Breaking: ಉತ್ತರಾಖಂಡದಲ್ಲಿ ಪುಷ್ಕರ್ ಧಾಮಿಗೆ 2ನೇ ಬಾರಿ ಸಿಎಂ ಕುರ್ಚಿ ಪಕ್ಕಾ!
ಡೆಹ್ರಾಡೂನ್, ಮಾರ್ಚ್ 21: ಉತ್ತರಾಖಂಡ ಮುಖ್ಯಮಂತ್ರಿ ಸ್ಥಾನಕ್ಕೆ ಪುಷ್ಕರ್ ಸಿಂಗ್ ಧಾಮಿ ಅವರನ್ನೇ ಎರಡನೇ ಬಾರಿ ಆಯ್ಕೆ ಮಾಡಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದರೂ, ಧಾಮಿಗೆ ಪಟ್ಟ ಕಟ್ಟುವುದು ಪಕ್ಕಾ ಆಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಉತ್ತರಾಖಂಡದಲ್ಲಿ ಬಿಜೆಪಿ ಟಿಕೆಟ್ ಪಡೆದ ಆರೂ ಮಹಿಳೆಯರು ವಿನ್!
ಉತ್ತರಾಖಂಡ ಭಾರತೀಯ ಜನತಾ ಪಕ್ಷದ ಶಾಸಕಾಂಗ ಪಕ್ಷದ ನಾಯಕರಾಗಿ ಪುಷ್ಕರ್ ಸಿಂಗ್ ಧಾಮಿ ಅವರನ್ನು ಘೋಷಿಸಲಾಗಿದೆ. ಇತ್ತೀಚಿಗೆ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಖತಿಮಾ ಕ್ಷೇತ್ರದಲ್ಲಿ ಸ್ಪರ್ಧಿಸಿದ ಸಿಎಂ ಪುಷ್ಕರ್ ಸಿಂಗ್ ಧಾಮಿ ಕಾಂಗ್ರೆಸ್ ಅಭ್ಯರ್ಥಿ ಎದುರು ಸೋಲು ಕಂಡಿದ್ದರು.
ಕಳೆದ 2017ರ ಚುನಾವಣೆಯಲ್ಲಿ ಉಧಮ್ ಸಿಂಗ್ ನಗರ್ ಜಿಲ್ಲೆಯ ಖತಿಮಾ ವಿಧಾನಸಭಾ ಕ್ಷೇತ್ರದಲ್ಲಿ ಇದೇ ಕಪ್ರಿಯನ್ನು ಧಾಮಿ ಕೇವಲ 2700 ಮತಗಳ ಅಂತರದಿಂದ ಸೋಲಿಸಿದ್ದರು. ಆದರೆ 2022ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಕಾರವಾಗಿ ಅದೇ ಪುಷ್ಕರ್ ಸಿಂಗ್ ಧಾಮಿ ಅವರನ್ನು ಭುವನ್ ಕಪ್ರಿ 7000 ಮತಗಳ ಅಂತರದಿಂದ ಸೋಲಿಸಿದ್ದಾರೆ. ಜನರಿಗೆ ಬಹಳ ಹತ್ತಿರದ ನಾಯಕರಾಗಿ ಗುರುತಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಭುವನ್ ಕಪ್ರಿ ಬಳಿ ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಭುವನ್ ಚಂದ್ರ ಕಪ್ರಿ ಅವರ ಒಟ್ಟಾರೆ ಆಸ್ತಿ ಮೌಲ್ಯವೇ 50 ಲಕ್ಷ ರೂಪಾಯಿ ಆಗಿದೆ.
ಉತ್ತರಾಖಂಡ
ವಿಧಾನಸಭೆ
ಚುನಾವಣೆ
ಫಲಿತಾಂಶ:
ಕೇಂದ್ರ
ಚುನಾವಣಾ
ಆಯೋಗದ
ಪ್ರಕಾರ,
ಉತ್ತರಾಖಂಡದ
70
ಕ್ಷೇತ್ರಗಳಿಗೆ
ನಡೆದ
ಚುನಾವಣೆಯಲ್ಲಿ
ಬಿಜೆಪಿ
ಸಂಪೂರ್ಣ
ಬಹುಮತ
ಗಳಿಸುವಲ್ಲಿ
ಯಶಸ್ವಿಯಾಗಿದೆ.
ಯಾವುದೇ
ಪಕ್ಷ
ಸರ್ಕಾರ
ರಚಿಸುವುದಕ್ಕೆ
ಮ್ಯಾಜಿಕ್
ನಂಬರ್
36
ಆಗಿದೆ.
ಆದರೆ
ಬಿಜೆಪಿಯು
47
ಕ್ಷೇತ್ರಗಳಲ್ಲಿ
ಗೆಲುವಿನ
ಪತಾಕೆ
ಹಾರಿಸುವ
ಮೂಲಕ
ಅಧಿಕಾರವನ್ನು
ಪಕ್ಕಾ
ಮಾಡಿಕೊಂಡಿದೆ.
19
ಸ್ಥಾನಗಳಲ್ಲಿ
ಗೆಲುವು
ಸಾಧಿಸಿರುವ
ಕಾಂಗ್ರೆಸ್
ಅತಿಹೆಚ್ಚು
ಸ್ಥಾನ
ಗಳಿಸಿದ
ಎರಡನೇ
ಪಕ್ಷವಾಗಿ
ಹೊರ
ಹೊಮ್ಮಿದೆ.
ಉಳಿದಂತೆ
ಬಹುಜನ
ಸಮಾಜವಾದಿ
ಪಕ್ಷ
2,
ಸ್ವತಂತ್ರ್ಯ
ಅಭ್ಯರ್ಥಿಗಳು
2
ಕ್ಷೇತ್ರಗಳಲ್ಲಿ
ಜಯಭೇರಿ
ಬಾರಿಸಿದ್ದಾರೆ.