ಅಕ್ಟೋಬರ್ 21ರಂದು ಕೆಂಪುಕೋಟೆ ಮೇಲೆ ಧ್ವಜಾರೋಹಣ
ನವೆಹಲಿ, ಅಕ್ಟೋಬರ್ 19 : ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನವದೆಹಲಿಯ ಕೆಂಪುಕೋಟೆ ಮೇಲೆ ಅಕ್ಟೋಬರ್ 21ರಂದು ಧ್ವಜಾರೋಹಣ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಆಗಸ್ಟ್ 15ರ ಸ್ವತಂತ್ರ ದಿಚಾಚರಣೆ ಮತ್ತು ಜನವರಿ 26ರ ಗಣರಾಜ್ಯೋತ್ಸವದ ದಿನ ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಲಾಗುತ್ತದೆ. ಆದರೆ, ಈ ವರ್ಷ ಅಕ್ಟೋಬರ್ 21ರಂದು ಧ್ವಜಾರೋಹಣ ನಡೆಸಲಾಗುತ್ತಿದೆ.
ನೇತಾಜಿ ಜನ್ಮದಿನ: ಶೌರ್ಯದ ಪ್ರತಿರೂಪಕ್ಕೆ ಗಣ್ಯರ ನಮನ
ಅಕ್ಟೋಬರ್
21ರಂದು
ಸುಭಾಷ್
ಚಂದ್ರಬೋಸ್
ಅವರ
ಆಜಾದ್
ಹಿಂದ್
ಸರ್ಕಾರ
ಸ್ಥಾಪನೆಯಾದ
75
ವರ್ಷದ
ಸ್ಮರಣೆ
ಕಾರ್ಯಕ್ರಮ
ನಡೆಯಲಿದೆ.
ಅದಕ್ಕಾಗಿ
ಅಂದು
ಕೆಂಪುಕೋಟೆ
ಮೇಲೆ
ತ್ರಿವರ್ಣ
ಧ್ವಜವನ್ನು
ಹಾರಿಸಲಾಗುತ್ತದೆ.
ನೇತಾಜಿ ಸಾವಿನ ನಿಗೂಢತೆಗೆ ಇನ್ನೂ ಅಂತ್ಯ ಸಿಕ್ಕಿಲ್ಲ!
ಗುರುವಾರ ಬಿಜೆಪಿ ಕಾರ್ಯಕರ್ತರ ಜೊತೆ ಮಾಡಿನಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಾವು ಸಹ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ರ ವಾಹನ ಚಾಲಕ ನಿಧನ
ಇದೇ ವೇಳೆ ಮೋದಿ ಅವರು ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಪಟೇಲ್ ಸ್ಮಾರಕ ಮೇಡ್ ಇನ್ ಚೀನಾ ಎಂದು ಕಾಂಗ್ರೆಸ್ ಟೀಕಿಸಿತ್ತು. ಮೋದಿ ಅವರು, 'ಪಟೇಲ್ ಅವರ ಏಕತೆ ಪ್ರತಿಮೆ ದೇಶಕ್ಕೆ ಮಾದರಿ. ಪಟೇಲ್ ಅವರ ಕಾರ್ಯಕಗಳು ಇಂದಿನ ಯುವ ಜನತೆಗೆ ಸ್ಪೂರ್ತಿಯಾಗಿದೆ' ಎಂದು ತಿಳಿಸಿದ್ದಾರೆ.