡಿಕೊಂಡಿದ ಆರೋಪದ ಮೇಲೆ ಬಾಲಿವುಡ್ ನಟ ಶಾರುಖ್ ಖಾನ್ ಮೇಲೆ ಪ್ರಕರಣ ದಾಖಲಿಸಿಕೊಂಡು, ಎಫ್ ಐಆರ್ ದಾಖಲಿಸಲಾಗಿದೆ.
ಜನವರಿ
23ರಂದು
ಖಾನ್,
ರಯೀಸ್
ಚಿತ್ರದ
ಪ್ರಚಾರಕ್ಕಾಗಿ
ಕೋಟಾ
ರೈಲು
ನಿಲ್ದಾಣಕ್ಕೆ
ಆಗಮಿಸಿದ್ದ
ಶಾರುಖ್
ಹಾಗೂ
ಅವರ
ಬೆಂಬಲಿಗರು
ದಾಂಧಲೆ
ಎಬ್ಬಿಸಿದ್ದರು,
ಸಾರ್ವಜನಿಕ
ಆಸ್ತಿ
ಪಾಸ್ತಿಗೆ
ನಷ್ಟ
ಉಂಟು
ಮಾಡಿದರು
ಎಂದು
ವಿಕ್ರಂ
ಸಿಂಗ್
ಎಂಬುವವರು
ದೂರು
ನೀಡಿದ್ದರು.ರೈಲ್ವೆ
ಕೋರ್ಟಿನನ
ನಿರ್ದೇಶನ
ಅನ್ವಯ
ಪ್ರಕರಣ
ದಾಖಲಿಸಿಕೊಂಡು,
ಎಫ್
ಐ
ಆರ್
ಹಾಕಲಾಗಿದೆ
ಎಂದು
ಸಿಆರ್ಪಿ
ಪೊಲೀಸ್
ಠಾಣೆಯ
ಮೂಲಗಳು
ಹೇಳಿವೆ.[ಅಭಿಮಾನಿಯ
ಸಾವಿಗೆ
ಕಂಬನಿ
ಮಿಡಿದ
ಕಿಂಗ್
ಖಾನ್
ಶಾರುಖ್]
ಭಾರತೀಯ ದಂಡಸಂಹಿತೆಯ ಸೆಕ್ಷನ್ 427 (ಕುಚೋದ್ಯ, ಆಸ್ತಿಗೆ ಹಾನಿ), 120 ಬಿ (ಅಪರಾಧ ಪಿತೂರಿ), 147 (ದಂಗೆ), 149 (ಕಾನೂನು ಬಾಹಿರವಾಗಿ ಗುಂಪು ಸೇರುವುದು) ಹಾಗೂ 160 (ಗೊಂದಲ ಸೃಷ್ಟಿ) ಅನ್ವಯ ದೂರು ನೀಡಿದ್ದರು. ಆಗಸ್ಟ್ ಕ್ರಾಂತಿ ರಾಜಧಾನಿ ಎಕ್ಸ್ಪ್ರೆಸ್ ರೈಲಿನ ಗೇಟಿನಲ್ಲಿ ನಿಲ್ಲುವ ಮೂಲಕ ಖಾನ್, ಕಾನೂನು ಉಲ್ಲಂಘಿಸಿದ್ದು, ಸೇರಿದಂತೆ ರೈಲ್ವೆ ಕಾಯ್ದೆಯ ಸೆಕ್ಷನ್ 145 ಮತ್ತು 146ರ ಅನ್ವಯವೂ ಖಾನ್ ವಿರುದ್ಧ ಪ್ರಕರಣ ದಾಖಲಾಗಿದೆ.