ಬಸವಣ್ಣ ಪ್ರತಿಮೆ ಅನಾವರಣ ಆಹ್ವಾನ ಸ್ವೀಕರಿಸಿದ ಮೋದಿ
ನವದೆಹಲಿ, ಅ.26: ಲಂಡನ್ನಿನ ಥೇಮ್ಸ್ ನದಿ ತಟದಲ್ಲಿ 'ಜಗಜ್ಯೋತಿ ಬಸವೇಶ್ವರ' ಪ್ರತಿಮೆ ಅನಾವರಣಕ್ಕೆ ಮುಹೂರ್ತ ನಿಗದಿ ಮಾಡಲಾಗಿದೆ. ಮಾರ್ಚ್ ತಿಂಗಳಿನಲ್ಲಿ ಲ್ಯಾಂಬೆತ್ ನ ಮಾಜಿ ಮೇಯರ್ ಕನ್ನಡಿಗ ನೀರಜ್ ಪಾಟೀಲ್ನೀಡಿದ ಆಹ್ವಾನವನ್ನು ಸ್ವೀಕರಿಸುವುದಾಗಿ ಪ್ರಧಾನಿ ಮೋದಿ ಅವರು ಘೋಷಿಸಿದ್ದಾರೆ.
12ನೇ ಶತಮಾನದ ಮಾನವತಾವಾದಿ, ಕ್ರಾಂತಿಯೋಗ ಬಸವಣ್ಣ ಅವರ ಪ್ರತಿಮೆಯನ್ನು ಲಂಡನ್ನಿನಲ್ಲಿ ಸ್ಥಾಪಿಸಲು ಪ್ರಮುಖ ಕಾರಣಕರ್ತರಾದವರು ಲ್ಯಾಂಬೆತ್ನ ಮಾಜಿ ಮೇಯರ್ ನೀರಜ್ ಪಾಟೀಲ್.
ಮಾ.24ರಂದು
ಪ್ರಧಾನಿ
ಮೋದಿ
ಅವರನ್ನು
ಭೇಟಿಯಾಗಿದ್ದ
ನೀರಜ್
ಅವರು
ಬಸವಣ್ಣ
ಪ್ರತಿಮೆ
ಅನಾವರಣಕ್ಕೆ
ಆಹ್ವಾನ
ನೀಡಿದ್ದರು.
ಎಲ್ಲವೂ
ಅಂದುಕೊಂಡಂತೆ
ಆಗಿದ್ದರೆ
ಜೂನ್
ಜುಲೈ
ತಿಂಗಳಿನಲ್ಲೇ
ಕಾರ್ಯಕ್ರಮ
ನಡೆಯಬೇಕಿತ್ತು.
ಅದರೆ,
ಮೋದಿ
ಅವರು
ವಿದೇಶಿ
ಪ್ರವಾಸ
ನಿರತರಾಗಿದ್ದರಿಂದ
ಸಾಧ್ಯವಾಗಲಿಲ್ಲ.
ಈಗ ನವೆಂಬರ್ ಎರಡನೇ ವಾರದಲ್ಲಿ ಮೋದಿ ಅವರು ಬ್ರಿಟನ್ ಪ್ರವಾಸ ಕೈಗೊಳ್ಳಲಿದ್ದಾರೆ ಈ ಸಂದರ್ಭದಲ್ಲಿ ನ .14ರಂದು ಬಸವೇಶ್ವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.
ಥೇಮ್ಸ್ ನದಿ ತೀರದಲ್ಲಿ ಜಗಜ್ಯೋತಿ ಬಸವೇಶ್ವರರ 3.5 ಅಡಿ ಎತ್ತರದ ಪ್ರತಿಮೆ ಸ್ಥಾಪಿಸುವ ಸಲುವಾಗಿ 2010ರ ಜನವರಿ 19ರಂದು ಬಸವೇಶ್ವರ ಫೌಂಡೇಶನ್ ಸ್ಥಾಪಿಸಲಾಗಿತ್ತು.
ಪ್ರತಿಮೆ ನಿರ್ಮಾಣ ಸಂಬಂಧಿಸಿ 2.50 ಲಕ್ಷ ಪೌಂಡ್ಗಳನ್ನು ಬ್ರಿಟನ್ ಮತ್ತು ಸಾಗರೋತ್ತರ ರಾಷ್ಟ್ರಗಳಲ್ಲಿರುವ ಭಾರತೀಯ ಸಮುದಾಯದವರು ನೀಡಿದ್ದರು. ಅಂದಿನ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು 2010-11ರ ಬಜೆಟ್ನಲ್ಲಿ 3 ಕೋಟಿ ರು. ಅನುದಾನ ನೀಡಿತ್ತು.[ಲಂಡನ್ನಲ್ಲಿ ಬಸವಣ್ಣ ಪುತ್ಥಳಿ ಸ್ಥಾಪನೆಗೆ ಕೌನ್ಸಿಲ್ ಒಪ್ಪಿಗೆ]
ಮೂರ್ತಿ ಸ್ಥಾಪನೆ ಸಂಬಂಧ ಲ್ಯಾಂಬೆತ್ ಯೋಜನಾ ಸಮಿತಿಗೆ ಪ್ರಸ್ತಾವನೆಗೆ ಅನುಮತಿ ಸಿಕ್ಕ ಬಳಿಕ ವಾಕ್ಸ್ಹಾಲ್ ಸ್ಟ್ರಿಂಗ್ ಉದ್ಯಾನವನದ ಅಭಿವೃದ್ಧಿಗೆ ಈ ಮೊತ್ತವನ್ನು ಬಳಸಲಾಗಿತ್ತು. ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಭಾರತದ ಸಂಸತ್ತಿನಲ್ಲಿಯೂ ಬಸವಣ್ಣನವರ ಪ್ರತಿಮೆ ಅನಾವರಣಗೊಳಿಸಲಾಗಿದ್ದು ಇಲ್ಲಿ ಸ್ಮರಿಸಬಹುದು.