ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಪರಿಚಯ
ಡಿಸೆಂಬರ್ 25 ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ. ಈ ಸಂದರ್ಭದಲ್ಲಿ ಒನ್ಇಂಡಿಯಾ ಕನ್ನಡ ವಾಜಪೇಯಿ ಅವರಿಗೆ ಭಾರತರತ್ನ ಸಂದ ವೇಳೆ ಪ್ರಕಟಿಸಿದ್ದ ಲೇಖನವನ್ನು ಮತ್ತೊಮ್ಮೆ ಪ್ರಕಟ ಮಾಡುತ್ತಿದೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 90ನೇ ಹುಟ್ಟುಹಬ್ಬದ ಮುನ್ನಾ ದಿನ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಿದೆ. ಸುಮಾರು 50 ವರ್ಷಗಳ ಕಾಲ ಸ್ವಚ್ಛ ರಾಜಕೀಯ ಬದುಕು ಕಂಡ ಕವಿ ಹೃದಯದ ಶ್ರೇಷ್ಠ ವಾಗ್ಮಿ. ಚಿಂತಕ, ಮಾನವತಾವಾದಿ.
ಮೋದಿಗೆ ರಾಜಧರ್ಮ ಪರಿಪಾಲನೆ ಪಾಠ ಮಾಡಿದ್ದ ಅಟಲ್ ಅವರು ದೇಶದ ಪ್ರಧಾನಿಯಾಗಿ ಎರಡು ಬಾರಿ ಕಾರ್ಯ ನಿರ್ವಹಿಸಿದ ಮೊದಲ ಅವಿವಾಹಿತ ಎನಿಸಿಕೊಂಡಿದ್ದಾರೆ. 2005ರಲ್ಲಿ ಸಕ್ರಿಯ ರಾಜಕೀಯದಿಂದ ದೂರ ಉಳಿದಿರುವ ವಾಜಪೇಯಿ ಅವರನ್ನು ಬಿಜೆಪಿಯ ವಿರೋಧಿಸುವ ಮುಖಂಡರು ಕೂಡಾ ಗೌರವದಿಂದ ಕಾಣುತ್ತಾರೆ.
ಪ್ರೋಖ್ರಾನ್ ಅಣು ಪರೀಕ್ಷೆ, ಪಾಕಿಸ್ತಾನದೊಂದಿಗೆ ಬಾಂಧವ್ಯ ಬೆಸೆಯುವ ಸಾರಿಗೆ ವ್ಯವಸ್ಥೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಸುವರ್ಣ ಚತುಷ್ಪಥ ಯೋಜನೆ, ಸರ್ವ ಶಿಕ್ಷಾ ಅಭಿಯಾನ ಮುಂತಾದವು ವಾಜಪೇಯಿ ಅವರ ದೂರದೃಷ್ಟಿತ್ವದ ಫಲವಾಗಿದೆ. [ಮದನ್ ಮೋಹನ್ ಮಾಳವೀಯ ಜೀವನ ಅವಲೋಕನ]
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನದತ್ತ ಒಂದು ಅವಲೋಕನ ಹೀಗಿದೆ:
1924:
ಕೃಷ್ಣದೇವಿ
ಹಾಗೂ
ಕೃಷ್ಣ
ಬಿಹಾರಿ
ವಾಜಪೇಯಿ
ಅವರ
ಮಗನಾಗಿ
ಮಧ್ಯ
ಪ್ರದೇಶದ
ಗ್ವಾಲಿಯರ್
ಹತ್ತಿರದ
'ಶಿಂದೆ
ಕಿ
ಚವ್ವಾಣಿ'ಎನ್ನುವ
ಗ್ರಾಮದಲ್ಲಿ
ಜನಿಸಿದರು.
1939:
ರಾಷ್ಟ್ರೀಯ
ಸ್ವಯಂಸೇವಕ
ಸಂಘಕ್ಕೆ
ಸೇರ್ಪಡೆ.
1942:
ಕ್ವಿಟ್
ಇಂಡಿಯ
(ಬ್ರಿಟಿಷರೇ
ಬಾರತ
ಬಿಟ್ಟು
ತೊಲಗಿ)
ಚಳವಳಿಯಲ್ಲಿ
ಭಾಗವಹಿಸಿದರು.
1951:
ಭಾರತೀಯ
ಜನ
ಸಂಘ
ಸ್ಥಾಪಕ.
1953
:
ಭಾರತೀಯ
ಜನ
ಸಂಘದ
ಮೂಲಕ
ಶ್ಯಾಮ್
ಪ್ರಸಾದ್
ಮುಖರ್ಜಿ
ಅವರ
ಪರಿಚಯ.
1957:
ಮೊದಲ
ಬಾರಿಗೆ
ಲೋಕ
ಸಭೆಯ
ಸದಸ್ಯರಾಗಿ
ಆಯ್ಕೆಯಾದರು.
1975:
ತುರ್ತು
ಪರಿಸ್ಥಿತಿ
ಸಂದರ್ಭದಲ್ಲಿ
ಜೈಲುಪಾಲು
1977
:
ಜನತಾ
ಸಂಘದ
ಮೊದಲ
ಸರ್ಕಾರದಲ್ಲಿ
ವಿದೇಶಾಂಗ
ಸಚಿವರಾಗಿ
ಆಯ್ಕೆ.
ಅದೇ
ವರ್ಷ
ಅಮೆರಿಕದ
ಅಸೆಂಬ್ಲಿ
ಉದ್ದೇಶಿಸಿ
ಮಾತನಾಡಿದರು.
1979
:
ಮುರಾರ್ಜಿ
ದೇಸಾಯಿ
ಅವರ
ಸರ್ಕಾರ
ಪತನಗೊಂಡ
ಸಂಧರ್ಬದಲ್ಲಿ
ಜನತಾ
ಪಾರ್ಟಿವಿಸರ್ಜನೆ.
1980:
ಭಾರತೀಯ
ಜನತಾ
ಪಾರ್ಟಿ(ಬಿಜೆಪಿ)
ಸ್ಥಾಪನೆ,
ಪಕ್ಷದ
ಮೊದಲ
ರಾಷ್ಟ್ರೀಯ
ಅಧ್ಯಕ್ಷರಾಗಿ
ಆಯ್ಕೆ.
1992:
ಪದ್ಮ
ವಿಭೂಷಣ
ಪ್ರಶಸ್ತಿ
ಸ್ವೀಕಾರ.
1993:
ಕಾನ್ಪುರ
ವಿಶ್ವವಿದ್ಯಾಲಯದಿಂದ
ಗೌರವ
ಡಾಕ್ಟರೇಟ್.
1996:
ದೇಶದ
ಪ್ರಧಾನಿಯಾಗಿ
ಆಯ್ಕೆ,
13
ದಿನ
ಆಡಳಿತ.
1998
:
ಎರಡನೇ
ಬಾರಿ
ಪ್ರಧಾನಿಯಾಗಿ
ಆಯ್ಕೆ,
ಪೂರ್ಣ
ಅವಧಿ
ಮುಗಿಸಿದ
ಕಾಂಗ್ರೆಸ್ಸೇತರ
ಮೊದಲ
ಪ್ರಧಾನಿ
ಎಂಬ
ಹೆಗ್ಗಳಿಕೆ.
1999:
13ನೇ
ಲೋಕಸಭೆಗೆ
ಆಯ್ಕೆ,
2004ರ
ತನಕ
ಪ್ರಧಾನಿಯಾಗಿ
ಕಾರ್ಯ
ನಿರ್ವಹಣೆ
2004
:
14ನೇ
ಲೋಕಸಭೆಗೆ
10
ಬಾರಿಗೆ
ಸಂಸತ್
ಸದಸ್ಯರಾಗಿ
ಆಯ್ಕೆ
2005:
ಸಕ್ರಿಯ
ರಾಜಕಾರಣದಿಂದ
ನಿವೃತ್ತಿ