ಪುಲ್ವಾಮಾ ದಾಳಿ ಪರಿಣಾಮ: ಪಾಕಿಸ್ತಾನದ ಮೇಲೆ 'ಜಲ ಬಾಂಬ್'
Recommended Video
ನವದೆಹಲಿ, ಫೆಬ್ರವರಿ 21: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿ ಬಳಿಕ ಮೋದಿ ಸರ್ಕಾರವು ಪಾಕಿಸ್ತಾನದ ವಿರುದ್ಧ ಹಲವು ಕಠಿಣ ಕ್ರಮಗಳನ್ನು ಜರುಗಿಸುತ್ತಾ ಬಂದಿದೆ. ಈಗ ಪಾಕಿಸ್ತಾನವೇ ಬೆಚ್ಚಿಬೀಳುವಂಥ ಪ್ರಯೋಗಕ್ಕೆ ಮೋದಿ ಸರ್ಕಾರ ಮುಂದಾಗಿದೆ.
ಪುಲ್ವಾಮಾ ದಾಳಿಗೆ ಸೇಡು ತೀರಿಸಿಕೊಳ್ಳಲು ನದಿ ನೀರು ಹರಿಯುವುದನ್ನು ಬಂದ್ ಮಾಡಲು ಭಾರತ ಮುಂದಾಗಿದೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ದೊಡ್ಡ ಬಾಂಬ್ ಸಿಡಿಸಿದ್ದಾರೆ.
ಮೋದಿಗೆ ಬತ್ತಿದ ಸರಸ್ವತಿ ನದಿ ಉಕ್ಕುವಂತೆ ಮಾಡುವಾಸೆ
ಭಾರತದಲ್ಲಿ ಹುಟ್ಟಿ ಪಾಕಿಸ್ತಾನದ ತುಂಬಾ ಹರಿಯುವ ಪ್ರಮುಖ ಮೂರು ನದಿಗಳ ನೀರನ್ನು ಬಂದ್ ಮಾಡಿ, ಪಾಕಿಸ್ತಾನ ಹರಿದಂತೆ ಮಾಡಲು ಚಿಂತನೆ ನಡೆಸಲಾಗುತ್ತೆ. ಪಾಕಿಸ್ತಾನಕ್ಕೆ ಹರಿಯುತ್ತಿರುವ ನದಿ ನೀರನ್ನು ಯಮುನಾ ನದಿಯತ್ತ ತಿರುಗಿಸಲು ಭಾರತದ ಜಲಸಂಪನ್ಮೂಲ ಇಲಾಖೆ ಯೋಜನೆ ಹಾಕಿದೆ ಎಂದು ಗಡ್ಕರಿ ಹೇಳಿದರು.
ಫೆ.14 ರಂದು ಸಂಜೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಆವಂತಿಪೊರ ಎಂಬಲ್ಲಿ ಪಾಕ್ ಮೂಲದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕ ಆದಿಲ್ ಅಹ್ಮದ್ ದಾರ್ ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆಸಿದ ಪರಿಣಾಮ ಸಿಆರ್ ಪಿಎಫ್ ನ 44 ಯೋಧರು ಹುತಾತ್ಮರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ನದಿ ನೀರು ಪೂರೈಕೆ ನಿಂತರೆ ಪಾಕಿಸ್ತಾನಕ್ಕೆ ತೊಂದರೆ
ಪಶ್ಚಿಮ ಭಾರತದ ಮೂರು ಪ್ರಮುಖ ನದಿಗಳಾದ ಇಂಡಸ್, ಝೀಲಂ ಮತ್ತು ಚೆನಾಬ್ನೀರು ಪಾಕಿಸ್ತಾನಕ್ಕೂ ಹರಿಯುತ್ತಿದೆ.ಈ ನದಿ ನೀರಿನ ನೆರವಿನಿಂದ ಪಾಕಿಸ್ತಾನದ ಕುಡಿಯುವ ನೀರಿನ ದಾಹ ತಗ್ಗುತ್ತಿದೆ. ಒಂದು ವೇಳೆ ಈ ನೀರು ಪೂರೈಕೆ ಸ್ಥಗಿತವಾದರೆ ಪಾಕಿಸ್ತಾನದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದುರಾಗಲಿದೆ.
ಸಿಂಧೂ ಜಲ ಒಪ್ಪಂದಕ್ಕೆ ಧಕ್ಕೆಯಾಗಲಿದೆ
ಸಿಂಧೂ ಜಲ ಒಪ್ಪಂದ(1960ರಲ್ಲಿ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಸಿಂಧೂ ಜಲ ಒಪ್ಪಂದಕ್ಕೆ ಸಹಿ ಹಾಕಲಾಯಿತು) ಅನ್ವಯ ಝೇಲಂ ಹಾಗೂ ಚೆನಾಬ್ ಎರಡು ನದಿಗಳನ್ನು 'ಪಶ್ಚಿಮದ ನದಿಗಳು' ಎಂದು ಪರಿಗಣಿಸಲಾಗಿದೆ. ಹೀಗಾಗಿ ಈ ನದಿಗಳ ನೀರನ್ನು ಪಾಕಿಸ್ತಾನ ಸಹ ಯಾವುದೇ ಷರತ್ತುಗಳು ಇಲ್ಲದೆ ಬಳಸಬಹುದು. ಆದ್ದರಿಂದ ಎರಡು ಜಲ ವಿದ್ಯುತ್ ಘಟಕಗಳನ್ನು ನಿರ್ಮಿಸಲು ಭಾರತಕ್ಕೆ ಅನುಮೋದನೆ ನೀಡಲಾಗಿದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ.
ಕಿಶನ್ ಗಂಗಾ ಹಾಗೂ ರಾಟ್ಲೆಯಲ್ಲಿ ಯೋಜನೆ
ಝೇಲಂ ಮತ್ತು ಚೆನಬ್ ನದಿ ವ್ಯಾಪ್ತಿಯ ಕಿಶನ್ ಗಂಗಾ ಹಾಗೂ ರಾಟ್ಲೆಯಲ್ಲಿ ಯೋಜನೆಗೆ ಅನುಮತಿ ಸಿಕ್ಕಿದೆ. ಯೋಜನೆಯನ್ನು ಪಾಕಿಸ್ತಾನ ವಿರೋಧಿಸುತ್ತಾ ಬಂದಿತ್ತು.
ಕಿಶನ್ಗಂಗಾದಲ್ಲಿ 330 ಮೆಗಾವಾಟ್ ಮತ್ತು ರಾಟ್ಲೆಯಲ್ಲಿ 850 ಮೆಗಾವಾಟ್ ಸಾಮರ್ಥ್ಯದ ಜಲ ವಿದ್ಯುತ್ ಘಟಕಗಳನ್ನು ನಿರ್ಮಿಸಲು ಉದ್ದೇಶಿಸಿರುವ ಭಾರತಕ್ಕೆ ಷರತ್ತುಬದ್ಧ ಅನುಮತಿಯನ್ನು ವಿಶ್ವಬ್ಯಾಂಕ್ ನೀಡಿದ್ದರಿಂದ ಪಾಕಿಸ್ತಾನ ತೀವ್ರ ಮುಖಭಂಗ ಅನುಭವಿಸಿದೆ.
ಸಟ್ಲೇಜ್, ಬೀಯಸ್, ರಾವಿ ನದಿ ನೀರು ಹಂಚಿಕೆ
ಕಣಿವೆ ರಾಜ್ಯದ ಪ್ರಮುಖ ನದಿಗಳ ಪೈಕಿ ಸಟ್ಲೇಜ್, ಬೀಯಸ್, ರಾವಿ ಸಂಪೂರ್ಣವಾಗಿ ಭಾರತದ ಪಾಲಿಗೆ ದಕ್ಕಿದರೆ, ಝೇಲಂ ಹಾಗೂ ಇಂಡಸ್(ಸಿಂಧು) ಪಾಕಿಸ್ತಾನಕ್ಕೆ ಸಿಗಲಿದೆ.
ಶೇ 94ರಷ್ಟು ಜಲ ಸಂಪತ್ತು ಭಾರತದಲ್ಲಿ ಬಳಕೆಯಾದರೆ, ಮಿಕ್ಕ ಪಾಲು ಪಾಕಿಸ್ತಾನಕ್ಕೆ ಹರಿಯಲಿದೆ. ಪಂಜಾಬಿನಲ್ಲಿ ಶಹಾಪುರ್ ಕಂಡಿ ಅಣೆಕಟ್ಟು, ಸಟ್ಲೇಜ್ ಬೀಯಸ್ ಯೋಜನೆ ಹಾಗೂ ಊಜ್ ಅಣೆಕಟ್ಟು ಈ ಪ್ರದೇಶದ ಪ್ರಮುಖ ಯೋಜನೆಗಳಾಗಿವೆ.