ದಶಮಿ ದಿನ ದುರಂತ: ರೈಲು ಅಪಘಾತದ ಸಾವಿನ ಸಂಖ್ಯೆ ನೂರಾರು?
Recommended Video
ಅಮೃತ್ ಸರ್, ಅಕ್ಟೋಬರ್ 19: ಅಮೃತಸರದ ಚೌರಾ ಬಜಾರ್ ಬಳಿ ರೈಲು ಹರಿದು ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರ ರಕ್ಕೂ ಅಧಿಕವಾಗುವ ಸಾಧ್ಯತೆ ಕಂಡು ಬಂದಿದೆ. ಪ್ರಾಥಮಿಕ ವರದಿಯಂತೆ ಐವತ್ತಕ್ಕೂ ಹೆಚ್ಚು ಜನರು ಮೃತಪಟ್ಟಿರುವುದು ಖಚಿತವಾಗಿದೆ.
ವಿಜಯ ದಶಮಿ ಅಂಗವಾಗಿ ರೈಲು ಹಳಿ ಬಳಿ ರಾವಣನ ಪ್ರತಿಕೃತಿ ದಹಿಸುತ್ತಿದ್ದ ವೇಳೆ ಎರಡು ಬದಿಯಿಂದ ರೈಲು ಬಂದಿದ್ದರಿಂದ ಕಂಗಾಲಾದ ಜನರು ದಿಕ್ಕು ಕಾಣದೆ ರೈಲಿಗೆ ಬಲಿಯಾಗಿದ್ದಾರೆ.
ದಸರಾ ಹಬ್ಬದ ಕೊನೆದಿನವಾದ ಶುಕ್ರವಾರ(ಅಕ್ಟೋಬರ್ 19)ದಂದು ದಶಕಂಠ ರಾವಣನ ಪ್ರತಿಕೃತಿ ದಹಿಸುವುದು ದೇಶದ ಅನೇಕ ಕಡೆಗಳಲ್ಲಿ ರೂಢಿಯಲ್ಲಿದೆ.
#Punjab: Police says, "There are more than 50 casualties. We are evacuating people, injured taken to the hospital", on accident in which several are feared dead in Choura Bazar near Amritsar pic.twitter.com/ITMeckyIN4
— ANI (@ANI) October 19, 2018
ರಾವಣನ ಪ್ರತಿಕೃತಿ ದಹಿಸುತ್ತಿದ್ದ ವೇಳೆ ಪಟಾಕಿ ಸಿಡಿಸಲಾಗಿದ್ದು, ಪಟಾಕಿ ಸದ್ದು ಹೆಚ್ಚಾಗಿದ್ದರಿಂದ ರೈಲು ಬಂದಿದ್ದು ಕೇಳಿಸಿರಲಿಲ್ಲ. ರೈಲ್ವೆ ಹಳಿ ಮೇಲೆ ನಿಂತು ರಾವಣ ದಹಿಸುವುದನ್ನು ನೋಡುತ್ತಿದ್ದವರು ತಮ್ಮ ಸಾವನ್ನು ಆಹ್ವಾನಿಸಿಕೊಂಡಿದ್ದಾರೆ.
#Punjab: An eyewitness says, a train travelling at a fast speed ran over several people during Dussehra celebrations, in Choura Bazar near Amritsar pic.twitter.com/JziMF03JyS
— ANI (@ANI) October 19, 2018
ಪಠಾಣ್ಕೋರ್ಟ್-ಅಮೃತಸರ ನಡುವಿನ ರೈಲು ಮಾರ್ಗದಲ್ಲಿ ಈ ಘಟನೆ ನಡೆದಿದ್ದು, ಸಾವಿನ ಸಂಖ್ಯೆ 100ಕ್ಕೂ ಅಧಿಕವಾಗಲಿದೆ. ಸರಿ ಸುಮಾರು 500-700 ಮಂದಿ ಹಳಿಗಳ ಮೇಲೆ ನಿಂತು ರಾವಣ ದಹನ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.