'ಪ್ರಕೃತಿಯನ್ನು ರಕ್ಷಿಸಿ, ಅದು ನಮ್ಮನ್ನು ರಕ್ಷಿಸುತ್ತದೆ' ಮೋದಿ ಮನ್ ಕಿ ಬಾತ್
ನವದೆಹಲಿ, ನವೆಂಬರ್ 28: 'ಪ್ರಕೃತಿಯನ್ನು ಸಂರಕ್ಷಿಸಿ, ಅದು ನಮ್ಮನ್ನು ರಕ್ಷಿಸುತ್ತದೆ' ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದರು. ಬೆಳಿಗ್ಗೆ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, 'ನಮ್ಮ ಸುತ್ತಲೂ ನೈಸರ್ಗಿಕ ಸಂಪನ್ಮೂಲಗಳು ಇವೆ. ನಾವು ಅವುಗಳನ್ನು ಉಳಿಸೋಣ. ಅವುಗಳನ್ನು ಮೂಲ ರೂಪಕ್ಕೆ ತರೋಣ. ಇದು ನಮ್ಮೆಲ್ಲರ ಹಿತಾಸಕ್ತಿಯಾಗಬೇಕು' ಎಂದರು. ಇತ್ತೀಚೆಗೆ ದೇಶದಲ್ಲಿ ಕೊರೊನಾ ಹೊಸ ತಳಿ ಹರಡುವ ಕಳವಳ ಹೆಚ್ಚಾಗಿದೆ. ಜೊತೆಗೆ ವಾಯುಮಾಲಿನ್ಯವೂ ಪದೇ ಪದೇ ಹೆಚ್ಚಾಗುತ್ತಲೇ ಇದ್ದು ಉಸಿರುಗಟ್ಟುವ ವಾತಾವರಣ ನಿರ್ಮಾಣ ಮಾಡುತ್ತಿದೆ. ಇದರ ಬೆನ್ನಲ್ಲೆ ಜನಸಾಮಾನ್ಯರಲ್ಲಿ ಪರಿಸರ ಕಾಳಜಿಗಾಗಿ ಮೋದಿ ಮನವಿ ಮಾಡಿದ್ದಾರೆ.
ಜೊತೆಗೆ 'ಶೌರ್ಯವನ್ನು ಯುದ್ಧಭೂಮಿಯಲ್ಲಿ ಮಾತ್ರ ತೋರಿಸಬೇಕಾಗಿಲ್ಲ. ಅದನ್ನು ವಿಸ್ತರಿಸಿದಾಗ ಪ್ರತಿಯೊಂದು ಕ್ಷೇತ್ರದಲ್ಲೂ ಅನೇಕ ಕೆಲಸಗಳು ಪ್ರಾರಂಭವಾಗುತ್ತವೆ. ಆಯುಷ್ಮಾನ್ ಭಾರತ್ ಯೋಜನೆಯಿಂದ ಬಡವರು ಹಲವಾರು ಪ್ರಯೋಜನ ಪಡೆಯುತ್ತಿದ್ದಾರೆ. ದೇಶವು ಸ್ವಾತಂತ್ರ್ಯದ ಅಮೃತ ಹಬ್ಬವನ್ನು ಆಚರಿಸುತ್ತಿದೆ. ಸ್ವಾತಂತ್ರ್ಯದ ಅಮೃತೋತ್ಸವ ಕಲಿಕೆಯೊಂದಿಗೆ ದೇಶಕ್ಕಾಗಿ ಏನನ್ನಾದರೂ ಮಾಡಲು ಸ್ಫೂರ್ತಿ ನೀಡುತ್ತದೆ. ಈಗ ಈ ಹಬ್ಬಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಸರಣಿಯು ದೇಶದಲ್ಲಿ ನಿರಂತರವಾಗಿ ನಡೆಯುತ್ತಿದೆ' ಎಂದು ಮೋದಿ ಅವರು 83 ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದರು.
ಆರೋಗ್ಯ ಸಚಿವಾಲಯ ಭಾನುವಾರ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 8,774 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು 621 ಜನರು ಸಾವನ್ನಪ್ಪಿದ್ದಾರೆ. 9,481 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಪ್ರಸ್ತುತ, ದೇಶದಲ್ಲಿ ಸಕ್ರಿಯ ಪ್ರಕರಣಗಳು ಸಂಖ್ಯೆ 1,05,691 ರಷ್ಟಿದ್ದು, ಇದು 543 ದಿನಗಳಲ್ಲಿ ವರದಿಯಾದ ಕಡಿಮೆ ಪ್ರಕರಣಗಳ ಸಂಖ್ಯೆಯಾಗಿದೆ.
ಅಸ್ಸಾಂನಲ್ಲಿ
ಕಳೆದ
24
ಗಂಟೆಗಳಲ್ಲಿ
123
ಹೊಸ
COVID19
ಪ್ರಕರಣಗಳು
ದಾಖಲಾಗಿದ್ದು
189
ಜನ
ಚೇತರಿಸಿಕೊಂಡಿದ್ದಾರೆ
ಮತ್ತು
5
ಸಾವುಗಳು
ದಾಖಲಾಗಿವೆ.
ಕಳೆದ
10
ದಿನಗಳಲ್ಲಿ
ಕೋವಿಡ್
ಪ್ರಕರಣಗಳ
ಸಂಖ್ಯೆಯಲ್ಲಿನ
ಹೆಚ್ಚಳವು
ಕಳವಳ
ಹುಟ್ಟಿಸಿದೆ.
ಮುಂಬರುವ
ಹೊಸ
ರೂಪಾಂತರ
(Omicron)
ಇನ್ನಷ್ಟು
ಅಪಾಯಕಾರಿ
ಎನ್ನಲಾಗುತ್ತಿದೆ.
ಹೀಗಾಗಿ
ಮೂರನೇ
ಅಲೆಯ
ಆತಂಕ
ಮನೆ
ಮಾಡಿದೆ.
ಒಡಿಶಾದ
ಮಯೂರ್ಭಂಜ್
ಜಿಲ್ಲೆಯ
ಶಾಲೆಯೊಂದರ
25
ವಿದ್ಯಾರ್ಥಿನಿಯರಿಗೆ
ಕೋವಿಡ್
ಪಾಸಿಟಿವ್
ಇರುವುದು
ಕಂಡುಬಂದಿದೆ.
ಠಾಕುರ್ಮುಂಡಾ
ಬ್ಲಾಕ್ನ
ಚಮ್ಕಾಪುರದ
ಬುಡಕಟ್ಟು
ವಸತಿ
ಶಾಲೆಯಲ್ಲಿ
213
ವಿದ್ಯಾರ್ಥಿನಿಯರು
ಮತ್ತು
17
ಸಿಬ್ಬಂದಿಗೆ
ಕೋವಿಡ್
ಪರೀಕ್ಷೆ
ಮಾಡಲಾಗಿದೆ
ಎಂದು
ಮುಖ್ಯ
ಜಿಲ್ಲಾ
ವೈದ್ಯಾಧಿಕಾರಿ
ಮಯೂರ್ಭಂಜ್
ತಿಳಿಸಿದ್ದಾರೆ.
25
ವಿದ್ಯಾರ್ಥಿನಿಯರಲ್ಲಿ
ಕೋವಿಡ್
ಪಾಸಿಟಿವ್
ವರದಿ
ಬಂದಿದೆ.
ಶಾಲೆಯಲ್ಲಿ
ಸುಮಾರು
256
ವಿದ್ಯಾರ್ಥಿಗಳು
ಮತ್ತು
20
ಸಿಬ್ಬಂದಿ
ಇದ್ದು,
ಜಿಲ್ಲಾಸ್ಪತ್ರೆಯ
ವೈದ್ಯಕೀಯ
ತಂಡ
ಮತ್ತು
ಸಬ್
ಕಲೆಕ್ಟರ್
ಡಾ.ರಜನಿಕಾಂತ್
ಬಿಶ್ವಾಲ್
ಶಾಲೆಯಲ್ಲಿದ್ದು,
ಪರಿಸ್ಥಿತಿಯನ್ನು
ಅವಲೋಕಿಸುತ್ತಿದ್ದಾರೆ.
Recommended Video
ಇನ್ನೂ
ಕರ್ನಾಟಕದ
ಧಾರವಾಡ
ಜಿಲ್ಲೆಯ
ಎಸ್ಡಿಎಂ
ಕಾಲೇಜಿನಲ್ಲಿ
ಕೊರೊನಾ
ಪ್ರಕರಣಗಳ
ಸಂಖ್ಯೆ
306ಕ್ಕೆ
ಏರಿಕೆಯಾಗಿದ್ದು
ಆತಂಕ
ಹೆಚ್ಚಿಸಿದೆ.
ಇದರಿಂದಾಗಿ
ಆವರಣದಲ್ಲಿರುವ
ಎರಡು
ಹಾಸ್ಟೆಲ್ಗಳನ್ನು
ಸೀಲ್
ಮಾಡಲಾಗಿದೆ.
ಸೋಂಕಿತ
ವಿದ್ಯಾರ್ಥಿಗಳು
ತಮ್ಮ
ಹಾಸ್ಟೆಲ್
ಕೊಠಡಿಗಳಲ್ಲಿ
ಚಿಕಿತ್ಸೆ
ಪಡೆಯುತ್ತಿದ್ದಾರೆ.
ಕ್ಯಾಂಪಸ್ನಲ್ಲಿ
ಚಲನೆಯನ್ನು
ಸಂಪೂರ್ಣವಾಗಿ
ನಿರ್ಬಂಧಿಸಲಾಗಿದ್ದು
ಸೋಂಕು
ಹರಡುವುದನ್ನು
ತಡೆಯಲು
ಸಾಧ್ಯವಿರುವ
ಎಲ್ಲಾ
ಕ್ರಮಗಳನ್ನು
ತೆಗೆದುಕೊಳ್ಳಲಾಗುತ್ತಿದೆ.
"ಕಾಲೇಜಿನಲ್ಲಿ
ಕಾರ್ಯಕ್ರಮವೊಂದನ್ನು
ಆಯೋಜಿಸಲಾಗಿತ್ತು.
ಈ
ವೇಳೆ
ಅಧಿಕ
ಸಂಖ್ಯೆಯಲ್ಲಿ
ವಿದ್ಯಾರ್ಥಿಗಳು
ಭಾಗವಹಿಸಿದ್ದರು.
ಅಲ್ಲಿ
ಕೊರೊನಾ
ಹರಡಿತು
ಎಂದು
ನನಗೆ
ಹೇಳಲಾಗಿದೆ.
ನಾವು
ಕಾಲೇಜಿನ
ಎಲ್ಲಾ
1,788
ವಿದ್ಯಾರ್ಥಿಗಳನ್ನು
ಪರೀಕ್ಷಿಸಿದ್ದೇವೆ.
ಕೆಲವು
ಫಲಿತಾಂಶಗಳಿಗಾಗಿ
ಕಾಯಲಾಗುತ್ತಿದೆ.
ಒಂದು
ಅಂತರಾಷ್ಟ್ರೀಯ
ಶಾಲೆಯು
34
ಪ್ರಕರಣಗಳು
ಮತ್ತು
ಇನ್ನೊಂದು
12
ಪ್ರಕರಣಗಳನ್ನು
ವರದಿ
ಮಾಡಿದೆ.
ಈ
ಪ್ರಕರಣಗಳಲ್ಲಿ
ಯಾವುದೂ
ತೀವ್ರವಾಗಿಲ್ಲ"
ಎಂದು
ರಾಜ್ಯದ
ಆರೋಗ್ಯ
ಸಚಿವ
ಕೆ
ಸುಧಾಕರ್
ಹೇಳಿದರು.