ರಾಷ್ಟ್ರದ ಅಭಿವೃದ್ದಿಗೆ ಎಲ್ಲರೂ ಪಣ ತೊಡೋಣ : ರಾಷ್ಟ್ರಪತಿ ಭಾಷಣ
Recommended Video
ನವದೆಹಲಿ, ಆಗಸ್ಟ್ 14 : 'ರಾಷ್ಟ್ರದ ಅಭಿವೃದ್ದಿಗೆ ಎಲ್ಲರೂ ಪಣ ತೊಡಬೇಕಿದೆ. ದೇಶದಲ್ಲಿ ನಿರುದ್ಯೋಗ ತೊಲಗಬೇಕು, ಬಡತನ ನಿವಾರಣೆಯಾಗಬೇಕು' ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕರೆ ನೀಡಿದರು.
72ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ರಾಮನಾಥ್ ಕೋವಿಂದ್ ಮಂಗಳವಾರ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು. 'ಆಗಸ್ಟ್ 15 ಪ್ರತಿಯೊಬ್ಬ ಭಾರತೀಯನ ಪಾಲಿಗೆ ಪವಿತ್ರವಾದ ದಿನ. ನಮ್ಮ ತ್ರಿವರ್ಣ ಧ್ವಜ ದೇಶದ ಅಸ್ಮಿತೆಯ ಸಂಕೇತ' ಎಂದು ಬಣ್ಣಿಸಿದರು.
ಆಗಸ್ಟ್ 15; ಭಾರತವಲ್ಲದೆ ಇನ್ನೂ ನಾಲ್ಕು ದೇಶಗಳಿಗೆ ಸ್ವಾತಂತ್ರ್ಯ ದೊರೆತ ದಿನ
ದೇಶದ ಜನರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ ರಾಷ್ಟ್ರಪತಿಗಳು, 'ನಮ್ಮ ಪೂರ್ವಜರ ತ್ಯಾಗ, ಬಲಿದಾನದಿಂದಾಗಿ ನಮಗೆ ಇಂದು ಸ್ವಾತಂತ್ರ್ಯ ಸಿಕ್ಕಿದೆ. ಪೂರ್ವಜರು ಹಾಕಿಕೊಟ್ಟ ಮಾರ್ಗದಲ್ಲಿ ಇಂದು ಸಾಗಬೇಕಿದೆ' ಎಂದರು.
ಸ್ವಾತಂತ್ರ್ಯ ಭಾರತದ ಆಶಯ ಈಡೇರುವುದು ಯಾವಾಗ?
ರಾಷ್ಟ್ರಪತಿಗಳ ಭಾಷಣದ ಮುಖ್ಯಾಂಶಗಳು
* ನಮ್ಮ ರೈತರು ಜನರ ಹಸಿವು ನೀಗಿಸಲು ಆಹಾರವನ್ನು ಉತ್ಪಾದಿಸುತ್ತಾರೆ. ಅವರ ಆದಾಯ ದ್ವಿಗುಣವಾಗಬೇಕಿದೆ. ಅನ್ನದಾತರ ಏಳಿಗೆಗೆ ನಾವು ಶ್ರಮಿಸುವ ಮೂಲಕ ಸ್ವಾತಂತ್ರ್ಯ ಯೋಧರ ಕನಸನ್ನು ನನಸು ಮಾಡಬೇಕಿದೆ.
I am gratified by the idealism and the passion of our young people. There is a spirit to achieve something for one-self, for one’s family, for wider society and for our country. This is the most moral education we can wish for #PresidentKovind
— President of India (@rashtrapatibhvn) August 14, 2018
* ಒಂದು ಕಡೆ ರೈತರು ಆಹಾರ ಬೆಳೆದು ದೇಶವನ್ನು ಕಾಪಾಡುತ್ತಿದ್ದಾರೆ. ಮತ್ತೊಂದು ಕಡೆ ಸೈನಿಕರು ಪ್ರಾಣವನ್ನು ಪಣಕ್ಕಿಟ್ಟು ದೇಶವನ್ನು ಕಾಪಾಡುತ್ತಿದ್ದಾರೆ. ಅವರ ಕಾರ್ಯವನ್ನು ನಾವು ಕೊಂಡಾಡಬೇಕು.
* ಮಹಾತ್ಮಾ ಗಾಂಧೀಜಿ ಅವರು ಅಹಿಂಸೆ ಎನ್ನುವ ಅಸ್ತ್ರವನ್ನು ನೀಡಿದ್ದಾರೆ. ಗಾಂಧೀಜಿ ಅವರ ಆಲೋಚನೆಗಳ ಆಳವನ್ನು ನಾವು ಅರ್ಥ ಮಾಡಿಕೊಳ್ಳಬೇಕು.
The outcome of education is not merely a degree or a diploma, but the commitment to help improve the life of another in a way that is sustainable #PresidentKovind
— President of India (@rashtrapatibhvn) August 14, 2018
* ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಮತ್ತು ಅಕ್ಟೋಬರ್ 2ರ ಗಾಂಧಿ ಜಯಂತಿ ಮಹತ್ವ ಪಡೆದುಕೊಂಡಿದೆ. ಅಕ್ಟೋಬರ್ 2ರಂದು ಗಾಂಧೀಜಿ ಅವರ 150ನೇ ಜನ್ಮದಿನೋತ್ಸವವಾಗಿದೆ.
Together we can help every citizen in our country. Together we can conserve our forests and natural heritage, safeguard our monuments for future generations, renew our rural and urban habitats. Together, we can eliminate poverty, illiteracy and inequality #PresidentKovind
— President of India (@rashtrapatibhvn) August 14, 2018