ಮಹಾರಾಷ್ಟ್ರದಲ್ಲಿ ಕೆಂಪು ಉಗ್ರರ ಮಾರಣಹೋಮ: ಚಿತ್ರಗಳು
ಬೆಂಗಳೂರು, ಏಪ್ರಿಲ್ 24: ದೇಶದಲ್ಲಿ ಭಯೋತ್ಪಾದಕರ ಸಂಖ್ಯೆ ಹೆಚ್ಚಾಗುತ್ತಿದೆ. ಕೊಲೆ, ಸುಲಿಗೆ, ಅತ್ಯಾಚಾರ ಇವುಗಳ ಮಧ್ಯೆ ಭಯೋತ್ಪಾದನೆ ಎನ್ನುವ ಭೂತವೂ ಒಳಗೊಂಡಿದೆ.
ಮಹಾರಾಷ್ಟ್ರದಲ್ಲಿ ಪೊಲೀಸರು ನಡೆಸಿದ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ 33 ಮಂದಿ ನಕ್ಸಲರನ್ನು ಪೊಲೀಸರು ಹತ್ಯೆಗೈದಿದ್ದಾರೆ. ತಡಗೋನ್ ಗ್ರಾಮದಲ್ಲಿ ಗಾಡ್ಚಿರೋಲಿ ಪೊಲೀಸರು ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ 33 ಮಂದಿ ನಕ್ಸಲರು ಹತ್ಯೆಯಾಗಿದ್ದರು.
ಮುಂಬೈನಿಂದ ಸುಮಾರು 750 ಕಿಲೋ ಮೀಟರ್ಗಳಷ್ಟು ದೂರದಲ್ಲಿರುವ ಭಾಮ್ರಾಗಡ್ ಅರಣ್ಯ ಪ್ರದೇಶದಲ್ಲಿ ಮುಂಜಾನೆ ಪೊಲೀಸರು ಕಾರ್ಯಾಚರಣೆ ಪ್ರಾರಂಭಿಸಿದ್ದರು. ಪೊಲೀಸರು ನಡೆಸಿದ ಎನ್ಕೌಂಟರ್ನಲ್ಲಿ 33 ಜನ ನಕ್ಸಲರನ್ನು ಹತ್ಯೆಗೈದಿದ್ದು, ನಕ್ಸಲ್ ವಿರೋಧಿ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಘಟನಾ ಸ್ಥಳದಲ್ಲಿ 33 ನಕ್ಸಲರ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಜಿಪಿ ಶರದ್ ಶೆಲಾರ್ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಎನ್ಕೌಂಟರ್: 16 ನಕ್ಸಲರ ಹತ್ಯೆ
ಘಟನೆಗೆ ಸಂಬಂಧಿಸಿದಂತೆ ಎನ್ಕೌಂಟರ್ನಲ್ಲಿ ಭಾಗವಹಿಸಿದ ಸಿ-60 ತಂಡವನ್ನು ಪೊಲೀಸ್ ನಿರ್ದೇಶಕ ಸತೀಶ್ ಮಾಥುರ್ ಅಭಿನಂಧಿಸಿದ್ದು, ಇತ್ತೀಚಿನ ದಿನಗಳಲ್ಲಿ ನಕ್ಸಲರ ವಿರುದ್ಧ ನಡೆದ ಬಹುದೊಡ್ಡ ಕಾರ್ಯಾಚರಣೆ ಇದಾಗಿದೆ ಎಂದು ತಿಳಿಸಿದ್ದಾರೆ. ತಡಗೋನ್ ಗ್ರಾಮದಲ್ಲಿ ಗಾಡ್ಚಿರೋಲಿ ಪೊಲೀಸರು ನಡೆಸಿದ ನಕ್ಸಲ್ ವಿರೋಧಿ ಕಾರ್ಯಾಚರಣೆಯಾಗಿದೆ.
ಮಹಾರಾಷ್ಟ್ರದಲ್ಲಿ 14 ನಕ್ಸಲರ ಎನ್ಕೌಂಟರ್
ಏಪ್ರಿಲ್ 22ರಂದು ಮಹಾರಾಷ್ಟ್ರದ ಗಾಡ್ಚಿರೋಲಿಯಲ್ಲಿ ನಡೆದ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ 14 ಮಂದಿ ನಕ್ಸಲರನ್ನು ಹತ್ಯೆಮಾಡಲಾಗಿದ್ದು, ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ಆಸ್ಪತ್ರೆಗೆ ಕೊಂಡೊಯ್ಯುತ್ತಿರುವುದು.
ಸಿಆರ್ ಪಿಎಫ್ ಅನಿಲ್ ಕುಮಾರ್ ಅಂತ್ಯಕ್ರಿಯೆ
ಚತ್ತೀಸ್ ಘಡದ ಸುಕ್ಮಾ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ನಕ್ಸಲ್ ಧಾಳಿಯಲ್ಲಿ ಹತರಾದ ಸಿಆರ್ ಪಿಎಫ್ ಸಬ್ ಇನ್ ಸ್ಪೆಕ್ಟರ್ ಅನಿಲ್ ಕುಮಾರ್ ಮೌರ್ಯ ಅಂತ್ಯಕ್ರಿಯೆ ಅವರ ಸ್ವಗ್ರಾಮ ಅಮೇಥಿ ಜಿಲ್ಲೆಯ ಪೂರೆ ಖೋಜ್ವಾ ಗ್ರಾಮದಲ್ಲಿ ನಡೆಯಿತು. ಅಂತ್ಯಕ್ರಿಯೆ ವೇಳೆ ದುಃಖಿಸುತ್ತಿರುವ ಕುಟುಂಬ ಸದಸ್ಯರು.
ಬಿದಿರ ಮೇಲೆ ಜನರ ಸವಾರಿ
ಗುವಾಹಠಿಯಲ್ಲಿರುವ ಬ್ರಹ್ಮಪುತ್ರ ನದಿಯಲ್ಲಿ ಬಿದಿರು ಮಾರಾಟಗಾರರು ಒಂದು ಕಡೆಯಿಂದ ಮತ್ತೊಂದು ಕಡೆ ಮಾರಾಟಕ್ಕೆ ತೆರಳಲು ಬಿದಿರಿನ ಸಹಾಯ ಪಡೆದುಕೊಳ್ಳುತ್ತಿರುವುದು,
ಪದವಿ ಮುಗಿಸ ಸಂತಸದಲ್ಲಿರುವ ವಿದ್ಯಾರ್ಥಿಗಳು
ಮೀರತ್ ನ ಸುಭಾರ್ಥಿ ವಿಶ್ವವಿದ್ಯಾಲಯದಲ್ಲಿ ನಡೆದ ಪದವಿ ದಿನಾಚರಣೆಯಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ಕುಣಿದು ಸಂತಸ ಪಟ್ಟಿದ್ದು ಹೀಗೆ