ಮುದ್ರಾ ಲೋನ್ ದುರುಪಯೋಗದ ವಿರುದ್ಧ ಕ್ರಮ ಕೈಗೊಳ್ಳಿ: ಪಿಎನ್ ಬಿ
ಬರ್ಮೆರ್, ಮಾರ್ಚ್ 02: ರಾಜಸ್ಥಾನದ ಬರ್ಮೆರ್ ನಲ್ಲಿರುವ ಪಂಜಾಬ್ ನ್ಯಾಶ್ನಲ್ ಬ್ಯಾಂಕ್ ನ ಸಿಬ್ಬಂದಿಯೊಬ್ಬರು ಮುದ್ರಾ ಸಾಲವನ್ನು ದುರುಪಯೋಗಪಡಿಸಿಕೊಂಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಿಎನ್ ಬಿ ಹೇಳಿದೆ.
ತಮ್ಮ ಹುದ್ದೆಯನ್ನು ದುರುಪಯೋಗ ಪಡಿಸಿಕೊಂಡು, ಸುಮಾರು 65.25 ಲಕ್ಷ ರೂ. ಸಾಲ ನೀಡಿದ ಶಾಖಾ ವ್ಯವಸ್ಥಾಪಕ ಐ ಸಿ ಚುಡಾವತ್ ಅವರ ವಿರುದ್ಧ ಸಿಬಿಐ ಈಗಾಗಲೇ ಎರಡು ಎಫ್ ಐ ಆರ್ ಅನ್ನು ದಾಖಲಿಸಿದೆ.
ನೀರವ್ ಮೋದಿಗೆ ಸೇರಿದ 523 ಕೋಟಿ ಆಸ್ತಿ ಜಪ್ತಿ, ಕೌಂಟಿಂಗ್
ಅವರ ವಿರುದ್ಧ ವಂಚನೆ ಮತ್ತು ನಕಲಿ ಸಹಿ(ಫೋರ್ಜರಿ) ಆರೋಪವೂ ಇದ್ದು, ಈ ಎಲ್ಲವೂ ಸತ್ಯ ಎಂದು ಸಾಬೀತಾದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ವತಃ ಪಿಎನ್ ಬಿ ಹೇಳಿದೆ.
ಪಿಎನ್ ಬಿ ಮೂಲಕ 11,000 ಕೋಟಿ ರೂ. ವಂಚನೆ ಹಗರಣದಲ್ಲಿ ಕುಖ್ಯಾತಿ ಗಳಿಸಿದ್ದ ನೀರವ್ ಮೋದಿ ದೇಶ ಬಿಟ್ಟು ಹೋಗಿದ್ದು ಕಳೆದ ಹಲವು ದಿನಗಳಿಂದ ಸುದ್ದಿಯಲ್ಲಿದೆ. ನೀರವ್ ಮೋದಿ ಪ್ರಕರಣದಿಂದಾಗಿ ಪಿಎನ್ ಬಿಯಲ್ಲಾದ ಹಲವು ಅಕ್ರಮಗಳು ಬೆಳಕಿಗೆ ಬರುತ್ತಿವೆ.
ಯಾರೀತ? ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ
280 ಕೋಟಿ ರೂ. ವಂಚನೆ ಪ್ರಕರಣ, ನೀರವ್ ಮೋದಿ ಮೇಲೆ ಸಿಬಿಐ ಎಫ್ಐಆರ್