ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೈತರ ಬೆಳೆ ಸಾಲಮನ್ನಾ: ಇದೀಗ ಪಂಜಾಬಿನ ಸರದಿ
ಚಂಡಿಘರ್, ಜೂನ್ 20: ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳು ರೈತರ ಬೆಳೆ ಸಾಲ ಮನ್ನಾಕ್ಕೆ ಅಸ್ತು ಎಂದಿರುವ ಬೆನ್ನಲ್ಲೇ ಪಂಜಾಬ್ ಸರ್ಕಾರ ಸಹ ರೈತರ ಸಾಲಮನ್ನಾಕ್ಕೆ ಮುಂದಾಗಿದೆ.
5 ಎಕರೆ ಗಿಂತ ಕಡಿಮೆ ಜಮೀನು ಹೊಂದಿದ ರೈತರ 2 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಜೂನ್ 19 ರಂದು ಪಂಜಾಬ್ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್ ಘೋಷಿಸುತ್ತಿದ್ದಂತೆಯೇ ಪಂಜಾಬಿನಾದ್ಯಂತ ರೈತರ ಸಂತಸ ಮುಗಿಲುಮುಟ್ಟಿದೆ.
ಆದರೆ ಈ ಸಾಲಮನ್ನಾದಿಂದ ಪಂಜಾಬ್ ಸರ್ಕಾರದ ಮೇಲೆ 24,000 ಕೋಟಿ ರೂ. ಹೊರೆಬೀಳಲಿದೆ.
ನಮ್ಮ ರಾಜ್ಯದಲ್ಲಿ ಹೆಚ್ಚುತ್ತಿರುವ ರೈತರ ಆತ್ಮಹತ್ಯೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
Comments
English summary
Chief minister of Punjab Amarinder Singh announced farm loan waiver in Punjab state. By this Punjab became third state to announce farm loan waiver after Uttar Pradesh, Maharashtra
Story first published: Tuesday, June 20, 2017, 11:06 [IST]