ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತ ರತ್ನ ಪ್ರದಾನ
ನವದೆಹಲಿ, ಮಾ. 27: ಮಾಜಿ ಪ್ರಧಾನಿ, ಸಂಸದೀಯ ಪಟು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶುಕ್ರವಾರ ಭಾರತ ರತ್ನ ಪ್ರದಾನ ಮಾಡಲಾಯಿತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಗೌರವವನ್ನು ಪ್ರದಾನ ಮಾಡಿದರು.
ವಾಜಪೇಯಿ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ತೆರಳಿ ಗೌರವಿಸಲಾಯಿತು. ವಾಜಪೇಯಿ ಅವರ ಜತೆ ಮದನ್ ಮೋಹನ್ ಮಾಳವೀಯ ಅವರಿಗೆ ಮರಣೋತ್ತರ ಭಾರತ ರತ್ನ ನೀಡಲಾಗಿದೆ.[ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಪರಿಚಯ]
ಪ್ರಧಾನಿ ಮೋದಿ ಈ ಬಗ್ಗೆ ಟ್ವಿಟ್ಟರ್ ಸಂದೇಶವನ್ನು ನೀಡಿದ್ದು, ಇಂದಿನ ದಿನವನ್ನು ಸುವರ್ಣಾಕ್ಷರದಲ್ಲಿ ಬರೆದಿಡಬೇಕು. ಭಾರತದ ಜನ ಹೆಮ್ಮೆ ಪಡುವ ದಿನ ಇದಾಗಿದೆ ಎಂದು ವಿಶ್ಲೇಷಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು, ವಾಜಪೇಯಿ ಅವರು ಎಲ್ಲರಿಗೂ ಪ್ರೀತಿಪಾತ್ರರಾದ ವ್ಯಕ್ತಿ, ಅವರ ಮೇಲಿರುವ ಗೌರವ ಎಂದಿಗೂ ಕಡಿಮೆಯಾಗುವಂತಹದ್ದಲ್ಲ. ವಾಜಪೇಯಿ ಅವರು ಭಾರತ ವ್ಯಕ್ತಿಯಷ್ಟೇ ಅಲ್ಲ, ಅವರು ಅಂತಾರಾಷ್ಟ್ರೀಯ ವ್ಯಕ್ತಿ ಎಂದು ಕೊಂಡಾಡಿದರು.[ವಾಜಪೇಯಿ, ಮಾಳವೀಯರಿಗೆ 'ಭಾರತರತ್ನ' ಘೋಷಣೆ]
ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಪ್ರಮುಖರನ್ನು ಮಾತ್ರ ಆಹ್ವಾನಿಸಲಾಗಿತ್ತು. ಅಮೆರಿಕಕ್ಕೆ ಸೆಡ್ಡು ಹೊಡೆದು ನಡೆಸಿದ ಅಣು ಪರೀಕ್ಷೆ, ಪಾಕಿಸ್ತಾನದ ಜತೆ ಯುದ್ಧ ಮತ್ತು ವಿಜಯ, ವಿದೇಶಗಳ ಜತೆ ಸಂಬಂಧ ಬೆಳೆಸುವ ರೀತಿ ಇನ್ನು ಅನೇಕ ಬಗೆಯಲ್ಲಿ ದೇಶವನ್ನು ಉನ್ನತಿಗೇರಿಸಿದ ಕೀರ್ತಿ ವಾಜಪೇಯಿಗೆ ಸಲ್ಲುತ್ತದೆ.
Departing
from
convention,Rashtrapatiji
is
going
to
Atalji's
residence
to
confer
him
the
Bharat
Ratna.
This
gesture
reflects
grace
&
dignity
—
Narendra
Modi
(@narendramodi)
March
27,
2015